‘ಹೆಗಡೆ ನಗರದ ಬಳಿ ನಿತ್ಯವೂ ಕಸ ಸುರಿಯಲಾಗುತ್ತಿದೆ. ಅಂತೆಯೇ ಈ ಭಾಗದ ಇಂದಿರಾ ಕ್ಯಾಂಟೀನ್, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಚಿಕ್ಕಜಾಲ ಸಂಚಾರ ನಿಯಂತ್ರಣ ಪೊಲೀಸ್ ಕಚೇರಿ, ಸಾರಾಯಿಪಾಳ್ಯ ಬಸ್ ನಿಲ್ದಾಣ, ಜಕ್ಕೂರು ಥಣಿಸಂದ್ರ ರಸ್ತೆ, ರೈಲ್ವೆ ಸೇತುವೆ, ಅಶೋಕ ನಗರ ಬಸ್ ನಿಲ್ದಾಣ ಮತ್ತು ಎಲಿಮೆಂಟ್ಸ್ ಮಾಲ್ ಬಳಿ ನಿತ್ಯವೂ ಕಸ ಸುರಿಯಲಾಗುತ್ತಿರುವುದಕ್ಕೆ ಸಂಬಂಧಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.