<p><strong>ದಾಬಸ್ ಪೇಟೆ:</strong> ರೈತರು ತಮ್ಮ ಜಮೀನಿನ ಮಣ್ಣನ್ನು ಎರಡು ಮೂರು ವರ್ಷಕ್ಕೆ ಒಂದು ಸಲ ಪರೀಕ್ಷೆಗೆ ಒಳಪಡಿಸಬೇಕು. ಇದರಿಂದ ಮಣ್ಣಿನಲ್ಲಿ ಏನಾದರೂ ನ್ಯೂನತೆಗಳಿವೆಯೇ ಎನ್ನುವುದನ್ನು ತಿಳಿದು, ಪೋಷಕಾಂಶ ನೀಡಲು ಸಹಾಯಕವಾಗುತ್ತದೆ ಎಂದು ಬೆಂಗಳೂರು ಕೃಷಿ ವಿವಿ ಪ್ರಾಧ್ಯಾಪಕ ಸುರೇಶ್ ತಿಳಿಸಿದರು </p>.<p>ನೆಲಮಂಗಲ ತಾಲ್ಲೂಕು ಕೃಷಿ ಇಲಾಖೆ ವತಿಯಿಂದ ನಿಜಗಲ್ ಕೆಂಪೋಹಳ್ಳಿಯಲ್ಲಿ ನಡೆದ 2024-2 5ನೇ ಸಾಲಿನ 'ತಾಲ್ಲೂಕು ಮಟ್ಟದ ವಿಶ್ವ ಮಣ್ಣು ದಿನಾಚರಣೆ, ಮಣ್ಣು ಫಲವತ್ತತೆಯ ನಿರ್ವಹಣೆ ಮತ್ತು ಸಾವಯವ ಕೃಷಿ' ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಣ್ಣು ಫಲವತ್ತತೆಯಿಂದ ಕೂಡಿರಬೇಕಾದರೆ ಅದು ಆರೋಗ್ಯವಾಗಿರಬೇಕು. ಅದಕ್ಕಾಗಿ ಮಣ್ಣಿನ ಆರೈಕೆ ಮಾಡಬೇಕು. ರೈತರು ನೈಸರ್ಗಿಕ ಕೃಷಿಯತ್ತ ಹೋಗಬೇಕು. ಪ್ರತಿವರ್ಷ ಒಂದೇ ಬೆಳೆಗೆ ಅಂಟಿಕೊಳ್ಳದೆ, ವರ್ಷ ವರ್ಷ ಬದಲಾವಣೆ ಮಾಡಬೇಕು. ಇದರಿಂದ ಮಣ್ಣಿನ ಪೋಷಕಾಂಶ ಹೆಚ್ಚುತ್ತದೆ’ ಎಂದರು.</p>.<p>ನೆಲಮಂಗಲ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ವಿನೋದಮ್ಮ ಮಾತನಾಡಿ, ‘ಮನುಷ್ಯನ ದುರಾಸೆಯಿಂದ ಮಣ್ಣು ನಾನಾ ರೀತಿಯಲ್ಲಿ ಮಲೀನವಾಗುತ್ತಿದೆ. ಮಣ್ಣಿಗೆ ವಿಷದ ರೂಪದಲ್ಲಿ ರಾಸಾಯನಿಕ ಸೇರಿಸಿ ಉಪಯೋಗಿಸಲು ಯೋಗ್ಯವಲ್ಲದ ಮಣ್ಣಾಗಿ ಮಾಡಿದ್ದೇವೆ. ಇನ್ನಾದರೂ ಮಣ್ಣನ್ನು ಸಾಧ್ಯವಾದಷ್ಟು ರಕ್ಷಿಸೋಣ’ ಎಂದರು.</p>.<p>ಕೃಷಿ ಅಧಿಕಾರಿಗಳಾದ ಸೋಂಪುರ ಹೋಬಳಿಯ ರವಿಕುಮಾರ್, ತ್ಯಾಮಗೊಂಡ್ಲುವಿನ ಜಿ.ಅಂಜನಾ, ಕಸಬಾ ಹೋಬಳಿಯ ನವೀನಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ ಪೇಟೆ:</strong> ರೈತರು ತಮ್ಮ ಜಮೀನಿನ ಮಣ್ಣನ್ನು ಎರಡು ಮೂರು ವರ್ಷಕ್ಕೆ ಒಂದು ಸಲ ಪರೀಕ್ಷೆಗೆ ಒಳಪಡಿಸಬೇಕು. ಇದರಿಂದ ಮಣ್ಣಿನಲ್ಲಿ ಏನಾದರೂ ನ್ಯೂನತೆಗಳಿವೆಯೇ ಎನ್ನುವುದನ್ನು ತಿಳಿದು, ಪೋಷಕಾಂಶ ನೀಡಲು ಸಹಾಯಕವಾಗುತ್ತದೆ ಎಂದು ಬೆಂಗಳೂರು ಕೃಷಿ ವಿವಿ ಪ್ರಾಧ್ಯಾಪಕ ಸುರೇಶ್ ತಿಳಿಸಿದರು </p>.<p>ನೆಲಮಂಗಲ ತಾಲ್ಲೂಕು ಕೃಷಿ ಇಲಾಖೆ ವತಿಯಿಂದ ನಿಜಗಲ್ ಕೆಂಪೋಹಳ್ಳಿಯಲ್ಲಿ ನಡೆದ 2024-2 5ನೇ ಸಾಲಿನ 'ತಾಲ್ಲೂಕು ಮಟ್ಟದ ವಿಶ್ವ ಮಣ್ಣು ದಿನಾಚರಣೆ, ಮಣ್ಣು ಫಲವತ್ತತೆಯ ನಿರ್ವಹಣೆ ಮತ್ತು ಸಾವಯವ ಕೃಷಿ' ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಣ್ಣು ಫಲವತ್ತತೆಯಿಂದ ಕೂಡಿರಬೇಕಾದರೆ ಅದು ಆರೋಗ್ಯವಾಗಿರಬೇಕು. ಅದಕ್ಕಾಗಿ ಮಣ್ಣಿನ ಆರೈಕೆ ಮಾಡಬೇಕು. ರೈತರು ನೈಸರ್ಗಿಕ ಕೃಷಿಯತ್ತ ಹೋಗಬೇಕು. ಪ್ರತಿವರ್ಷ ಒಂದೇ ಬೆಳೆಗೆ ಅಂಟಿಕೊಳ್ಳದೆ, ವರ್ಷ ವರ್ಷ ಬದಲಾವಣೆ ಮಾಡಬೇಕು. ಇದರಿಂದ ಮಣ್ಣಿನ ಪೋಷಕಾಂಶ ಹೆಚ್ಚುತ್ತದೆ’ ಎಂದರು.</p>.<p>ನೆಲಮಂಗಲ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ವಿನೋದಮ್ಮ ಮಾತನಾಡಿ, ‘ಮನುಷ್ಯನ ದುರಾಸೆಯಿಂದ ಮಣ್ಣು ನಾನಾ ರೀತಿಯಲ್ಲಿ ಮಲೀನವಾಗುತ್ತಿದೆ. ಮಣ್ಣಿಗೆ ವಿಷದ ರೂಪದಲ್ಲಿ ರಾಸಾಯನಿಕ ಸೇರಿಸಿ ಉಪಯೋಗಿಸಲು ಯೋಗ್ಯವಲ್ಲದ ಮಣ್ಣಾಗಿ ಮಾಡಿದ್ದೇವೆ. ಇನ್ನಾದರೂ ಮಣ್ಣನ್ನು ಸಾಧ್ಯವಾದಷ್ಟು ರಕ್ಷಿಸೋಣ’ ಎಂದರು.</p>.<p>ಕೃಷಿ ಅಧಿಕಾರಿಗಳಾದ ಸೋಂಪುರ ಹೋಬಳಿಯ ರವಿಕುಮಾರ್, ತ್ಯಾಮಗೊಂಡ್ಲುವಿನ ಜಿ.ಅಂಜನಾ, ಕಸಬಾ ಹೋಬಳಿಯ ನವೀನಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>