<p><strong>ಬೆಂಗಳೂರು</strong>: ಲಾಕ್ಡೌನ್ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಬೇಕು? ಎಂಬ ಬಗ್ಗೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಸಿಬ್ಬಂದಿಗೆ ವೈರ್ಲೆಸ್ ಮೂಲಕ ಕೆಲ ಸೂಚನೆಗಳನ್ನು ನೀಡಿದ್ದಾರೆ.</p>.<p>* ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು.<br />* ಯಾವುದೇ ಪಾಸ್ ಇರುವುದಿಲ್ಲ. ಅಗತ್ಯ ಸೇವೆ ಸಲ್ಲಿಸುವರ ಗುರುತಿನ ಚೀಟಿ ಪರಿಶೀಲಿಸಿ ಸಂಚಾರಕ್ಕೆ ಅವಕಾಶ ನೀಡಬೇಕು.<br />* ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳ ಗುರುತಿನ ಚೀಟಿ ನೋಡಿ ಬಿಡಬೇಕು.<br />* ಗುರುತಿನ ಚೀಟಿ ಇಲ್ಲದವರು ಹಣ್ಣು–ತರಕಾರಿ ಮಾರಾಟ ಮಾಡಲು ಬರುತ್ತಾರೆ. ಅವರಿಗೆ ಯಾವುದೇ ತೊಂದರೆ ನೀಡಬಾರದು. ವಿವೇಚನೆ ಬಳಸಿ ಕೆಲಸ ಮಾಡಬೇಕು<br />* ಅನಗತ್ಯವಾಗಿ ಓಡಾಡುವರ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳಬೇಕು<br />* ಜನರ ಜೊತೆ ಜಗಳ ಮಾಡಬಾರದು. ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಬಲಪ್ರಯೋಗ ಮಾಡಬಾರದು<br />* ಪ್ರತಿ ಚೆಕ್ಪೋಸ್ಟ್ನಲ್ಲೂ ಹೆಡ್ ಕಾನ್ಸ್ಟೆಬಲ್, ಎಎಸ್ಐ ಅವರೇ ಕಮಿಷನರ್ ರೀತಿಯಲ್ಲಿ ಕೆಲಸ ಮಾಡಬೇಕು. ಅವರ ಮೇಲೆ ಜವಾಬ್ದಾರಿ ಹಾಗೂ ಗೌರವ ಹೆಚ್ಚಿದೆ.<br />* ಹಲವು ಪೊಲೀಸ್ ಸಿಬ್ಬಂದಿ ಕ್ವಾರಂಟೈನ್ನಲ್ಲಿ ಇದ್ದಾರೆ. ಸೇವಾ ಮನೋಭಾನವುಳ್ಳ ಜನರನ್ನು ಸ್ವಯಂಸೇವಕರಾಗಿ ನೇಮಿಸಿಕೊಳ್ಳಾಗುತ್ತಿದೆ. ಠಾಣೆಯ ಪ್ರತಿಯೊಬ್ಬರು ಸ್ವಯಂಸೇವಕರನ್ನು ಗೌರವದಿಂದ ನೋಡಿಕೊಳ್ಳಬೇಕು<br />* ಸ್ವಯಂ ಸೇವಕರಿಗೆ ಜಾಕೆಟ್ ಮತ್ತು ಟೋಪಿ ನೀಡಬೇಕು.<br />* ಕಾನ್ಸ್ಟೆಬಲ್ ಜೊತೆ ರಾತ್ರಿ ಗಸ್ತು, ಪೊಲೀಸ್ ಠಾಣೆಯಲ್ಲಿ ಸಂದರ್ಶಕರ ಅಹವಾಲು ಸ್ವೀಕಾರ, ಬ್ಯಾರಿಕೇಡ್ ಬಳಿ ಕೆಲಸ, ಠಾಣೆಯಲ್ಲಿ ಬರವಣಿಗೆ– ಕಂಪ್ಯೂಟರ್ ಕೆಲಸವನ್ನು ಸ್ವಯಂಸೇವಕರಿಂದ ಮಾಡಿಸಿಕೊಳ್ಳಬೇಕು. ಅವರ ಕೈಗೆ ಲಾಠಿ, ರೈಫಲ್ ಕೊಡಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಲಾಕ್ಡೌನ್ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಬೇಕು? ಎಂಬ ಬಗ್ಗೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಸಿಬ್ಬಂದಿಗೆ ವೈರ್ಲೆಸ್ ಮೂಲಕ ಕೆಲ ಸೂಚನೆಗಳನ್ನು ನೀಡಿದ್ದಾರೆ.</p>.<p>* ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು.<br />* ಯಾವುದೇ ಪಾಸ್ ಇರುವುದಿಲ್ಲ. ಅಗತ್ಯ ಸೇವೆ ಸಲ್ಲಿಸುವರ ಗುರುತಿನ ಚೀಟಿ ಪರಿಶೀಲಿಸಿ ಸಂಚಾರಕ್ಕೆ ಅವಕಾಶ ನೀಡಬೇಕು.<br />* ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳ ಗುರುತಿನ ಚೀಟಿ ನೋಡಿ ಬಿಡಬೇಕು.<br />* ಗುರುತಿನ ಚೀಟಿ ಇಲ್ಲದವರು ಹಣ್ಣು–ತರಕಾರಿ ಮಾರಾಟ ಮಾಡಲು ಬರುತ್ತಾರೆ. ಅವರಿಗೆ ಯಾವುದೇ ತೊಂದರೆ ನೀಡಬಾರದು. ವಿವೇಚನೆ ಬಳಸಿ ಕೆಲಸ ಮಾಡಬೇಕು<br />* ಅನಗತ್ಯವಾಗಿ ಓಡಾಡುವರ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳಬೇಕು<br />* ಜನರ ಜೊತೆ ಜಗಳ ಮಾಡಬಾರದು. ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಬಲಪ್ರಯೋಗ ಮಾಡಬಾರದು<br />* ಪ್ರತಿ ಚೆಕ್ಪೋಸ್ಟ್ನಲ್ಲೂ ಹೆಡ್ ಕಾನ್ಸ್ಟೆಬಲ್, ಎಎಸ್ಐ ಅವರೇ ಕಮಿಷನರ್ ರೀತಿಯಲ್ಲಿ ಕೆಲಸ ಮಾಡಬೇಕು. ಅವರ ಮೇಲೆ ಜವಾಬ್ದಾರಿ ಹಾಗೂ ಗೌರವ ಹೆಚ್ಚಿದೆ.<br />* ಹಲವು ಪೊಲೀಸ್ ಸಿಬ್ಬಂದಿ ಕ್ವಾರಂಟೈನ್ನಲ್ಲಿ ಇದ್ದಾರೆ. ಸೇವಾ ಮನೋಭಾನವುಳ್ಳ ಜನರನ್ನು ಸ್ವಯಂಸೇವಕರಾಗಿ ನೇಮಿಸಿಕೊಳ್ಳಾಗುತ್ತಿದೆ. ಠಾಣೆಯ ಪ್ರತಿಯೊಬ್ಬರು ಸ್ವಯಂಸೇವಕರನ್ನು ಗೌರವದಿಂದ ನೋಡಿಕೊಳ್ಳಬೇಕು<br />* ಸ್ವಯಂ ಸೇವಕರಿಗೆ ಜಾಕೆಟ್ ಮತ್ತು ಟೋಪಿ ನೀಡಬೇಕು.<br />* ಕಾನ್ಸ್ಟೆಬಲ್ ಜೊತೆ ರಾತ್ರಿ ಗಸ್ತು, ಪೊಲೀಸ್ ಠಾಣೆಯಲ್ಲಿ ಸಂದರ್ಶಕರ ಅಹವಾಲು ಸ್ವೀಕಾರ, ಬ್ಯಾರಿಕೇಡ್ ಬಳಿ ಕೆಲಸ, ಠಾಣೆಯಲ್ಲಿ ಬರವಣಿಗೆ– ಕಂಪ್ಯೂಟರ್ ಕೆಲಸವನ್ನು ಸ್ವಯಂಸೇವಕರಿಂದ ಮಾಡಿಸಿಕೊಳ್ಳಬೇಕು. ಅವರ ಕೈಗೆ ಲಾಠಿ, ರೈಫಲ್ ಕೊಡಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>