ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಅವರು ‘ದಲಿತರ ಏಳಿಗೆಗೆ ಸವರ್ಣೀಯರ ಕೊಡುಗೆ’ ಎಂಬ ವಿಷಯದ ಬಗ್ಗೆ ಮಾತನಾಡಿ, ‘ಕುದ್ಮಲ್ ರಂಗ ರಾವ್,ತಲಕಾಡು ರಂಗೇಗೌಡ,ಕಾಕಾ ಕಾರಖಾನೀಸ್ ಸೇರಿದಂತೆ ಹಲವರು ದೀನ ದಲಿತರ ಏಳ್ಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಇಂತಹವರು ತಮ್ಮ ವರ್ಗದವರ ವಿರೋಧಗಳನ್ನೂ ಲೆಕ್ಕಿಸದೆ ದಲಿತೋದ್ದಾರಕ್ಕೆ ಶ್ರಮಿಸಿದರು’ ಎಂದರು.