<p><strong>ಬೆಂಗಳೂರು</strong>: ಯೋಗ ಪರಿಜ್ಞಾನ ಪ್ರತಿಷ್ಠಾನ, ಪೂರ್ಣಾಯುರ್ಧಾಮದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್ 7ನೇ ಬ್ಲಾಕ್ನಲ್ಲಿರುವ ಪೂರ್ಣಾಯುರ್ಧಾಮದಲ್ಲಿ ಡಿಸೆಂಬರ್ 13ರ ಬೆಳಿಗ್ಗೆ 10 ರಿಂದ ಪ್ರಾಚೀನ ನಕ್ಷತ್ರ ವನ ನಿರ್ಮಾಣ ಹಾಗೂ ಯೋಗ, ವೇದಾಂತ ಆಯುರ್ವೇದ ಆಧಾರಿತ ಜೀವನ ಶೈಲಿ ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.</p><p>ವಿಭು ಫೌಂಡೇಷನ್ ಹಾಗೂ ಶಿವಮೊಗ್ಗದ ವಿಶ್ವಂ ಓಆರ್ಜಿ ಫೌಂಡೇಷನ್ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p><p>ಮಾಹಿತಿಗೆ 94490 02020 </p><p>***********</p><h2><strong>ರೈಲು ನಿಲ್ದಾಣ: ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ</strong></h2><p><strong>ಬೆಂಗಳೂರು</strong>: ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಒತ್ತಾಯಿಸಿದ್ದಾರೆ. </p><p>ನವದೆಹಲಿಯ ರೈಲ್ ಭವನದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುವ ಶಶಿಧರ ಕೋಸಂಬೆ ಅವರು, ‘ಇತ್ತೀಚೆಗೆ ರೈಲುಗಳಲ್ಲಿ ಮಕ್ಕಳ ಕಳ್ಳಸಾಗಾಣೆ, ಮಕ್ಕಳ ನಾಪತ್ತೆ, ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಎಲ್ಲ ರೈಲು ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ (1098) ಪ್ರದರ್ಶನ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗ</p>.<h2><strong>ಅರ್ಜಿ ಅವಧಿ ವಿಸ್ತರಣೆ</strong></h2>.<p><strong>ಬೆಂಗಳೂರು</strong>: ಬೀಡಿ, ಸಿನಿ, ಕಬ್ಬಿಣದ ಅದಿರು, ಸುಣ್ಣದ ಕಲ್ಲು ಮತ್ತು ಡೊಲೊಮೈಟ್ ಗಣಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ಡಿ.19ರವರೆಗೆ ವಿಸ್ತರಿಸಲಾಗಿದೆ.</p><p>ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ<br>ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ನಲ್ಲಿ (scholarships.gov.in) ನಿಗದಿತ ಸಮಯ ದೊಳಗೆ ಪರಿಶೀಲನೆ ನಡೆಸುವಂತೆ ಕಾರ್ಮಿಕ ಕಲ್ಯಾಣ ಸಂಸ್ಥೆಯು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.</p><p>ಸಹಾಯಕ್ಕಾಗಿ 080 23471406 ಅಥವಾ 9148240554 ಸಂಪರ್ಕಿಸಬಹುದು.<br>wclwoblr-ka@nic.inಗೆ ಇ ಮೇಲ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<h2>ಹಾಡು ಹುಟ್ಟಿದ ಸಮಯ ಕಾರ್ಯಕ್ರಮ</h2><p><strong>ಬೆಂಗಳೂರು</strong>: ಕನ್ನಡದ ಹಳೆಯ ಹಾಡುಗಳು ರಚನೆಯಾದ ಕುತೂಹಲಕಾರಿ ಸನ್ನಿವೇಶಗಳನ್ನು ಬಿಚ್ಚಿಡುವ ‘ಹಾಡು ಹುಟ್ಟಿದ ಸಮಯ’ ಕಾರ್ಯಕ್ರಮ ಡಿ.14ರಂದು ಸಂಜೆ 6ಕ್ಕೆ ಕುಮಾರಸ್ವಾಮಿ ಬಡಾವಣೆಯ ದಯಾನಂದ ಸಾಗರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಕಣಕಾರ ಎ.ಆರ್. ಮಣಿಕಾಂತ ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ನಿರೂಪಕ ಸೌರಭ ಕುಲಕರ್ಣಿ ಕಥೆ ಹೇಳಲಿದ್ದಾರೆ. ಗಾಯಕರಾದ ಸಮನ್ವಿತಾ ಶರ್ಮ, ಅಜಯ್ ವಾರಿಯರ್, ಮೋಹನ್ ಕೃಷ್ಣ ಹಾಡಲಿದ್ದಾರೆ. ಶ್ರೀನಿವಾಸ್ ಸಂಗಡಿಗರ ವಾದ್ಯವೃಂದ ಇರಲಿದೆ. ನಮ್ರತಾ ತಂಡವು ನೃತ್ಯ ಮಾಡಲಿದೆ. ಬುಕ್ಮೈಶೋದಲ್ಲಿ ಟಿಕೆಟ್ ಪಡೆದುಕೊಳ್ಳಬಹುದು.</p>.<h2>17ಕ್ಕೆ ಬೆಳಗಾವಿ ಚಲೊ ಪ್ರತಿಭಟನೆ</h2><p><strong>ಬೆಂಗಳೂರು</strong>: ಒಳಮೀಸಲಾತಿಗೆ ಕಾನೂನಿನ ಸ್ವರೂಪ ನೀಡಬೇಕೆಂದು ಆಗ್ರಹಿಸಿ ಮಾದಿಗ ದಂಡೋರವು ಇದೇ 17ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ. </p><p>ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ದಂಡೋರದ ಬೆಂಗಳೂರು ನಗರ ಜಿಲ್ಲೆ ಘಟಕದ ಅಧ್ಯಕ್ಷ ತ್ರಿಲೋಕ್ ಚಂದರ್, ‘ಒಳಮೀಸಲಾತಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಸಂಪೂರ್ಣವಾಗಿ ಜಾರಿಗೊಳಿಸಬೇಕು. ಸಂಘಟನೆಯ ರಾಜ್ಯಾಧ್ಯಕ್ಷ ಬಿ. ನರಸಪ್ಪ ದಂಡೂರ ಅವರ ನಾಯಕತ್ವದಲ್ಲಿ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು. </p><p>‘ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗದ ವರದಿ ಅನುಸಾರ ಒಳಮೀಸಲಾತಿ ಜಾರಿಗೊಳಿಸದೆ, ಬಲಾಢ್ಯ ಸಚಿವರ ಕೈಗೊಂಬೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪದೇ ಪದೇ ನಮ್ಮ ಸಮುದಾಯಕ್ಕೆ ಮೋಸ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಯೋಗ ಪರಿಜ್ಞಾನ ಪ್ರತಿಷ್ಠಾನ, ಪೂರ್ಣಾಯುರ್ಧಾಮದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್ 7ನೇ ಬ್ಲಾಕ್ನಲ್ಲಿರುವ ಪೂರ್ಣಾಯುರ್ಧಾಮದಲ್ಲಿ ಡಿಸೆಂಬರ್ 13ರ ಬೆಳಿಗ್ಗೆ 10 ರಿಂದ ಪ್ರಾಚೀನ ನಕ್ಷತ್ರ ವನ ನಿರ್ಮಾಣ ಹಾಗೂ ಯೋಗ, ವೇದಾಂತ ಆಯುರ್ವೇದ ಆಧಾರಿತ ಜೀವನ ಶೈಲಿ ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.</p><p>ವಿಭು ಫೌಂಡೇಷನ್ ಹಾಗೂ ಶಿವಮೊಗ್ಗದ ವಿಶ್ವಂ ಓಆರ್ಜಿ ಫೌಂಡೇಷನ್ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p><p>ಮಾಹಿತಿಗೆ 94490 02020 </p><p>***********</p><h2><strong>ರೈಲು ನಿಲ್ದಾಣ: ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ</strong></h2><p><strong>ಬೆಂಗಳೂರು</strong>: ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಒತ್ತಾಯಿಸಿದ್ದಾರೆ. </p><p>ನವದೆಹಲಿಯ ರೈಲ್ ಭವನದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುವ ಶಶಿಧರ ಕೋಸಂಬೆ ಅವರು, ‘ಇತ್ತೀಚೆಗೆ ರೈಲುಗಳಲ್ಲಿ ಮಕ್ಕಳ ಕಳ್ಳಸಾಗಾಣೆ, ಮಕ್ಕಳ ನಾಪತ್ತೆ, ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಎಲ್ಲ ರೈಲು ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ (1098) ಪ್ರದರ್ಶನ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗ</p>.<h2><strong>ಅರ್ಜಿ ಅವಧಿ ವಿಸ್ತರಣೆ</strong></h2>.<p><strong>ಬೆಂಗಳೂರು</strong>: ಬೀಡಿ, ಸಿನಿ, ಕಬ್ಬಿಣದ ಅದಿರು, ಸುಣ್ಣದ ಕಲ್ಲು ಮತ್ತು ಡೊಲೊಮೈಟ್ ಗಣಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ಡಿ.19ರವರೆಗೆ ವಿಸ್ತರಿಸಲಾಗಿದೆ.</p><p>ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ<br>ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ನಲ್ಲಿ (scholarships.gov.in) ನಿಗದಿತ ಸಮಯ ದೊಳಗೆ ಪರಿಶೀಲನೆ ನಡೆಸುವಂತೆ ಕಾರ್ಮಿಕ ಕಲ್ಯಾಣ ಸಂಸ್ಥೆಯು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.</p><p>ಸಹಾಯಕ್ಕಾಗಿ 080 23471406 ಅಥವಾ 9148240554 ಸಂಪರ್ಕಿಸಬಹುದು.<br>wclwoblr-ka@nic.inಗೆ ಇ ಮೇಲ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<h2>ಹಾಡು ಹುಟ್ಟಿದ ಸಮಯ ಕಾರ್ಯಕ್ರಮ</h2><p><strong>ಬೆಂಗಳೂರು</strong>: ಕನ್ನಡದ ಹಳೆಯ ಹಾಡುಗಳು ರಚನೆಯಾದ ಕುತೂಹಲಕಾರಿ ಸನ್ನಿವೇಶಗಳನ್ನು ಬಿಚ್ಚಿಡುವ ‘ಹಾಡು ಹುಟ್ಟಿದ ಸಮಯ’ ಕಾರ್ಯಕ್ರಮ ಡಿ.14ರಂದು ಸಂಜೆ 6ಕ್ಕೆ ಕುಮಾರಸ್ವಾಮಿ ಬಡಾವಣೆಯ ದಯಾನಂದ ಸಾಗರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಕಣಕಾರ ಎ.ಆರ್. ಮಣಿಕಾಂತ ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ನಿರೂಪಕ ಸೌರಭ ಕುಲಕರ್ಣಿ ಕಥೆ ಹೇಳಲಿದ್ದಾರೆ. ಗಾಯಕರಾದ ಸಮನ್ವಿತಾ ಶರ್ಮ, ಅಜಯ್ ವಾರಿಯರ್, ಮೋಹನ್ ಕೃಷ್ಣ ಹಾಡಲಿದ್ದಾರೆ. ಶ್ರೀನಿವಾಸ್ ಸಂಗಡಿಗರ ವಾದ್ಯವೃಂದ ಇರಲಿದೆ. ನಮ್ರತಾ ತಂಡವು ನೃತ್ಯ ಮಾಡಲಿದೆ. ಬುಕ್ಮೈಶೋದಲ್ಲಿ ಟಿಕೆಟ್ ಪಡೆದುಕೊಳ್ಳಬಹುದು.</p>.<h2>17ಕ್ಕೆ ಬೆಳಗಾವಿ ಚಲೊ ಪ್ರತಿಭಟನೆ</h2><p><strong>ಬೆಂಗಳೂರು</strong>: ಒಳಮೀಸಲಾತಿಗೆ ಕಾನೂನಿನ ಸ್ವರೂಪ ನೀಡಬೇಕೆಂದು ಆಗ್ರಹಿಸಿ ಮಾದಿಗ ದಂಡೋರವು ಇದೇ 17ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ. </p><p>ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ದಂಡೋರದ ಬೆಂಗಳೂರು ನಗರ ಜಿಲ್ಲೆ ಘಟಕದ ಅಧ್ಯಕ್ಷ ತ್ರಿಲೋಕ್ ಚಂದರ್, ‘ಒಳಮೀಸಲಾತಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಸಂಪೂರ್ಣವಾಗಿ ಜಾರಿಗೊಳಿಸಬೇಕು. ಸಂಘಟನೆಯ ರಾಜ್ಯಾಧ್ಯಕ್ಷ ಬಿ. ನರಸಪ್ಪ ದಂಡೂರ ಅವರ ನಾಯಕತ್ವದಲ್ಲಿ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು. </p><p>‘ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗದ ವರದಿ ಅನುಸಾರ ಒಳಮೀಸಲಾತಿ ಜಾರಿಗೊಳಿಸದೆ, ಬಲಾಢ್ಯ ಸಚಿವರ ಕೈಗೊಂಬೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪದೇ ಪದೇ ನಮ್ಮ ಸಮುದಾಯಕ್ಕೆ ಮೋಸ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>