ಬೊಮ್ಮನಹಳ್ಳಿ:‘ಕೊರೊನಾ ಸೋಂಕಿತರ ನೆರವಿಗಾಗಿ ಬೊಮ್ಮನಹಳ್ಳಿ ವಲಯದ ಎಲ್ಲಾ ವಾರ್ಡುಗಳಿಗೆ ತಲಾ ಒಂದು ಆಂಬುಲೆನ್ಸ್ ನೀಡಲಾಗುವುದು’ ಎಂದು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಹೇಳಿದರು.
ಈ ವಲಯದ ಕೊರೊನಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಸುರೇಶ್ಕುಮಾರ್, ವಲಯ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದರು.
‘ಕೋವಿಡ್ ಸೋಂಕಿತರ ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವುದು ನಮ್ಮ ಆದ್ಯತೆಯ ಕೆಲಸ. ಇದಕ್ಕಾಗಿ ಸೋಂಕಿತರಿಗೆ ಆರಂಭದಲ್ಲೇ ಗುಣಮಟ್ಟದ ಚಿಕಿತ್ಸೆ ಸಿಗುವ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಆತಂಕಪಡಬೇಕಿಲ್ಲ’ ಎಂದರು.
‘ಕೋವಿಡ್ ನಿರ್ವಹಣೆಗೆಪ್ರತಿ ವಾರ್ಡ್ನಲ್ಲಿ 30ರಿಂದ 40 ಸ್ವಯಂಸೇವಕರು ಸೇವೆಗೆ ಸಿಗಲಿದ್ದಾರೆ‘ ಎಂದರು.
ನಂತರ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ಸರ್ಕಾರದ ಸೂಚನೆಯಂತೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ತಿಳಿಸಿದರು.