ಹೆಸರಘಟ್ಟದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ ಆಯೋಜಿಸಿರುವ ನಾಲ್ಕು ದಿನಗಳ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ತೋಟಗಾರಿಕಾ ಮೇಳದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಛತ್ತೀಸಗಡ ಸೇರಿ ಹಲವಾರು ರಾಜ್ಯಗಳು ಸಂಶೋಧಿಸಿದ ಹೊಸ ತಳಿ ಮತ್ತು ತಂತ್ರಜ್ಞಾನಗಳು ಗಮನ ಸೆಳೆದವು. ಇದೇ ಸಂದರ್ಭ ಕೃಷಿಗೆ ಹಾನಿ ಉಂಟು ಮಾಡುವ ಕೀಟಗಳ ನಿರ್ಮೂಲನೆಗೆ ಕೀಟಗಳನ್ನೇ ಬಳಸಿಕೊಳ್ಳುವ ವಿಧಾನವನ್ನು ರೈತರಿಗೆ ಪರಿಚಯಿಸಲಾಯಿತು.