ವಿಜಯನಗರದಲ್ಲಿ ವೈದ್ಯರೊಬ್ಬರ ಐಫೋನ್ ಕಸಿದು ಆರೋಪಿಗಳು ಮಂಗಳವಾರ ಪರಾರಿಯಾಗಿದ್ದರು. ಈ ಸಂಬಂಧ ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳು ಜ್ಞಾನಭಾರತಿ, ಕೆ.ಪಿ.ಅಗ್ರಹಾರ ಹಾಗೂ ನಗರದ ವಿವಿಧ ಭಾಗಗಳಲ್ಲಿ ಸುಲಿಗೆ, ಕಳವು ಮಾಡಿ, ₹8 ಲಕ್ಷ ಮೌಲ್ಯದ ವಸ್ತುಗಳನ್ನು ವಾಲ್ಮೀಕಿನಗರದ ಸಲ್ಮಾನ್ಗೆ ನೀಡಿದ್ದರು ಎನ್ನಲಾಗಿದೆ.
ಕಳವು ಮಾಡಿದ್ದ 4 ದ್ವಿಚಕ್ರ ವಾಹನಗಳು ಹಾಗೂ ಚಾಮರಾಜಪೇಟೆಯ ಇರ್ಫಾನ್ಗೆ ನೀಡಿದ್ದ 100 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.