‘ದಿನೇಶ್ ಅವರು ಇದೇ 7ರಂದು ಸಂಜೆ ನೈಸ್ ರಸ್ತೆಯಲ್ಲಿ ನಿಂತುಕೊಂಡಿದ್ದರು. ಡ್ರಾಪ್ ನೀಡುವ ನೆಪದಲ್ಲಿ ಆರೋಪಿಗಳು ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದರು. 2 ಕಿ.ಮೀ ದೂರ ಹೋದ ನಂತರ ಚಾಕು ತೋರಿಸಿ ಚಿನ್ನದ ಉಂಗುರ, ಚಿನ್ನದ ಸರಸುಲಿಗೆ ಮಾಡಿದ್ದರು. ನಂತರ, ನಿರ್ಜನ ಪ್ರದೇಶದಲ್ಲೇ ದಿನೇಶ್ ಅವರನ್ನು ಕಾರಿನಿಂದ ತಳ್ಳಿ ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.