<p><strong>ಬೆಂಗಳೂರು</strong>: ನಗರದ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನವರಾತ್ರಿ ಹಬ್ಬವನ್ನು ನಾನಾ ಧಾರ್ಮಿಕ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು. </p>.<p>ಕೇಂದ್ರದ ಮುಖ್ಯಸ್ಥರಾದ ಶ್ರೀ ಶ್ರೀ ರವಿಶಂಕರ್ ಉಪಸ್ಥಿತಿಯಲ್ಲಿ 180 ದೇಶಗಳಿಂದ ಬಂದಿದ್ದ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಜಗನ್ಮಾತೆಯ ಆರಾಧನೆ ಮಾಡಿದರು.</p>.<p>ಅಷ್ಟಮಿಯಂದು ಶತ ಚಂಡಿ ಹೋಮ ನಡೆಯಿತು. 700 ಶ್ಲೋಕಗಳ ದುರ್ಗಾ ಸಪ್ತಶತಿಯನ್ನು ಪಠಿಸಲಾಯಿತು. ಈ ವರ್ಷ, ಆರ್ಟ್ ಆಫ್ ಲಿವಿಂಗ್ ವತಿಯಿಂದ ಜಗತ್ತಿನೆಲ್ಲೆಡೆ 137ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಂಡಿ ಹೋಮ ಆಯೋಜಿಸಲಾಗಿತ್ತು.</p>.<p>ನವಮಿಯಂದು ಋಷಿಗಳು, ಜ್ಞಾನಿಗಳನ್ನು ನೆನೆಯುವ ಋಷಿ ಹೋಮವನ್ನು ನೆರವೇರಿಸಲಾಯಿತು. ಹೋಮಗಳ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.</p>.<p><strong>ನಮಗೆ ಮೂರು ರೀತಿ ದುಃಖಗಳಿವೆ. ಒಂದು ಹೊರ ಜಗತ್ತಿನಿಂದ ಬಂದರೆ ಮತ್ತೊಂದು ಕರ್ಮಗಳ ರೂಪ. ಮೂರನೆಯದ್ದು ಸೂಕ್ಷ್ಮ ಮನಸ್ಸಿನಿಂದ ಬರುವಂತದ್ದು. ನವರಾತ್ರಿ ಈ ಮೂರರಿಂದಲೂ ನಿರಾಳತೆ ನೀಡುತ್ತದೆ</strong></p><p><strong>– ಶ್ರೀ ಶ್ರೀ ರವಿಶಂಕರ್ ಆರ್ಟ್ ಆಫ್ ಲಿವಿಂಗ್</strong></p>.<p> ಗಮನ ಸೆಳೆದ ಕಲೆ ಆರ್ಟ್ ಆಫ್ ಲಿವಿಂಗ್ ನ ಧ್ಯಾನ ಮಂದಿರವು ದೇವಸ್ಥಾನದ ಕಲೆಯಿಂದ ಗಮನ ಸೆಳೆಯಿತು. 18 ಗೋಡೆಗಳ ಮೇಲೆ ಮತ್ತು 36 ಸ್ತಂಭಗಳ ಮೇಲೆ ಸುಮಾರು 15000 ಚದರಡಿಗಳಷ್ಟು ಸ್ಥಳದಲ್ಲಿ ಅಜಂತ ಮತ್ತು ಎಲ್ಲೋರಾದಿಂದ ಸ್ಫೂರ್ತಿ ಪಡೆದ ಮ್ಯೂರಲ್ ಚಿತ್ರಗಳನ್ನು ಬಿಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನವರಾತ್ರಿ ಹಬ್ಬವನ್ನು ನಾನಾ ಧಾರ್ಮಿಕ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು. </p>.<p>ಕೇಂದ್ರದ ಮುಖ್ಯಸ್ಥರಾದ ಶ್ರೀ ಶ್ರೀ ರವಿಶಂಕರ್ ಉಪಸ್ಥಿತಿಯಲ್ಲಿ 180 ದೇಶಗಳಿಂದ ಬಂದಿದ್ದ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಜಗನ್ಮಾತೆಯ ಆರಾಧನೆ ಮಾಡಿದರು.</p>.<p>ಅಷ್ಟಮಿಯಂದು ಶತ ಚಂಡಿ ಹೋಮ ನಡೆಯಿತು. 700 ಶ್ಲೋಕಗಳ ದುರ್ಗಾ ಸಪ್ತಶತಿಯನ್ನು ಪಠಿಸಲಾಯಿತು. ಈ ವರ್ಷ, ಆರ್ಟ್ ಆಫ್ ಲಿವಿಂಗ್ ವತಿಯಿಂದ ಜಗತ್ತಿನೆಲ್ಲೆಡೆ 137ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಂಡಿ ಹೋಮ ಆಯೋಜಿಸಲಾಗಿತ್ತು.</p>.<p>ನವಮಿಯಂದು ಋಷಿಗಳು, ಜ್ಞಾನಿಗಳನ್ನು ನೆನೆಯುವ ಋಷಿ ಹೋಮವನ್ನು ನೆರವೇರಿಸಲಾಯಿತು. ಹೋಮಗಳ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.</p>.<p><strong>ನಮಗೆ ಮೂರು ರೀತಿ ದುಃಖಗಳಿವೆ. ಒಂದು ಹೊರ ಜಗತ್ತಿನಿಂದ ಬಂದರೆ ಮತ್ತೊಂದು ಕರ್ಮಗಳ ರೂಪ. ಮೂರನೆಯದ್ದು ಸೂಕ್ಷ್ಮ ಮನಸ್ಸಿನಿಂದ ಬರುವಂತದ್ದು. ನವರಾತ್ರಿ ಈ ಮೂರರಿಂದಲೂ ನಿರಾಳತೆ ನೀಡುತ್ತದೆ</strong></p><p><strong>– ಶ್ರೀ ಶ್ರೀ ರವಿಶಂಕರ್ ಆರ್ಟ್ ಆಫ್ ಲಿವಿಂಗ್</strong></p>.<p> ಗಮನ ಸೆಳೆದ ಕಲೆ ಆರ್ಟ್ ಆಫ್ ಲಿವಿಂಗ್ ನ ಧ್ಯಾನ ಮಂದಿರವು ದೇವಸ್ಥಾನದ ಕಲೆಯಿಂದ ಗಮನ ಸೆಳೆಯಿತು. 18 ಗೋಡೆಗಳ ಮೇಲೆ ಮತ್ತು 36 ಸ್ತಂಭಗಳ ಮೇಲೆ ಸುಮಾರು 15000 ಚದರಡಿಗಳಷ್ಟು ಸ್ಥಳದಲ್ಲಿ ಅಜಂತ ಮತ್ತು ಎಲ್ಲೋರಾದಿಂದ ಸ್ಫೂರ್ತಿ ಪಡೆದ ಮ್ಯೂರಲ್ ಚಿತ್ರಗಳನ್ನು ಬಿಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>