ಸೂರ್ಯಗ್ರಹಣ, ಚಂದ್ರಗ್ರಹಣಗಳೆಲ್ಲ ಆಕಾಶಕಾಯಗಳ ಸಹಜ, ನೈಸರ್ಗಿಕ ಪ್ರಕ್ರಿಯೆಗಳು. ಇಂತಹ ವೈಜ್ಞಾನಿಕ ಸನ್ನಿವೇಶಗಳನ್ನು ಮೂಢನಂಬಿಕೆಗಳ ಜತೆ ಬೆಸೆದು ಜನರನ್ನು ಹಾದಿ ತಪ್ಪಿಸಲಾಗುತ್ತಿದೆ. ಸಂಪ್ರದಾಯದ ಹೆಸರಿನಲ್ಲಿ ಮೌಢ್ಯ ಬಿತ್ತಲಾಗುತ್ತಿದೆ ಎಂದು ಒಕ್ಕೂಟದ ಮುಖಂಡರಾದ ಟಿ.ನರಸಿಂಹಮೂರ್ತಿ, ಗೋಪಾಲ್, ಆರ್.ಎಂ.ಎನ್. ರಮೇಶ್, ಬಿ.ಟಿ. ಲಲಿತಾ ನಾಯಕ್, ಮಲ್ಲು ಕುಂಬಾರ, ನಾಗೇಶ್, ವೆಂಕಟೇಶ್ ದೂರಿದರು.