ಬೆಂಗಳೂರು: ಸುಮಾರು 5 ತಿಂಗಳ ಬಳಿಕ ಸಂಚಾರ ಆರಂಭಿಸಿರುವ ಮೆಟ್ರೊ ರೈಲಿನಲ್ಲಿ ಸೋಮವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಪ್ರಯಾಣಿಸಿದರು.
ವಿಧಾನಸೌಧ ನಿಲ್ದಾಣದಿಂದ ಕೆಂಪೇಗೌಡ ನಿಲ್ದಾಣದವರೆಗೆ (ಮೆಜೆಸ್ಟಿಕ್) ಸಂಚರಿಸಿದರು. ಈ ವೇಳೆ, ಪ್ರಯಾಣಿಕರ ಸುರಕ್ಷತೆಗೆ ಬಿಎಂಆರ್ಸಿಎಲ್ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.
'ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಭಯ ಬೇಡ, ಆದರೆ ಎಚ್ಚರಿಕೆ ಅಗತ್ಯ. ಎಲ್ಲ ಪ್ರಯಾಣಿಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು' ಎಂದು ಶ್ರೀರಾಮುಲು ಹೇಳಿದರು.