ಸಾಗರ್ ನೆಲೆಸಿದ್ದ ಸ್ಥಳದ ಸುತ್ತಮುತ್ತ ಸುಶೀಲ್ ಕಳವು ಮಾಡುತ್ತಿದ್ದ. ಅಲ್ಲಿನ ನಿವಾಸಿಗಳು ಸಾಗರ್ ಮೇಲೆಯೇ ಅಪಾದನೆ ಮಾಡಿದ್ದರು. ಇದರಿಂದ ಬೇಸರಗೊಂಡ ಸಾಗರ್ ಇತರೆ ಮೂವರೊಂದಿಗೆ ಸುಶೀಲ್ನನ್ನು ಹಗ್ಗದಲ್ಲಿ ಕಟ್ಟಿಹಾಕಿ, ಥಳಿಸಿದ್ದರು. ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಆರೋಪಿಗಳು ಪರಾರಿಯಾಗಿದ್ದರು ಎಂದು ಪೂರ್ವವಲಯದ ಡಿ.ಸಿ.ಪಿ ಭೀಮಾಶಂಕರ್ ಗುಳೇದ ತಿಳಿಸಿದ್ಧಾರೆ.