<p><strong>ಬೆಂಗಳೂರು: </strong>ವಿಧಾನಸೌಧ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಂಚಿ ಉರವ್ (36) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಪತಿ ಫೂಲಚಂದ್ ಉರವ್ (40) ಅವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಮೃತ ಸಂಚಿ, ಪಶ್ಚಿಮ ಬಂಗಾಳದವರು. ಕೆಲಸ ಹುಡುಕಿಕೊಂಡು ಪತಿ ಫೂಲಚಂದ್ ಜೊತೆ ನಗರಕ್ಕೆ ಬಂದಿದ್ದರು. ವಿಧಾನಸೌಧ ಸಮೀಪದ ಹೋಟೆಲೊಂದರ ಬಳಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಅಲ್ಲಿಯೇ ದಂಪತಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಕಟ್ಟಡದ ನೆಲಮಹಡಿಯಲ್ಲಿ ಕೊಠಡಿಗಳಿದ್ದು, ಅಲ್ಲಿಯೇ ದಂಪತಿ ಹಾಗೂ ಇತರೆ ಕಾರ್ಮಿಕರು ಉಳಿದುಕೊಂಡಿದ್ದರು. ಅಡುಗೆ ಹಾಗೂ ಇತರೆ ವಿಚಾರಗಳಿಗಾಗಿ ದಂಪತಿ ನಿತ್ಯವೂ ಜಗಳ ಮಾಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ್ದ ಅಕ್ಕ–ಪಕ್ಕದ ಕೊಠಡಿಗಳ ಕಾರ್ಮಿಕರು, ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದರು.’</p>.<p>‘ದಂಪತಿಗೆ ಬುದ್ಧಿವಾದ ಹೇಳಿದ್ದ ಮೇಲ್ವಿಚಾರಕ, ‘ಜಗಳ ಮಾಡುವುದಾದರೆ, ಕೆಲಸ ಬಿಟ್ಟು ಹೋಗಿ’ ಎಂದಿದ್ದರು. ಜಗಳ ಮಾಡುವುದಿಲ್ಲವೆಂದು ದಂಪತಿ ಭರವಸೆ ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.</p>.<p class="Subhead">ಎರಡು ದಿನ ಕೊಠಡಿಯಲ್ಲಿದ್ದ ಮೃತದೇಹ: ‘ಮಾರ್ಚ್ 26ರಂದು ಸಂಚಿ ಜೊತೆ ಜಗಳ ತೆಗೆದಿದ್ದ ಫೂಲಚಂದ್, ಮುಖ ಹಾಗೂ ತಲೆಗೆ ಹೊಡೆದು ಕೊಲೆ ಮಾಡಿದ್ದರು. ಮೃತದೇಹವನ್ನು ಕೊಠಡಿಯಲ್ಲಿ ಇರಿಸಿ ಪರಾರಿಯಾಗಿದ್ದರು. ಎರಡು ದಿನ ಕೊಠಡಿಯಲ್ಲೇ ಮೃತದೇಹವಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ದಂಪತಿ ಕೆಲಸಕ್ಕೆ ಬಾರದಿದ್ದರಿಂದ ಅನುಮಾನಗೊಂಡಿದ್ದ ಮೇಲ್ವಿಚಾರಕ, ಮಾರ್ಚ್ 28ರಂದು ಕೊಠಡಿಗೆ ಹೋಗಿ ಪರಿಶೀಲಿಸಿದಾಗಲೇ ಮೃತದೇಹ ಕಂಡಿತ್ತು. ಫೂಲಚಂದ್ ಮೇಲೆ ಅನುಮಾನ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರು. ತಮ್ಮೂರಿಗೆ ಹೊರಡಲು ಸಜ್ಜಾಗಿದ್ದ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಿಧಾನಸೌಧ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಂಚಿ ಉರವ್ (36) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಪತಿ ಫೂಲಚಂದ್ ಉರವ್ (40) ಅವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಮೃತ ಸಂಚಿ, ಪಶ್ಚಿಮ ಬಂಗಾಳದವರು. ಕೆಲಸ ಹುಡುಕಿಕೊಂಡು ಪತಿ ಫೂಲಚಂದ್ ಜೊತೆ ನಗರಕ್ಕೆ ಬಂದಿದ್ದರು. ವಿಧಾನಸೌಧ ಸಮೀಪದ ಹೋಟೆಲೊಂದರ ಬಳಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಅಲ್ಲಿಯೇ ದಂಪತಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಕಟ್ಟಡದ ನೆಲಮಹಡಿಯಲ್ಲಿ ಕೊಠಡಿಗಳಿದ್ದು, ಅಲ್ಲಿಯೇ ದಂಪತಿ ಹಾಗೂ ಇತರೆ ಕಾರ್ಮಿಕರು ಉಳಿದುಕೊಂಡಿದ್ದರು. ಅಡುಗೆ ಹಾಗೂ ಇತರೆ ವಿಚಾರಗಳಿಗಾಗಿ ದಂಪತಿ ನಿತ್ಯವೂ ಜಗಳ ಮಾಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ್ದ ಅಕ್ಕ–ಪಕ್ಕದ ಕೊಠಡಿಗಳ ಕಾರ್ಮಿಕರು, ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದರು.’</p>.<p>‘ದಂಪತಿಗೆ ಬುದ್ಧಿವಾದ ಹೇಳಿದ್ದ ಮೇಲ್ವಿಚಾರಕ, ‘ಜಗಳ ಮಾಡುವುದಾದರೆ, ಕೆಲಸ ಬಿಟ್ಟು ಹೋಗಿ’ ಎಂದಿದ್ದರು. ಜಗಳ ಮಾಡುವುದಿಲ್ಲವೆಂದು ದಂಪತಿ ಭರವಸೆ ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.</p>.<p class="Subhead">ಎರಡು ದಿನ ಕೊಠಡಿಯಲ್ಲಿದ್ದ ಮೃತದೇಹ: ‘ಮಾರ್ಚ್ 26ರಂದು ಸಂಚಿ ಜೊತೆ ಜಗಳ ತೆಗೆದಿದ್ದ ಫೂಲಚಂದ್, ಮುಖ ಹಾಗೂ ತಲೆಗೆ ಹೊಡೆದು ಕೊಲೆ ಮಾಡಿದ್ದರು. ಮೃತದೇಹವನ್ನು ಕೊಠಡಿಯಲ್ಲಿ ಇರಿಸಿ ಪರಾರಿಯಾಗಿದ್ದರು. ಎರಡು ದಿನ ಕೊಠಡಿಯಲ್ಲೇ ಮೃತದೇಹವಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ದಂಪತಿ ಕೆಲಸಕ್ಕೆ ಬಾರದಿದ್ದರಿಂದ ಅನುಮಾನಗೊಂಡಿದ್ದ ಮೇಲ್ವಿಚಾರಕ, ಮಾರ್ಚ್ 28ರಂದು ಕೊಠಡಿಗೆ ಹೋಗಿ ಪರಿಶೀಲಿಸಿದಾಗಲೇ ಮೃತದೇಹ ಕಂಡಿತ್ತು. ಫೂಲಚಂದ್ ಮೇಲೆ ಅನುಮಾನ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರು. ತಮ್ಮೂರಿಗೆ ಹೊರಡಲು ಸಜ್ಜಾಗಿದ್ದ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>