‘ಗ್ರಾಮೀಣ ಭಾಗದಲ್ಲಿನ ಅಸಮಾನತೆಯ ಮೇಲೆ ಈ ಪುಸ್ತಕವು ಬೆಳಕು ಚೆಲ್ಲುತ್ತದೆ. ಸಮೀಕ್ಷೆಯ ಆಧಾರದಲ್ಲಿ ಇದನ್ನು ಪ್ರತಿಪಾದಿಸಲಾಗಿದೆ. ಪುಸ್ತಕದ ಅಧ್ಯಾಯವೊಂದರಲ್ಲಿ ಶಿಕ್ಷಣ, ಆರೋಗ್ಯ, ಜಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿನ ಅಸಮಾನತೆ ಹಾಗೂ ಅದರ ಅಪಾಯದ ಕುರಿತು ಚರ್ಚಿಸಲಾಗಿದೆ. ಸಾಹಿತ್ಯ ಲೋಕಕ್ಕೆ ಇದೊಂದು ಅಮೂಲ್ಯ ಗ್ರಂಥ. ಇದು ಕಾಲೇಜುಗಳಲ್ಲಿ ಬೋಧಿಸಲು ಯೋಗ್ಯವಾದ ಕೃತಿಯಾಗಿದೆ’ ಎಂದು ಹೇಳಿದರು.