ಸಭೆಯಲ್ಲಿ ಜಿಬಿಡಿಎ ಭೂ ಸ್ವಾಧೀನ ವಿರುದ್ಧದ ಹೋರಾಟಕ್ಕೆ ಕೈ ಎತ್ತಿ ಬೆಂಬಲ ಸೂಚಿಸಿದ ಗ್ರಾಮಸ್ಥರು
ನಮ್ಮ ಹೋರಾಟದ ದಿಕ್ಕು ತಪ್ಪಿಸಲು ರೈತರನ್ನು ಎತ್ತಿ ಕಟ್ಟುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಾರೆ. ಅದರ ಬಗ್ಗೆ ಎಚ್ವರಿಕೆ ವಹಿಸೋಣ. ಮೋಸ ಮಾಡುವವರನ್ನು ಹಿಮ್ಮೆಟ್ಟಿಸೋಣ. ಹೋರಾಟಕ್ಕೆ ಇಡೀ ಬಿಡದಿ ಹೋಬಳಿಯ ಜನ ಕೈ ಜೋಡಿಸಬೇಕು
–ಇಟ್ಟಮಡು ಗೋಪಾಲ್ ಅಧ್ಯಕ್ಷ ಜಿಲ್ಲಾ ಕೃಷಿಕ ಸಮಾಜ
ಹೋರಾಟದಲ್ಲಿ ಒಗ್ಗಟ್ಟಿದ್ದರಷ್ಟೆ ನಮ್ಮ ಭೂಮಿ ಉಳಿಯುತ್ತದೆ. ನಮ್ಮ ನಡುವೆ ಒಡಕುಂಟಾದರೆ ಭೂಮಿ ಕೈ ತಪ್ಪಲಿದೆ. ಕಡೆಗೆ ನಾವು ಬೀದಿ ಪಾಲಾಗಲಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ತೋರಿಸಿರುವ ಹಾದಿಯಲ್ಲಿ ಹೋರಾಡಿ ಭೂಮಿ ಉಳಿಸಿಕೊಳ್ಳೋಣ