<p><strong>ಬೆಂಗಳೂರು:</strong>‘ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನ, ಧರ್ಮ, ವಿಜ್ಞಾನ, ವೈಚಾರಿಕೆ ಚಿಂತನೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ಇಂತಹ ಬೆಳವಣಿಗೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸದಿದ್ದರೆ ಯಾರಿಗೂ ಉಳಿಗಾಲವಿಲ್ಲ’ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.</p>.<p>‘ನಾವು ಭಾರತೀಯರು’ ಸಂಘಟನೆಯು ಭಾನುವಾರ ಆನ್ಲೈನ್ನಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾಗ, ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ವಿರೋಧಪಕ್ಷಗಳು ಒಗ್ಗೂಡಿದ್ದವು. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ದಾಳಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಎಲ್ಲ ವಿರೋಧ ಪಕ್ಷಗಳು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಸಮಾನ ಮನಸ್ಕರು ಒಗ್ಗೂಡಿ ಹೋರಾಡಬೇಕಾದ ಅಗತ್ಯವಿದೆ’ ಎಂದರು.</p>.<p>‘ನ್ಯಾಯಾಂಗವನ್ನು ದುರ್ಬಲಗೊಳಿಸುವ, ಶಿಕ್ಷಣ ರಂಗವನ್ನು ದುರ್ಬಳಕೆ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಆರ್ಎಸ್ಎಸ್ ಚಿಂತನೆ ಹೊಂದಿರುವವರನ್ನು ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಾಯಕನನ್ನು ಪ್ರಶ್ನಿಸಬಾರದು, ಅವನು ಹೇಳಿದಂತೆಯೇ ಕೇಳಬೇಕು ಎಂಬ ಆರ್ಎಸ್ಎಸ್ನ ಸಿದ್ಧಾಂತವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸ ನಡೆಯುತ್ತಿದೆ’ ಎಂದು ದೂರಿದರು.</p>.<p>‘ಯಾವುದೇ ಪೂರ್ವಸಿದ್ಧತೆಯಿಲ್ಲದೆ ಲಾಕ್ಡೌನ್ ಘೋಷಿಸಿದ್ದರಿಂದ ಜನ ಸಂಕಷ್ಟಕ್ಕೆ ಒಳಗಾದರು. ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ, ಆಹಾರ–ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು. ನರೇಗಾ ಅಡಿ ಗ್ರಾಮೀಣ ಭಾಗದವರಿಗೆ ಮಾತ್ರವಲ್ಲದೆ, ನಗರ ಪ್ರದೇಶದವರಿಗೂ ಕೆಲಸ ಕೊಡುವ ಕಾರ್ಯವಾಗಬೇಕು’ ಎಂದರು.</p>.<p>ಭಾಷಾತಜ್ಞ ಪ್ರೊ. ಗಣೇಶ್ ದೇವಿ, ‘ಧರ್ಮ, ಜಾತಿ, ಬಣ್ಣದ ಅಡಿ ಜನರನ್ನು ವಿಭಜಿಸಲಾಗುತ್ತಿದೆ. ಇಂತಹ ಯಾವುದೇ ವಿಭಜನೆ ವಿರುದ್ಧ ಹೋರಾಟ ನಡೆಸಬೇಕು. ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಂಘಟನೆಗಳು ಹೋರಾಟವನ್ನು ಸಂಘಟಿಸಬೇಕು’ ಎಂದರು.</p>.<p>‘ತಪ್ಪು ವಿದೇಶಾಂಗ ನೀತಿಯಿಂದ ಗುಲ್ವಾನ್ನಲ್ಲಿ ಮೃತಪಟ್ಟ ವೀರಯೋಧರು, ಪೂರ್ವಸಿದ್ಧತೆಯಿಲ್ಲದೆ ಘೋಷಿಸಿದ ಲಾಕ್ಡೌನ್ನಿಂದ ಸಾವಿಗೀಡಾದವರು, ಕೊರೊನಾ ಸೋಂಕಿನಿಂದ ಮೃತರಾದವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದೇಶದ ಎಲ್ಲೆಡೆ ಮೌನ ಶೋಕಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮೌನದಿಂದಲೇ ಕೇಂದ್ರ ಸರ್ಕಾರದ ದುರಾಡಳಿತವನ್ನು ಪ್ರಶ್ನಿಸಬೇಕು’ ಎಂದು ಸಲಹೆ ನೀಡಿದರು.</p>.<p>ಸಂಘಟನೆಯ ವಿನಯ್ ಶ್ರೀನಿವಾಸ್ ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು.</p>.<p><strong>***</strong></p>.<p><strong>ಲಾಕ್ಡೌನ್ನಿಂದ ಸಂಕಷ್ಟ</strong></p>.<p>‘ಪೂರ್ವಸಿದ್ಧತೆಯಿಲ್ಲದೆ ಲಾಕ್ಡೌನ್ ಘೋಷಿಸಿದ್ದರಿಂದ ಜನರು ಸಂಕಷ್ಟದಲ್ಲಿದ್ದಾರೆ. ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ, ಆಹಾರ–ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ನಗರ ಪ್ರದೇಶದವರಿಗೂ ಕೆಲಸ ಕೊಡಬೇಕು’.</p>.<p><strong>- ಪ್ರಶಾಂತ್ ಭೂಷಣ್,ಹಿರಿಯ ವಕೀಲ</strong></p>.<p><strong>***</strong></p>.<p><strong>ಸುಗ್ರೀವಾಜ್ಞೆಗಳ ಸುಗ್ಗಿ</strong></p>.<p>‘ಕೋವಿಡ್ನಿಂದ ಜನ ಸಾಯುತ್ತಿದ್ದರೆ, ಕೇಂದ್ರ ಸರ್ಕಾರ ಕಾಯ್ದೆಗಳಿಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆಗಳ ಸುಗ್ಗಿ ಹಮ್ಮಿಕೊಂಡಿದೆ. ಸರ್ಕಾರದ ಆದ್ಯತೆ ಏನಿರಬೇಕಿತ್ತು, ಏನಾಗಿವೆ ಎಂದು ಪ್ರಶ್ನಿಸುವವರ ಧ್ವನಿ ಅಡಗಿಸಲಾಗುತ್ತಿದೆ’</p>.<p><strong>- ಭಾನು ಮುಷ್ತಾಕ್,ಲೇಖಕಿ</strong></p>.<p><strong>***</strong></p>.<p><strong>ಸಂಘಟಿತ ಹೋರಾಟ ಅಗತ್ಯ</strong></p>.<p>‘ಧರ್ಮ, ಜಾತಿ, ಬಣ್ಣದ ಅಡಿ ಜನರನ್ನುವಿಭಜಿಸಲಾಗುತ್ತಿದೆ. ಇಂತಹ ಬೆಳವಣಿಗೆಗಳ ವಿರುದ್ಧ ಹೋರಾಟ ನಡೆಸಬೇಕು. ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಂಘಟನೆಗಳು ಹೋರಾಟವನ್ನು ಸಂಘಟಿಸಬೇಕು’</p>.<p><strong>- ಪ್ರೊ.ಗಣೇಶ್ ದೇವಿ,ಭಾಷಾತಜ್ಞ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>‘ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನ, ಧರ್ಮ, ವಿಜ್ಞಾನ, ವೈಚಾರಿಕೆ ಚಿಂತನೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ಇಂತಹ ಬೆಳವಣಿಗೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸದಿದ್ದರೆ ಯಾರಿಗೂ ಉಳಿಗಾಲವಿಲ್ಲ’ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.</p>.<p>‘ನಾವು ಭಾರತೀಯರು’ ಸಂಘಟನೆಯು ಭಾನುವಾರ ಆನ್ಲೈನ್ನಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾಗ, ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ವಿರೋಧಪಕ್ಷಗಳು ಒಗ್ಗೂಡಿದ್ದವು. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ದಾಳಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಎಲ್ಲ ವಿರೋಧ ಪಕ್ಷಗಳು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಸಮಾನ ಮನಸ್ಕರು ಒಗ್ಗೂಡಿ ಹೋರಾಡಬೇಕಾದ ಅಗತ್ಯವಿದೆ’ ಎಂದರು.</p>.<p>‘ನ್ಯಾಯಾಂಗವನ್ನು ದುರ್ಬಲಗೊಳಿಸುವ, ಶಿಕ್ಷಣ ರಂಗವನ್ನು ದುರ್ಬಳಕೆ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಆರ್ಎಸ್ಎಸ್ ಚಿಂತನೆ ಹೊಂದಿರುವವರನ್ನು ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಾಯಕನನ್ನು ಪ್ರಶ್ನಿಸಬಾರದು, ಅವನು ಹೇಳಿದಂತೆಯೇ ಕೇಳಬೇಕು ಎಂಬ ಆರ್ಎಸ್ಎಸ್ನ ಸಿದ್ಧಾಂತವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸ ನಡೆಯುತ್ತಿದೆ’ ಎಂದು ದೂರಿದರು.</p>.<p>‘ಯಾವುದೇ ಪೂರ್ವಸಿದ್ಧತೆಯಿಲ್ಲದೆ ಲಾಕ್ಡೌನ್ ಘೋಷಿಸಿದ್ದರಿಂದ ಜನ ಸಂಕಷ್ಟಕ್ಕೆ ಒಳಗಾದರು. ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ, ಆಹಾರ–ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು. ನರೇಗಾ ಅಡಿ ಗ್ರಾಮೀಣ ಭಾಗದವರಿಗೆ ಮಾತ್ರವಲ್ಲದೆ, ನಗರ ಪ್ರದೇಶದವರಿಗೂ ಕೆಲಸ ಕೊಡುವ ಕಾರ್ಯವಾಗಬೇಕು’ ಎಂದರು.</p>.<p>ಭಾಷಾತಜ್ಞ ಪ್ರೊ. ಗಣೇಶ್ ದೇವಿ, ‘ಧರ್ಮ, ಜಾತಿ, ಬಣ್ಣದ ಅಡಿ ಜನರನ್ನು ವಿಭಜಿಸಲಾಗುತ್ತಿದೆ. ಇಂತಹ ಯಾವುದೇ ವಿಭಜನೆ ವಿರುದ್ಧ ಹೋರಾಟ ನಡೆಸಬೇಕು. ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಂಘಟನೆಗಳು ಹೋರಾಟವನ್ನು ಸಂಘಟಿಸಬೇಕು’ ಎಂದರು.</p>.<p>‘ತಪ್ಪು ವಿದೇಶಾಂಗ ನೀತಿಯಿಂದ ಗುಲ್ವಾನ್ನಲ್ಲಿ ಮೃತಪಟ್ಟ ವೀರಯೋಧರು, ಪೂರ್ವಸಿದ್ಧತೆಯಿಲ್ಲದೆ ಘೋಷಿಸಿದ ಲಾಕ್ಡೌನ್ನಿಂದ ಸಾವಿಗೀಡಾದವರು, ಕೊರೊನಾ ಸೋಂಕಿನಿಂದ ಮೃತರಾದವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದೇಶದ ಎಲ್ಲೆಡೆ ಮೌನ ಶೋಕಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮೌನದಿಂದಲೇ ಕೇಂದ್ರ ಸರ್ಕಾರದ ದುರಾಡಳಿತವನ್ನು ಪ್ರಶ್ನಿಸಬೇಕು’ ಎಂದು ಸಲಹೆ ನೀಡಿದರು.</p>.<p>ಸಂಘಟನೆಯ ವಿನಯ್ ಶ್ರೀನಿವಾಸ್ ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು.</p>.<p><strong>***</strong></p>.<p><strong>ಲಾಕ್ಡೌನ್ನಿಂದ ಸಂಕಷ್ಟ</strong></p>.<p>‘ಪೂರ್ವಸಿದ್ಧತೆಯಿಲ್ಲದೆ ಲಾಕ್ಡೌನ್ ಘೋಷಿಸಿದ್ದರಿಂದ ಜನರು ಸಂಕಷ್ಟದಲ್ಲಿದ್ದಾರೆ. ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ, ಆಹಾರ–ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ನಗರ ಪ್ರದೇಶದವರಿಗೂ ಕೆಲಸ ಕೊಡಬೇಕು’.</p>.<p><strong>- ಪ್ರಶಾಂತ್ ಭೂಷಣ್,ಹಿರಿಯ ವಕೀಲ</strong></p>.<p><strong>***</strong></p>.<p><strong>ಸುಗ್ರೀವಾಜ್ಞೆಗಳ ಸುಗ್ಗಿ</strong></p>.<p>‘ಕೋವಿಡ್ನಿಂದ ಜನ ಸಾಯುತ್ತಿದ್ದರೆ, ಕೇಂದ್ರ ಸರ್ಕಾರ ಕಾಯ್ದೆಗಳಿಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆಗಳ ಸುಗ್ಗಿ ಹಮ್ಮಿಕೊಂಡಿದೆ. ಸರ್ಕಾರದ ಆದ್ಯತೆ ಏನಿರಬೇಕಿತ್ತು, ಏನಾಗಿವೆ ಎಂದು ಪ್ರಶ್ನಿಸುವವರ ಧ್ವನಿ ಅಡಗಿಸಲಾಗುತ್ತಿದೆ’</p>.<p><strong>- ಭಾನು ಮುಷ್ತಾಕ್,ಲೇಖಕಿ</strong></p>.<p><strong>***</strong></p>.<p><strong>ಸಂಘಟಿತ ಹೋರಾಟ ಅಗತ್ಯ</strong></p>.<p>‘ಧರ್ಮ, ಜಾತಿ, ಬಣ್ಣದ ಅಡಿ ಜನರನ್ನುವಿಭಜಿಸಲಾಗುತ್ತಿದೆ. ಇಂತಹ ಬೆಳವಣಿಗೆಗಳ ವಿರುದ್ಧ ಹೋರಾಟ ನಡೆಸಬೇಕು. ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಂಘಟನೆಗಳು ಹೋರಾಟವನ್ನು ಸಂಘಟಿಸಬೇಕು’</p>.<p><strong>- ಪ್ರೊ.ಗಣೇಶ್ ದೇವಿ,ಭಾಷಾತಜ್ಞ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>