ತಡ ರಾತ್ರಿ ಈ ಸಮಸ್ಯೆ ದಿಡೀರ್ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರ ಟಿಕೆಟ್ ಹಾಗೂ ಕಾರ್ಡ್ ವಿವರ ಪಡೆಯುವುದಕ್ಕೂ ನಿಲ್ದಾಣಗಳಲ್ಲಿ ಸಿಬ್ಬಂದಿ ಕೊರತೆ ಇತ್ತು. ‘ಮೆಟ್ರೊ ರೈಲು ನಂಬಿಕೊಂಡು ಬಸ್ ತಪ್ಪಿಸಿಕೊಳ್ಳಬೇಕಾಯಿತು. ನಮಗೆ ಬಸ್ ಟಿಜೆಟ್ ದರವನ್ನು ಹಿಂಪಾವತಿ ಮಾಡುವವರು ಯಾರು. ನಾನು ಮಂಗಳೂರಿಗೆ ಹೋಗಬೇಕಿದೆ. ಬಸ್ ಸಿಗುತ್ತದೆಯೊ ಇಲ್ಲವೋ ಗೊತ್ತಿಲ್ಲ’ ಎಂದು ಪ್ರಯಾಣಿಕ ನಾಗರಾಜ್ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.