ಪುರಭವನ, ರವೀಂದ್ರ ಕಲಾಕ್ಷೇತ್ರ, ಕನ್ನಡಭವನಕ್ಕೆ ಬಂದವರೂ ಇತ್ತ ಕಣ್ಣು ಹಾಯಿಸಿ ಕಲಾಕೃತಿಗಳನ್ನು ಆಸ್ವಾದಿಸಿದರು. ಕಲಾವಿದರ ಕೈಯಲ್ಲಿ ನಾಡಿನ ಇತಿಹಾಸ, ಪ್ರಕೃತಿಯ ರಮಣೀಯತೆ, ಸಂಸ್ಕೃತಿ, ಗ್ರಾಮೀಣ ಸೊಗಡಿನ ಕಲಾಕೃತಿಗಳು ಅನಾವರಣಗೊಂಡಿದ್ದವು. ಬೆಳಿಗ್ಗೆ 11ರಿಂದ ಸಂಜೆ 5ರ ತನಕ ಪ್ರದರ್ಶನ, ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.