<p><strong>ಹೆಸರಘಟ್ಟ: </strong>ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.</p>.<p>ಮಾದಾವರ, ಸಿದ್ದನಹೊಸಹಳ್ಳಿ, ಮಾದನಾಯಕನಹಳ್ಳಿ ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆ ರಚಿಸಲಾಗಿತ್ತು. ಇದೀಗ ಶ್ರೀಕಂಠಪುರ, ಚಿಕ್ಕಬಿದರಕಲ್ಲು, ಲಕ್ಷ್ಮೀಪುರ ಗ್ರಾಮಗಳನ್ನು ಸೇರಿಸಿಕೊಂಡು ನಗರಸಭೆಯನ್ನಾಗಿ ಮಾಡಲಾಗಿದೆ.</p>.<p>ಹತ್ತು ವರ್ಷಗಳಿಂದ ಹಿಂದೆ ಈ ಆರು ಗ್ರಾಮಗಳು ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿದ್ದವು. ಅನುದಾನಗಳ ಕೊರತೆಯಿಂದ ಈ ಪ್ರದೇಶಗಳು ಹತ್ತು ವರ್ಷಗಳಿಂದ ಪ್ರಾಥಮಿಕ ಸೌಲಭ್ಯದಿಂದ ವಂಚಿತವಾಗಿದ್ದವು. ಕೃಷಿ ವಲಯದ ಭೂಮಿ ಅನಧಿಕೃತ ಬಡಾವಣೆಗಳಾಗಿದ್ದರಿಂದ ಪಂಚಾಯಿತಿಗೆ ಹೆಚ್ಚಿನ ವರಮಾನ ಇರಲಿಲ್ಲ. ಇರುವ ಅಲ್ಪ ಆದಾಯದಲ್ಲೇ ಮೂಲ ಸೌಲಭ್ಯವನ್ನು ಜನರಿಗೆ ನೀಡಬೇಕಿತ್ತು. ನಗರಸಭೆ ಅಸ್ತಿತ್ವಕ್ಕೆ ಬಂದರೆ ಮೂಲಸೌಕರ್ಯ ದೊರೆಯುವ ವಿಶ್ವಾಸ ಇಲ್ಲಿಯ ಜನರದ್ದು.</p>.<p>’ಆರು ಗ್ರಾಮಗಳು ನಾಗಾಲೋಟದಿಂದ ಬೆಳೆಯುತ್ತಿವೆ. ಅನೇಕ ಕಾರ್ಖಾನೆಗಳು, ಉದ್ದಿಮೆದಾರರು ಇಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಜನರಿಗೆ ಪ್ರಾಥಮಿಕ ಸೌಲಭ್ಯ ಮತ್ತು ಸರ್ಕಾರದ ಯೋಜನೆಗಳನ್ನು ತಲುಪಿಸಲು ನಗರ ಸಭೆ ಆಡಳಿತ ಇಲ್ಲಿ ಅವಶ್ಯಕತೆಯಾಗಿತ್ತು. ಹಾಗಾಗಿ ನಗರಸಭೆಯನ್ನು ಮಾಡಬೇಕಾಯಿತು‘ ಎನ್ನುತ್ತಾರೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್.</p>.<p>’ನಗರಸಭೆ ಅಸ್ತಿತ್ವಕ್ಕೆ ಬರುವ ವಿಷಯ ತಿಳಿದು ಸಂತಸವಾಗಿದೆ. ಸರ್ಕಾರದ ಅನುದಾನಗಳು ಹೆಚ್ಚಾಗಿ ಸಿಕ್ಕಿ ಇಲ್ಲಿಯ ಪ್ರದೇಶಗಳು ಅಭಿವೃದ್ದಿಗೊಳ್ಳಲಿವೆ. ಸಾಕಷ್ಟು ರಸ್ತೆಗಳು, ವಿದ್ಯುತ್ , ಕುಡಿಯುವ ನೀರನ್ನು ನಾವು ಪಡೆಯಬಹುದಾಗಿದೆ. ಸರ್ಕಾರದಿಂದ ಮನೆ ಪಡೆಯುವ ನಮ್ಮ ಕನಸು ನನಸಾಗಬಹುದು‘ ಎನ್ನುತ್ತಾರೆ ಶ್ರೀಕಂಠಪುರ ಗ್ರಾಮದ ನಿವಾಸಿ ಕಮಲಮ್ಮ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಸರಘಟ್ಟ: </strong>ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.</p>.<p>ಮಾದಾವರ, ಸಿದ್ದನಹೊಸಹಳ್ಳಿ, ಮಾದನಾಯಕನಹಳ್ಳಿ ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆ ರಚಿಸಲಾಗಿತ್ತು. ಇದೀಗ ಶ್ರೀಕಂಠಪುರ, ಚಿಕ್ಕಬಿದರಕಲ್ಲು, ಲಕ್ಷ್ಮೀಪುರ ಗ್ರಾಮಗಳನ್ನು ಸೇರಿಸಿಕೊಂಡು ನಗರಸಭೆಯನ್ನಾಗಿ ಮಾಡಲಾಗಿದೆ.</p>.<p>ಹತ್ತು ವರ್ಷಗಳಿಂದ ಹಿಂದೆ ಈ ಆರು ಗ್ರಾಮಗಳು ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿದ್ದವು. ಅನುದಾನಗಳ ಕೊರತೆಯಿಂದ ಈ ಪ್ರದೇಶಗಳು ಹತ್ತು ವರ್ಷಗಳಿಂದ ಪ್ರಾಥಮಿಕ ಸೌಲಭ್ಯದಿಂದ ವಂಚಿತವಾಗಿದ್ದವು. ಕೃಷಿ ವಲಯದ ಭೂಮಿ ಅನಧಿಕೃತ ಬಡಾವಣೆಗಳಾಗಿದ್ದರಿಂದ ಪಂಚಾಯಿತಿಗೆ ಹೆಚ್ಚಿನ ವರಮಾನ ಇರಲಿಲ್ಲ. ಇರುವ ಅಲ್ಪ ಆದಾಯದಲ್ಲೇ ಮೂಲ ಸೌಲಭ್ಯವನ್ನು ಜನರಿಗೆ ನೀಡಬೇಕಿತ್ತು. ನಗರಸಭೆ ಅಸ್ತಿತ್ವಕ್ಕೆ ಬಂದರೆ ಮೂಲಸೌಕರ್ಯ ದೊರೆಯುವ ವಿಶ್ವಾಸ ಇಲ್ಲಿಯ ಜನರದ್ದು.</p>.<p>’ಆರು ಗ್ರಾಮಗಳು ನಾಗಾಲೋಟದಿಂದ ಬೆಳೆಯುತ್ತಿವೆ. ಅನೇಕ ಕಾರ್ಖಾನೆಗಳು, ಉದ್ದಿಮೆದಾರರು ಇಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಜನರಿಗೆ ಪ್ರಾಥಮಿಕ ಸೌಲಭ್ಯ ಮತ್ತು ಸರ್ಕಾರದ ಯೋಜನೆಗಳನ್ನು ತಲುಪಿಸಲು ನಗರ ಸಭೆ ಆಡಳಿತ ಇಲ್ಲಿ ಅವಶ್ಯಕತೆಯಾಗಿತ್ತು. ಹಾಗಾಗಿ ನಗರಸಭೆಯನ್ನು ಮಾಡಬೇಕಾಯಿತು‘ ಎನ್ನುತ್ತಾರೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್.</p>.<p>’ನಗರಸಭೆ ಅಸ್ತಿತ್ವಕ್ಕೆ ಬರುವ ವಿಷಯ ತಿಳಿದು ಸಂತಸವಾಗಿದೆ. ಸರ್ಕಾರದ ಅನುದಾನಗಳು ಹೆಚ್ಚಾಗಿ ಸಿಕ್ಕಿ ಇಲ್ಲಿಯ ಪ್ರದೇಶಗಳು ಅಭಿವೃದ್ದಿಗೊಳ್ಳಲಿವೆ. ಸಾಕಷ್ಟು ರಸ್ತೆಗಳು, ವಿದ್ಯುತ್ , ಕುಡಿಯುವ ನೀರನ್ನು ನಾವು ಪಡೆಯಬಹುದಾಗಿದೆ. ಸರ್ಕಾರದಿಂದ ಮನೆ ಪಡೆಯುವ ನಮ್ಮ ಕನಸು ನನಸಾಗಬಹುದು‘ ಎನ್ನುತ್ತಾರೆ ಶ್ರೀಕಂಠಪುರ ಗ್ರಾಮದ ನಿವಾಸಿ ಕಮಲಮ್ಮ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>