<p><strong>ಬೆಂಗಳೂರು: </strong>ಇತ್ತೀಚೆಗೆ ಸುರಿದ ಮುಂಗಾರಿನಿಂದಾಗಿ ಕೆಲ ತರಕಾರಿಗಳು ಹಾಗೂ ಸೊಪ್ಪಿನ ದರಗಳು ದಿಢೀರ್ ಏರಿಕೆ ಕಂಡಿವೆ. ‘ಮಳೆ ಬಿಡುವು ನೀಡಿದರೆ ದರಗಳು ಸ್ಥಿರವಾಗಿ ಇರಲಿದ್ದು, ಒಂದು ವೇಳೆ ಭಾರಿ ಮಳೆ ಮುಂದುವರಿದರೆ ದರ ಮತ್ತಷ್ಟು ಏರಲಿದೆ’ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.</p>.<p>ಕೆ.ಜಿ.ಗೆ ₹40ರಂತೆ ಮಾರಾಟವಾಗುತ್ತಿದ್ದ ಕ್ಯಾರೆಟ್ ದರ ಕಳೆದ ಎರಡು ವಾರಗಳಿಂದ ಏರಿಕೆ ಕಂಡಿದ್ದು, ಸದ್ಯ ಕೆ.ಜಿ.ಗೆ ₹80ರಂತೆ ಮಾರಾಟ ಆಗುತ್ತಿದೆ. ಬದನೆ, ಬೆಂಡೆ, ಈರುಳ್ಳಿ ಹಾಗೂ ಹೂಕೋಸು ದರಗಳು ತುಸು ಏರಿವೆ. ಬೀನ್ಸ್,ಎಲೆಕೋಸು, ಮೂಲಂಗಿ, ಟೊಮೆಟೊ ಸೇರಿದಂತೆ ಹಲವು ತರಕಾರಿಗಳ ದರ ಕಡಿಮೆ ಇದೆ. ಹಣ್ಣಿನ ದರಗಳು ಅಷ್ಟೇನೂ ಏರಿಲ್ಲ.</p>.<p>‘ಜುಲೈ ಮೊದಲ ವಾರದಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಇದರಿಂದ ತೋಟದಲ್ಲಿದ್ದ ತರಕಾರಿ ಮತ್ತು ಸೊಪ್ಪಿಗೆ ಹಾನಿಯಾಗಿದೆ. ಹಾಗಾಗಿ, ಎರಡು ವಾರಗಳಿಂದ ದರ ದಿಢೀರ್ ಏರಿದೆ’ ಎಂದು ತರಕಾರಿ ಮತ್ತು ಸೊಪ್ಪಿನ ವ್ಯಾಪಾರಿ ಕುಮಾರ್ ತಿಳಿಸಿದರು.</p>.<p>‘ಈ ವಾರದಲ್ಲಿ ಆಷಾಢ ಮುಗಿಯಲಿದೆ. ಬಳಿಕ ಸಾಲು ಸಾಲು ಹಬ್ಬಗಳು ಬರಲಿದ್ದು, ಆ ಸಮಯದಲ್ಲಿ ದರಗಳು ಸಾಮಾನ್ಯವಾಗಿ ಹೆಚ್ಚಳವಾಗುತ್ತವೆ. ಈಗ ಮಳೆ ಕಡಿಮೆ ಆಗಿರುವುದರಿಂದ ಮುಂದಿನ ವಾರದಲ್ಲಿ ದರಗಳು ಕಡಿಮೆಯಾದರೂ ಆಗಬಹುದು’ ಎಂದು ವಿವರಿಸಿದರು.</p>.<p class="Subhead">ಸೊಪ್ಪುಗಳು ದುಬಾರಿ: ಪ್ರತಿ ಕಟ್ಟು ಸೊಪ್ಪಿನ ದರ ₹10 ಆಸುಪಾಸಿನಲ್ಲಿತ್ತು. ಈಗ ಎಲ್ಲ ಸೊಪ್ಪುಗಳ ದರಗಳೂ ಹೆಚ್ಚಾಗಿವೆ. ಕೊತ್ತಂಬರಿ, ಸಬ್ಬಕ್ಕಿ ಹಾಗೂ ಮೆಂತ್ಯೆ ಸೊಪ್ಪು ಪ್ರತಿ ಕಟ್ಟಿಗೆ ಚಿಲ್ಲರೆ ದರ ₹20ರಷ್ಟಿದೆ. ಪಾಲಕ್ ಮತ್ತು ದಂಟಿನ ಸೊಪ್ಪಿನ ದರಗಳೂ ದುಪ್ಪಟ್ಟಾಗಿದೆ.</p>.<p>‘ಧಾರಾಕಾರ ಮಳೆಗೆ ಸೊಪ್ಪು ಬೇಗ ಹಾಳಾಗುತ್ತದೆ. ಹಾಗಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದ ಸೊಪ್ಪು ಪೂರೈಕೆ ಆಗುತ್ತಿದೆ. ಹಾಗಾಗಿ, ಮಳೆಗಾಲದಲ್ಲಿ ಸೊಪ್ಪಿಗೆ ಬೇಡಿಕೆ ಹೆಚ್ಚು. ಇತ್ತೀಚಿನ ಮಳೆಯ ಕಾರಣದಿಂದ ಸೊಪ್ಪಿನ ದರಗಳು ಎರಡು ಪಟ್ಟು ಹೆಚ್ಚಾಗಿವೆ’ ಎಂದು ಸೊಪ್ಪಿನ ವ್ಯಾಪಾರಿ ಅಮರೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇತ್ತೀಚೆಗೆ ಸುರಿದ ಮುಂಗಾರಿನಿಂದಾಗಿ ಕೆಲ ತರಕಾರಿಗಳು ಹಾಗೂ ಸೊಪ್ಪಿನ ದರಗಳು ದಿಢೀರ್ ಏರಿಕೆ ಕಂಡಿವೆ. ‘ಮಳೆ ಬಿಡುವು ನೀಡಿದರೆ ದರಗಳು ಸ್ಥಿರವಾಗಿ ಇರಲಿದ್ದು, ಒಂದು ವೇಳೆ ಭಾರಿ ಮಳೆ ಮುಂದುವರಿದರೆ ದರ ಮತ್ತಷ್ಟು ಏರಲಿದೆ’ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.</p>.<p>ಕೆ.ಜಿ.ಗೆ ₹40ರಂತೆ ಮಾರಾಟವಾಗುತ್ತಿದ್ದ ಕ್ಯಾರೆಟ್ ದರ ಕಳೆದ ಎರಡು ವಾರಗಳಿಂದ ಏರಿಕೆ ಕಂಡಿದ್ದು, ಸದ್ಯ ಕೆ.ಜಿ.ಗೆ ₹80ರಂತೆ ಮಾರಾಟ ಆಗುತ್ತಿದೆ. ಬದನೆ, ಬೆಂಡೆ, ಈರುಳ್ಳಿ ಹಾಗೂ ಹೂಕೋಸು ದರಗಳು ತುಸು ಏರಿವೆ. ಬೀನ್ಸ್,ಎಲೆಕೋಸು, ಮೂಲಂಗಿ, ಟೊಮೆಟೊ ಸೇರಿದಂತೆ ಹಲವು ತರಕಾರಿಗಳ ದರ ಕಡಿಮೆ ಇದೆ. ಹಣ್ಣಿನ ದರಗಳು ಅಷ್ಟೇನೂ ಏರಿಲ್ಲ.</p>.<p>‘ಜುಲೈ ಮೊದಲ ವಾರದಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಇದರಿಂದ ತೋಟದಲ್ಲಿದ್ದ ತರಕಾರಿ ಮತ್ತು ಸೊಪ್ಪಿಗೆ ಹಾನಿಯಾಗಿದೆ. ಹಾಗಾಗಿ, ಎರಡು ವಾರಗಳಿಂದ ದರ ದಿಢೀರ್ ಏರಿದೆ’ ಎಂದು ತರಕಾರಿ ಮತ್ತು ಸೊಪ್ಪಿನ ವ್ಯಾಪಾರಿ ಕುಮಾರ್ ತಿಳಿಸಿದರು.</p>.<p>‘ಈ ವಾರದಲ್ಲಿ ಆಷಾಢ ಮುಗಿಯಲಿದೆ. ಬಳಿಕ ಸಾಲು ಸಾಲು ಹಬ್ಬಗಳು ಬರಲಿದ್ದು, ಆ ಸಮಯದಲ್ಲಿ ದರಗಳು ಸಾಮಾನ್ಯವಾಗಿ ಹೆಚ್ಚಳವಾಗುತ್ತವೆ. ಈಗ ಮಳೆ ಕಡಿಮೆ ಆಗಿರುವುದರಿಂದ ಮುಂದಿನ ವಾರದಲ್ಲಿ ದರಗಳು ಕಡಿಮೆಯಾದರೂ ಆಗಬಹುದು’ ಎಂದು ವಿವರಿಸಿದರು.</p>.<p class="Subhead">ಸೊಪ್ಪುಗಳು ದುಬಾರಿ: ಪ್ರತಿ ಕಟ್ಟು ಸೊಪ್ಪಿನ ದರ ₹10 ಆಸುಪಾಸಿನಲ್ಲಿತ್ತು. ಈಗ ಎಲ್ಲ ಸೊಪ್ಪುಗಳ ದರಗಳೂ ಹೆಚ್ಚಾಗಿವೆ. ಕೊತ್ತಂಬರಿ, ಸಬ್ಬಕ್ಕಿ ಹಾಗೂ ಮೆಂತ್ಯೆ ಸೊಪ್ಪು ಪ್ರತಿ ಕಟ್ಟಿಗೆ ಚಿಲ್ಲರೆ ದರ ₹20ರಷ್ಟಿದೆ. ಪಾಲಕ್ ಮತ್ತು ದಂಟಿನ ಸೊಪ್ಪಿನ ದರಗಳೂ ದುಪ್ಪಟ್ಟಾಗಿದೆ.</p>.<p>‘ಧಾರಾಕಾರ ಮಳೆಗೆ ಸೊಪ್ಪು ಬೇಗ ಹಾಳಾಗುತ್ತದೆ. ಹಾಗಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದ ಸೊಪ್ಪು ಪೂರೈಕೆ ಆಗುತ್ತಿದೆ. ಹಾಗಾಗಿ, ಮಳೆಗಾಲದಲ್ಲಿ ಸೊಪ್ಪಿಗೆ ಬೇಡಿಕೆ ಹೆಚ್ಚು. ಇತ್ತೀಚಿನ ಮಳೆಯ ಕಾರಣದಿಂದ ಸೊಪ್ಪಿನ ದರಗಳು ಎರಡು ಪಟ್ಟು ಹೆಚ್ಚಾಗಿವೆ’ ಎಂದು ಸೊಪ್ಪಿನ ವ್ಯಾಪಾರಿ ಅಮರೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>