<p><strong>ಬೆಂಗಳೂರು:</strong> ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿಗಳ ಮಾರಾಟ ಭರದಿಂದ ಸಾಗಿದೆ. ಮಾರುಕಟ್ಟೆಗೆ ಬಗೆಬಗೆಯ ಸೇವಂತಿಗೆ ಹೂಗಳು ಲಗ್ಗೆ ಇಟ್ಟಿವೆ.</p>.<p>ಗಣೇಶನ ಹಬ್ಬಕ್ಕೆ ಹೆಚ್ಚಾಗಿ ಸೇವಂತಿಗೆ ಹೂವನ್ನು ಬಳಸುತ್ತಾರೆ. ಹಳದಿ, ಬಿಳಿ ಹಾಗೂ ಕೇಸರಿ ಬಣ್ಣದ ಸೇವಂತಿಗೆ ಹೂಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ₹100ರಿಂದ ₹200ರವರೆಗೆ ಮಾರಾಟವಾಗುತ್ತಿದೆ. ಇದರಲ್ಲಿ ಬಿಳಿ ಸೇವಂತಿಗೆಯ ಬೆಲೆ ಅಧಿಕವಾಗಿದೆ.</p>.<p>ಸತತ ಮಳೆಯಿಂದನೆಲಕಚ್ಚಿದ್ದ ಹೂವು ಮತ್ತು ತರಕಾರಿ ದರಗಳು ಕೊಂಚ ಚೇತರಿಕೆ ಕಂಡುಕೊಂಡಿದ್ದು, ಮಂಗಳವಾರ ಕನಕಾಂಬರ ಕೆ.ಜಿಗೆ ₹600ರಂತೆ ಮಾರಾಟವಾಯಿತು. ಮಲ್ಲಿಗೆ ₹400, ಮಳ್ಳೆ ಹೂ ಬೆಲೆ ₹160 ಇತ್ತು.</p>.<p>ತರಕಾರಿ ಅಗ್ಗ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ನೂರರ ಗಡಿ ದಾಟಿಲ್ಲ. ತರಕಾರಿ ಬೆಲೆ ಸಾಮಾನ್ಯ ದರಕ್ಕಿಂತ ಕಡಿಮೆ ಆದ ಕಾರಣ ಖರೀದಿ ವೇಳೆಗ್ರಾಹಕರಲ್ಲಿ ಸಂತಸ ಮೂಡಿದೆ. ಬೆಳ್ಳುಳ್ಳಿ ಪ್ರತಿ ಕೆ.ಜಿಗೆ ₹100, ಬೀನ್ಸ್ ₹40, ಬೆಂಡೆಕಾಯಿ ₹40, ಹೀರೆಕಾಯಿ ₹70, ಹಾಗಲಕಾಯಿ ₹40, ಟೊಮೆಟೊ ₹20ರಂತೆ ಮಾರಾಟವಾಯಿತು.</p>.<p>ಹಣ್ಣುಗಳಲ್ಲಿ ದ್ರಾಕ್ಷಿ ದರ ಹೆಚ್ಚಾಗಿದ್ದು ಪ್ರತಿ ಕೆ.ಜಿಗೆ ₹200ರಷ್ಟಿದೆ. ಸೇಬು ₹80ರಿಂದ ₹100, ಸೀಬೆಕಾಯಿ ₹70, ದಾಳಿಂಬೆ ₹70, ಮೂಸಂಬಿ ₹50 ಬೆಲೆ ಇತ್ತು.</p>.<p>‘ಗಣೇಶನ ಹಬ್ಬ ಸಮೀಪಿಸುತ್ತಿರುವುದರಿಂದ ವ್ಯಾಪಾರ ಚೇತರಿಕೆಯಾಗಿದೆ. ಮಳೆ ನಿಂತ ಕಾರಣ ಕುಗ್ಗಿದ್ದ ತರಕಾರಿ ದರ ಕೊಂಚ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ವೆಂಕಟೇಶ್ ತಿಳಿಸಿದರು.</p>.<p>‘ಪ್ರತಿ ಹಬ್ಬಕ್ಕೂ ಕೆಲ ದಿನಗಳ ಮುನ್ನವೇ ತರಕಾರಿ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ. ಅದರಂತೆ ಗಣೇಶ ಚತುರ್ಥಿಗೆ ತರಕಾರಿ ಖರೀದಿಸಲು ಬಂದೆ. ಹೂಗಳ ದರಕ್ಕೆ ಹೋಲಿಸಿದರೆ ತರಕಾರಿ ಬೆಲೆ ಕಡಿಮೆ ಇದೆ’ ಎಂದು ಗ್ರಾಹಕಿ ನವಜಾಕ್ಷಿ ಸಂತಸ<br />ವ್ಯಕ್ತಪಡಿಸಿದರು.</p>.<p><strong>ಹೂವಿಗೆ ತಿಂಗಳಿಡೀ ಬೇಡಿಕೆ</strong></p>.<p>‘ಗಣೇಶನ ಹಬ್ಬ ಬೇರೆ ಹಬ್ಬಗಳಂತಲ್ಲ. ಹಬ್ಬ ಆರಂಭವಾದ ದಿನದಿಂದತಿಂಗಳಿಡೀ ಪೂಜೆ ಪುನಸ್ಕಾರಗಳು ನಡೆಯುತ್ತವೆ.</p>.<p>ಗಣೇಶನ ವಿಸರ್ಜನೆ ವೇಳೆ ಅಲಂಕಾರಕ್ಕಾಗಿ ಹೂಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಹೀಗಾಗಿ ಹೊರರಾಜ್ಯಗಳಿಂದಲೂ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಮುಂಬೈ, ಕೋಲ್ಕತ್ತ, ಹೈದರಾಬಾದ್, ಚೆನ್ನೈಗೆ ಹೂ<br />ರವಾನೆಯಾಗುತ್ತದೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಪೂರ್ತಿ ಹೂಗಳಿಗೆ ಬೇಡಿಕೆ ಇರುತ್ತದೆ’ ಎಂದು ಹೂವಿನ ವ್ಯಾಪಾರಿ ಮನೋಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿಗಳ ಮಾರಾಟ ಭರದಿಂದ ಸಾಗಿದೆ. ಮಾರುಕಟ್ಟೆಗೆ ಬಗೆಬಗೆಯ ಸೇವಂತಿಗೆ ಹೂಗಳು ಲಗ್ಗೆ ಇಟ್ಟಿವೆ.</p>.<p>ಗಣೇಶನ ಹಬ್ಬಕ್ಕೆ ಹೆಚ್ಚಾಗಿ ಸೇವಂತಿಗೆ ಹೂವನ್ನು ಬಳಸುತ್ತಾರೆ. ಹಳದಿ, ಬಿಳಿ ಹಾಗೂ ಕೇಸರಿ ಬಣ್ಣದ ಸೇವಂತಿಗೆ ಹೂಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ₹100ರಿಂದ ₹200ರವರೆಗೆ ಮಾರಾಟವಾಗುತ್ತಿದೆ. ಇದರಲ್ಲಿ ಬಿಳಿ ಸೇವಂತಿಗೆಯ ಬೆಲೆ ಅಧಿಕವಾಗಿದೆ.</p>.<p>ಸತತ ಮಳೆಯಿಂದನೆಲಕಚ್ಚಿದ್ದ ಹೂವು ಮತ್ತು ತರಕಾರಿ ದರಗಳು ಕೊಂಚ ಚೇತರಿಕೆ ಕಂಡುಕೊಂಡಿದ್ದು, ಮಂಗಳವಾರ ಕನಕಾಂಬರ ಕೆ.ಜಿಗೆ ₹600ರಂತೆ ಮಾರಾಟವಾಯಿತು. ಮಲ್ಲಿಗೆ ₹400, ಮಳ್ಳೆ ಹೂ ಬೆಲೆ ₹160 ಇತ್ತು.</p>.<p>ತರಕಾರಿ ಅಗ್ಗ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ನೂರರ ಗಡಿ ದಾಟಿಲ್ಲ. ತರಕಾರಿ ಬೆಲೆ ಸಾಮಾನ್ಯ ದರಕ್ಕಿಂತ ಕಡಿಮೆ ಆದ ಕಾರಣ ಖರೀದಿ ವೇಳೆಗ್ರಾಹಕರಲ್ಲಿ ಸಂತಸ ಮೂಡಿದೆ. ಬೆಳ್ಳುಳ್ಳಿ ಪ್ರತಿ ಕೆ.ಜಿಗೆ ₹100, ಬೀನ್ಸ್ ₹40, ಬೆಂಡೆಕಾಯಿ ₹40, ಹೀರೆಕಾಯಿ ₹70, ಹಾಗಲಕಾಯಿ ₹40, ಟೊಮೆಟೊ ₹20ರಂತೆ ಮಾರಾಟವಾಯಿತು.</p>.<p>ಹಣ್ಣುಗಳಲ್ಲಿ ದ್ರಾಕ್ಷಿ ದರ ಹೆಚ್ಚಾಗಿದ್ದು ಪ್ರತಿ ಕೆ.ಜಿಗೆ ₹200ರಷ್ಟಿದೆ. ಸೇಬು ₹80ರಿಂದ ₹100, ಸೀಬೆಕಾಯಿ ₹70, ದಾಳಿಂಬೆ ₹70, ಮೂಸಂಬಿ ₹50 ಬೆಲೆ ಇತ್ತು.</p>.<p>‘ಗಣೇಶನ ಹಬ್ಬ ಸಮೀಪಿಸುತ್ತಿರುವುದರಿಂದ ವ್ಯಾಪಾರ ಚೇತರಿಕೆಯಾಗಿದೆ. ಮಳೆ ನಿಂತ ಕಾರಣ ಕುಗ್ಗಿದ್ದ ತರಕಾರಿ ದರ ಕೊಂಚ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ವೆಂಕಟೇಶ್ ತಿಳಿಸಿದರು.</p>.<p>‘ಪ್ರತಿ ಹಬ್ಬಕ್ಕೂ ಕೆಲ ದಿನಗಳ ಮುನ್ನವೇ ತರಕಾರಿ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ. ಅದರಂತೆ ಗಣೇಶ ಚತುರ್ಥಿಗೆ ತರಕಾರಿ ಖರೀದಿಸಲು ಬಂದೆ. ಹೂಗಳ ದರಕ್ಕೆ ಹೋಲಿಸಿದರೆ ತರಕಾರಿ ಬೆಲೆ ಕಡಿಮೆ ಇದೆ’ ಎಂದು ಗ್ರಾಹಕಿ ನವಜಾಕ್ಷಿ ಸಂತಸ<br />ವ್ಯಕ್ತಪಡಿಸಿದರು.</p>.<p><strong>ಹೂವಿಗೆ ತಿಂಗಳಿಡೀ ಬೇಡಿಕೆ</strong></p>.<p>‘ಗಣೇಶನ ಹಬ್ಬ ಬೇರೆ ಹಬ್ಬಗಳಂತಲ್ಲ. ಹಬ್ಬ ಆರಂಭವಾದ ದಿನದಿಂದತಿಂಗಳಿಡೀ ಪೂಜೆ ಪುನಸ್ಕಾರಗಳು ನಡೆಯುತ್ತವೆ.</p>.<p>ಗಣೇಶನ ವಿಸರ್ಜನೆ ವೇಳೆ ಅಲಂಕಾರಕ್ಕಾಗಿ ಹೂಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಹೀಗಾಗಿ ಹೊರರಾಜ್ಯಗಳಿಂದಲೂ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಮುಂಬೈ, ಕೋಲ್ಕತ್ತ, ಹೈದರಾಬಾದ್, ಚೆನ್ನೈಗೆ ಹೂ<br />ರವಾನೆಯಾಗುತ್ತದೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಪೂರ್ತಿ ಹೂಗಳಿಗೆ ಬೇಡಿಕೆ ಇರುತ್ತದೆ’ ಎಂದು ಹೂವಿನ ವ್ಯಾಪಾರಿ ಮನೋಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>