<p><strong>ಬೆಂಗಳೂರು</strong>: ಮಾದಕ ವಸ್ತು ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದ ಆರೋಪಿ ರಿಜೇಶ್ ರವೀಂದ್ರನ್ ಸಲ್ಲಿಸಿದ್ದ ಎರಡು ಕ್ರಿಮಿನಲ್ ಪರಿಷ್ಕರಣೆ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.</p>.<p>ಬೆಂಗಳೂರು ವಲಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್ಸಿಬಿ) ಗುಪ್ತಚರ ಅಧಿಕಾರಿ ಸಲ್ಲಿಸಿದ್ದ ದೂರು ಆಧರಿಸಿ 2021ರ ಫೆಬ್ರುವರಿ 20ರಂದು ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಿಜೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಾಮೀನು ನಿರಾಕರಿಸಿದ ಆದೇಶವನ್ನೂ ಅವರು ಪ್ರಶ್ನಿಸಿದ್ದರು.</p>.<p>‘ಎನ್ಸಿಬಿ ವರದಿಯನ್ನು ಸಲ್ಲಿಸಬೇಕೇ ಹೊರತು ನ್ಯಾಯಾಲಯಕ್ಕೆ ದೂರು ಸಲ್ಲಿಸಬಾರದು. ತೋಫಾನ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ’ ಎಂದು ಅರ್ಜಿದಾರ ರಿಜೇಶ್ ಪರ ವಕೀಲರು ವಾದಿಸಿದರು.</p>.<p>‘ಎನ್ಸಿಬಿ ಅಧಿಕಾರಿಗಳುಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ದೂರು ದಾಖಲಿಸಿದ್ದಾರೆಯೇ ಹೊರತು, ಸಿಆರ್ಪಿಸಿ ಅಡಿಯಲ್ಲಿ ಅಲ್ಲ. ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸುವಾಗ ಸಿಆರ್ಪಿಸಿಯನ್ನು ಅವಲಂಬಿಸಬೇಕಿಲ್ಲ’ ಎಂದು ಎನ್ಸಿಬಿ ಪರ ವಕೀಲರು ವಾದಿಸಿದರು.</p>.<p>‘ನಿಗದಿತ 180 ದಿನಗಳಲ್ಲಿ ಎನ್ಸಿಬಿ ಪೊಲೀಸರು ದೂರು ದಾಖಲಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ’ ಎಂದು ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅಭಿಪ್ರಾಯಪಟ್ಟರು.</p>.<p>2020ರ ಆಗಸ್ಟ್ 21ರಂದು ರಿಜೇಶ್ ಮನೆಯಲ್ಲಿ ಎನ್ಸಿಬಿ ಅಧಿಕಾರಿಗಳು ಶೋಧ ನಡೆಸಿದ್ದರು. ನಿಷೇಧಿತ ವಸ್ತುಗಳುಈ ವೇಳೆ ಪತ್ತೆಯಾದ ಕಾರಣ ಅವರನ್ನು ಬಂಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಾದಕ ವಸ್ತು ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದ ಆರೋಪಿ ರಿಜೇಶ್ ರವೀಂದ್ರನ್ ಸಲ್ಲಿಸಿದ್ದ ಎರಡು ಕ್ರಿಮಿನಲ್ ಪರಿಷ್ಕರಣೆ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.</p>.<p>ಬೆಂಗಳೂರು ವಲಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್ಸಿಬಿ) ಗುಪ್ತಚರ ಅಧಿಕಾರಿ ಸಲ್ಲಿಸಿದ್ದ ದೂರು ಆಧರಿಸಿ 2021ರ ಫೆಬ್ರುವರಿ 20ರಂದು ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಿಜೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಾಮೀನು ನಿರಾಕರಿಸಿದ ಆದೇಶವನ್ನೂ ಅವರು ಪ್ರಶ್ನಿಸಿದ್ದರು.</p>.<p>‘ಎನ್ಸಿಬಿ ವರದಿಯನ್ನು ಸಲ್ಲಿಸಬೇಕೇ ಹೊರತು ನ್ಯಾಯಾಲಯಕ್ಕೆ ದೂರು ಸಲ್ಲಿಸಬಾರದು. ತೋಫಾನ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ’ ಎಂದು ಅರ್ಜಿದಾರ ರಿಜೇಶ್ ಪರ ವಕೀಲರು ವಾದಿಸಿದರು.</p>.<p>‘ಎನ್ಸಿಬಿ ಅಧಿಕಾರಿಗಳುಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ದೂರು ದಾಖಲಿಸಿದ್ದಾರೆಯೇ ಹೊರತು, ಸಿಆರ್ಪಿಸಿ ಅಡಿಯಲ್ಲಿ ಅಲ್ಲ. ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸುವಾಗ ಸಿಆರ್ಪಿಸಿಯನ್ನು ಅವಲಂಬಿಸಬೇಕಿಲ್ಲ’ ಎಂದು ಎನ್ಸಿಬಿ ಪರ ವಕೀಲರು ವಾದಿಸಿದರು.</p>.<p>‘ನಿಗದಿತ 180 ದಿನಗಳಲ್ಲಿ ಎನ್ಸಿಬಿ ಪೊಲೀಸರು ದೂರು ದಾಖಲಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ’ ಎಂದು ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅಭಿಪ್ರಾಯಪಟ್ಟರು.</p>.<p>2020ರ ಆಗಸ್ಟ್ 21ರಂದು ರಿಜೇಶ್ ಮನೆಯಲ್ಲಿ ಎನ್ಸಿಬಿ ಅಧಿಕಾರಿಗಳು ಶೋಧ ನಡೆಸಿದ್ದರು. ನಿಷೇಧಿತ ವಸ್ತುಗಳುಈ ವೇಳೆ ಪತ್ತೆಯಾದ ಕಾರಣ ಅವರನ್ನು ಬಂಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>