ಅದಕ್ಕೆ ಮಹೇಶ, ‘ಇಂಜೆಕ್ಷನ್ ಕೊಟ್ಟು ಮಗುವನ್ನು ಸಾಯಿಸುವುದಾಗಿ ಹೇಳಿದ್ದ. ಈ ಕೆಲಸಕ್ಕೆ ₹ 50 ಸಾವಿರ ಕೊಡಬೇಕು’ ಎಂದು ಕೇಳಿದ್ದ. ಕೆಲಸ ಮುಗಿಸಿದ ಬಳಿಕ ಹಣ ಕೊಡುವುದಾಗಿ ಜಯಪ್ಪ ಹೇಳಿದ್ದ. ಅದಕ್ಕೆ ಒಪ್ಪಿದ್ದ ಮಹೇಶ, ಜಯಪ್ಪನ ಮನೆಯಲ್ಲೇ ಬಸವರಾಜನನ್ನು ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಜಯಪ್ಪ ಗೊರಗುಂಟೆಪಾಳ್ಯದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.