<p><strong>ಬೆಂಗಳೂರು:</strong> ಮನೆಮನೆಗೆ ಆಹಾರ ತಲುಪಿಸುವ ‘ಡೆಲಿವರಿ ಬಾಯ್’ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಯ ‘ನಮ್ಮ ನಗರ ನಮ್ಮ ಧ್ವನಿ’ಯಲ್ಲಿ ಭಾನುವಾರ ಪ್ರಕಟವಾದ ವರದಿಗೆ ಓದುಗರು ಪ್ರತಿಕ್ರಿಯಿಸಿದ್ದಾರೆ. ಹುಡುಗರ ಮೇಲೆ ಗ್ರಾಹಕರು ದರ್ಪ ತೋರಬಾರದು ಎಂದು ಓದುಗರು ಕಿವಿಮಾತು ಹೇಳಿದ್ದು, ಆಯ್ದ ಪ್ರತಿಕ್ರಿಯೆಗಳು ಹೀಗಿವೆ.</p>.<p><strong>ನಿಮ್ಮ ಗುಲಾಮರಲ್ಲ</strong></p>.<p>ಬಿಸಿಲು, ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ಹಗಲು ರಾತ್ರಿ ಗ್ರಾಹಕರ ಹೊಟ್ಟೆ ತುಂಬಿಸುವ ಹುಡುಗರು ಮಾಲೀಕರಿಂದ ಬೈಗುಳ ತಿನ್ನಬೇಕಿದೆ. ಇತ್ತ ಗ್ರಾಹಕರ ದರ್ಪ ಎದುರಿಸಬೇಕಿದೆ. ಇದು ಅಮಾನವೀಯ. ಅವರೂ ನಮ್ಮಂತೆ ಮನುಷ್ಯರೇ ಹೊರತು ಗುಲಾಮರಲ್ಲ.</p>.<p><strong>ಸಯ್ಯದ್ ಪಾಷ,ಬೆಂಗಳೂರು</strong></p>.<p>***</p>.<p><strong>ಮನುಷ್ಯತ್ವ ಮರೆಯಾಗದಿರಲಿ</strong></p>.<p>ಗ್ರಾಹಕರೇ ದೇವರು ಎಂಬ ಸ್ಥಾನ ನೀಡಿ ಡೆಲಿವರಿ ಹುಡುಗರು ಆಹಾರ ತಲುಪಿಸುತ್ತಾರೆ. ಆದರೆ, ಆ ಗೌರವವನ್ನು ಉಳಿಸಿಕೊಳ್ಳದ ಕೆಲ ಗ್ರಾಹಕರು ಮುಖ ಗಂಟು ಮಾಡಿಕೊಂಡು ಅವರ ಮೇಲೆ ಕೂಗಾಡುವುದು ಎಷ್ಟರ ಮಟ್ಟಿಗೆ ಸರಿ?</p>.<p><strong>ಎಂ.ಎಸ್.ರಾಘವೇಂದ್ರ,ಹೊಸಕೋಟೆ</strong></p>.<p><strong>***</strong></p>.<p><strong>ದರ್ಪ ತೋರದಿರಿ</strong></p>.<p>ನಿಮ್ಮೆಲ್ಲರ ಹೊಟ್ಟೆ ತುಂಬಿಸುವ ಅವರ ಹೊಟ್ಟೆ ತುಂಬಿಸುತ್ತಿರುವುದು ಡೆಲಿವರಿ ವೃತ್ತಿ. ಯಾವುದೇ ವೃತ್ತಿಯನ್ನು ಕೀಳಾಗಿ ನೋಡಬೇಡಿ. ಸಂಚಾರ ದಟ್ಟಣೆಯ ನಡುವೆಯೂ ಸಾಗಿ ಆಹಾರ ಕೈಲಿಡುತ್ತಾರೆ. ಅಂತಹವರ ಮೇಲೆ ನಿಮ್ಮ ದರ್ಪ ತೋರದಿರಿ.</p>.<p><strong>ಬಿ.ಆರ್.ಮಾರುತಿ,ವಿಜಯನಗರ</strong></p>.<p><strong>***</strong></p>.<p><strong>ಸಂಚಾರಿ ನಿಯಮ ಪಾಲಿಸಿ</strong></p>.<p>ಆಹಾರ ಸರಬರಾಜು ಮಾಡುವ ಭರದಲ್ಲಿ ಹುಡುಗರು ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಸರಬರಾಜು ಮಾಡುವ ಹೆಸರಲ್ಲಿ ನಿಯಮ ಉಲ್ಲಂಘನೆ ಮಾಡದಿರಿ. ಹೆಚ್ಚಾದ ದಂಡದ ಪ್ರಮಾಣ ನಿಮ್ಮ ಸಂಬಳಕ್ಕೆ ಮಾರಕವಾಗಲಿದೆ.</p>.<p><strong>ವೆಂಕಟೇಶ್,ಬೆಂಗಳೂರು</strong></p>.<p><strong>***</strong></p>.<p><strong>ಸೌಲಭ್ಯ ಒದಗಿಸಿ</strong></p>.<p>ಡೆಲಿವರಿ ಹುಡುಗರ ಹುದ್ದೆಗೆ ಇಎಸ್ಐ, ಪಿಎಫ್ ಸೌಲಭ್ಯವಿಲ್ಲ. ಅವರ ಹೆಗಲ ಮೇಲೂ ಕೌಟುಂಬಿಕ ಜವಾಬ್ದಾರಿ ಇರುವುದರಿಂದ ಅವರಿಗೆ ಸೂಕ್ತ ಸೌಲಭ್ಯ, ಭದ್ರತೆ ಒದಗಿಸಬೇಕು.</p>.<p><strong>ನಾಗವೇಣಿ,ಆರ್.ಟಿ.ನಗರ</strong></p>.<p><strong>***</strong></p>.<p><strong>ಬಾಳೆ ಎಲೆಯಲ್ಲಿ ಆಹಾರ ಕೊಡಿ</strong></p>.<p>ಆನ್ಲೈನ್ ಮೂಲಕ ಆಹಾರ ತರಿಸಿಕೊಳ್ಳುತ್ತಿರುವ ವಿಧಾನ ಉತ್ತಮವಾಗಿದೆ. ಆದರೆ, ಆಹಾರ ಸರಬರಾಜಿನಿಂದ ಅಧಿಕ ಪ್ರಮಾಣದ ಪ್ಲಾಸ್ಟಿಕ್ ಹೊರಬೀಳುತ್ತಿದೆ. ಪ್ಲಾಸ್ಟಿಕ್ ಬದಲಿಗೆ ಪೇಪರ್ ಅಥವಾ ಬಾಳೆ ಎಲೆಯಲ್ಲಿ ಆಹಾರ ಪೂರೈಸುವುದು ಸೂಕ್ತ.</p>.<p><strong>ಗೌರಿ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮನೆಮನೆಗೆ ಆಹಾರ ತಲುಪಿಸುವ ‘ಡೆಲಿವರಿ ಬಾಯ್’ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಯ ‘ನಮ್ಮ ನಗರ ನಮ್ಮ ಧ್ವನಿ’ಯಲ್ಲಿ ಭಾನುವಾರ ಪ್ರಕಟವಾದ ವರದಿಗೆ ಓದುಗರು ಪ್ರತಿಕ್ರಿಯಿಸಿದ್ದಾರೆ. ಹುಡುಗರ ಮೇಲೆ ಗ್ರಾಹಕರು ದರ್ಪ ತೋರಬಾರದು ಎಂದು ಓದುಗರು ಕಿವಿಮಾತು ಹೇಳಿದ್ದು, ಆಯ್ದ ಪ್ರತಿಕ್ರಿಯೆಗಳು ಹೀಗಿವೆ.</p>.<p><strong>ನಿಮ್ಮ ಗುಲಾಮರಲ್ಲ</strong></p>.<p>ಬಿಸಿಲು, ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ಹಗಲು ರಾತ್ರಿ ಗ್ರಾಹಕರ ಹೊಟ್ಟೆ ತುಂಬಿಸುವ ಹುಡುಗರು ಮಾಲೀಕರಿಂದ ಬೈಗುಳ ತಿನ್ನಬೇಕಿದೆ. ಇತ್ತ ಗ್ರಾಹಕರ ದರ್ಪ ಎದುರಿಸಬೇಕಿದೆ. ಇದು ಅಮಾನವೀಯ. ಅವರೂ ನಮ್ಮಂತೆ ಮನುಷ್ಯರೇ ಹೊರತು ಗುಲಾಮರಲ್ಲ.</p>.<p><strong>ಸಯ್ಯದ್ ಪಾಷ,ಬೆಂಗಳೂರು</strong></p>.<p>***</p>.<p><strong>ಮನುಷ್ಯತ್ವ ಮರೆಯಾಗದಿರಲಿ</strong></p>.<p>ಗ್ರಾಹಕರೇ ದೇವರು ಎಂಬ ಸ್ಥಾನ ನೀಡಿ ಡೆಲಿವರಿ ಹುಡುಗರು ಆಹಾರ ತಲುಪಿಸುತ್ತಾರೆ. ಆದರೆ, ಆ ಗೌರವವನ್ನು ಉಳಿಸಿಕೊಳ್ಳದ ಕೆಲ ಗ್ರಾಹಕರು ಮುಖ ಗಂಟು ಮಾಡಿಕೊಂಡು ಅವರ ಮೇಲೆ ಕೂಗಾಡುವುದು ಎಷ್ಟರ ಮಟ್ಟಿಗೆ ಸರಿ?</p>.<p><strong>ಎಂ.ಎಸ್.ರಾಘವೇಂದ್ರ,ಹೊಸಕೋಟೆ</strong></p>.<p><strong>***</strong></p>.<p><strong>ದರ್ಪ ತೋರದಿರಿ</strong></p>.<p>ನಿಮ್ಮೆಲ್ಲರ ಹೊಟ್ಟೆ ತುಂಬಿಸುವ ಅವರ ಹೊಟ್ಟೆ ತುಂಬಿಸುತ್ತಿರುವುದು ಡೆಲಿವರಿ ವೃತ್ತಿ. ಯಾವುದೇ ವೃತ್ತಿಯನ್ನು ಕೀಳಾಗಿ ನೋಡಬೇಡಿ. ಸಂಚಾರ ದಟ್ಟಣೆಯ ನಡುವೆಯೂ ಸಾಗಿ ಆಹಾರ ಕೈಲಿಡುತ್ತಾರೆ. ಅಂತಹವರ ಮೇಲೆ ನಿಮ್ಮ ದರ್ಪ ತೋರದಿರಿ.</p>.<p><strong>ಬಿ.ಆರ್.ಮಾರುತಿ,ವಿಜಯನಗರ</strong></p>.<p><strong>***</strong></p>.<p><strong>ಸಂಚಾರಿ ನಿಯಮ ಪಾಲಿಸಿ</strong></p>.<p>ಆಹಾರ ಸರಬರಾಜು ಮಾಡುವ ಭರದಲ್ಲಿ ಹುಡುಗರು ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಸರಬರಾಜು ಮಾಡುವ ಹೆಸರಲ್ಲಿ ನಿಯಮ ಉಲ್ಲಂಘನೆ ಮಾಡದಿರಿ. ಹೆಚ್ಚಾದ ದಂಡದ ಪ್ರಮಾಣ ನಿಮ್ಮ ಸಂಬಳಕ್ಕೆ ಮಾರಕವಾಗಲಿದೆ.</p>.<p><strong>ವೆಂಕಟೇಶ್,ಬೆಂಗಳೂರು</strong></p>.<p><strong>***</strong></p>.<p><strong>ಸೌಲಭ್ಯ ಒದಗಿಸಿ</strong></p>.<p>ಡೆಲಿವರಿ ಹುಡುಗರ ಹುದ್ದೆಗೆ ಇಎಸ್ಐ, ಪಿಎಫ್ ಸೌಲಭ್ಯವಿಲ್ಲ. ಅವರ ಹೆಗಲ ಮೇಲೂ ಕೌಟುಂಬಿಕ ಜವಾಬ್ದಾರಿ ಇರುವುದರಿಂದ ಅವರಿಗೆ ಸೂಕ್ತ ಸೌಲಭ್ಯ, ಭದ್ರತೆ ಒದಗಿಸಬೇಕು.</p>.<p><strong>ನಾಗವೇಣಿ,ಆರ್.ಟಿ.ನಗರ</strong></p>.<p><strong>***</strong></p>.<p><strong>ಬಾಳೆ ಎಲೆಯಲ್ಲಿ ಆಹಾರ ಕೊಡಿ</strong></p>.<p>ಆನ್ಲೈನ್ ಮೂಲಕ ಆಹಾರ ತರಿಸಿಕೊಳ್ಳುತ್ತಿರುವ ವಿಧಾನ ಉತ್ತಮವಾಗಿದೆ. ಆದರೆ, ಆಹಾರ ಸರಬರಾಜಿನಿಂದ ಅಧಿಕ ಪ್ರಮಾಣದ ಪ್ಲಾಸ್ಟಿಕ್ ಹೊರಬೀಳುತ್ತಿದೆ. ಪ್ಲಾಸ್ಟಿಕ್ ಬದಲಿಗೆ ಪೇಪರ್ ಅಥವಾ ಬಾಳೆ ಎಲೆಯಲ್ಲಿ ಆಹಾರ ಪೂರೈಸುವುದು ಸೂಕ್ತ.</p>.<p><strong>ಗೌರಿ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>