ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗಳ–ಬಲಪ್ರಯೋಗ ಬೇಡ; ವಿವೇಚನೆಯಿಂದ ಕೆಲಸ ಮಾಡಿ’

ಲಾಕ್‌ಡೌನ್; ಪೊಲೀಸರಿಗೆ ಕಮಿಷನರ್ ವೈರ್‌ಲೆಸ್ ಸೂಚನೆ
Last Updated 14 ಜುಲೈ 2020, 20:42 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಬೇಕು? ಎಂಬ ಬಗ್ಗೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಸಿಬ್ಬಂದಿಗೆ ವೈರ್‌ಲೆಸ್ ಮೂಲಕ ಕೆಲ ಸೂಚನೆಗಳನ್ನು ನೀಡಿದ್ದಾರೆ.

* ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು.
* ಯಾವುದೇ ಪಾಸ್‌ ಇರುವುದಿಲ್ಲ. ಅಗತ್ಯ ಸೇವೆ ಸಲ್ಲಿಸುವರ ಗುರುತಿನ ಚೀಟಿ ಪರಿಶೀಲಿಸಿ ಸಂಚಾರಕ್ಕೆ ಅವಕಾಶ ನೀಡಬೇಕು.
* ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳ ಗುರುತಿನ ಚೀಟಿ ನೋಡಿ ಬಿಡಬೇಕು.
* ಗುರುತಿನ ಚೀಟಿ ಇಲ್ಲದವರು ಹಣ್ಣು–ತರಕಾರಿ ಮಾರಾಟ ಮಾಡಲು ಬರುತ್ತಾರೆ. ಅವರಿಗೆ ಯಾವುದೇ ತೊಂದರೆ ನೀಡಬಾರದು. ವಿವೇಚನೆ ಬಳಸಿ ಕೆಲಸ ಮಾಡಬೇಕು
* ಅನಗತ್ಯವಾಗಿ ಓಡಾಡುವರ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳಬೇಕು
* ಜನರ ಜೊತೆ ಜಗಳ ಮಾಡಬಾರದು. ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಬಲಪ್ರಯೋಗ ಮಾಡಬಾರದು
* ಪ್ರತಿ ಚೆಕ್‌ಪೋಸ್ಟ್‌ನಲ್ಲೂ ಹೆಡ್ ಕಾನ್‌ಸ್ಟೆಬಲ್, ಎಎಸ್‌ಐ ಅವರೇ ಕಮಿಷನರ್ ರೀತಿಯಲ್ಲಿ ಕೆಲಸ ಮಾಡಬೇಕು. ಅವರ ಮೇಲೆ ಜವಾಬ್ದಾರಿ ಹಾಗೂ ಗೌರವ ಹೆಚ್ಚಿದೆ.
* ಹಲವು ಪೊಲೀಸ್ ಸಿಬ್ಬಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ಸೇವಾ ಮನೋಭಾನವುಳ್ಳ ಜನರನ್ನು ಸ್ವಯಂಸೇವಕರಾಗಿ ನೇಮಿಸಿಕೊಳ್ಳಾಗುತ್ತಿದೆ. ಠಾಣೆಯ ಪ್ರತಿಯೊಬ್ಬರು ಸ್ವಯಂಸೇವಕರನ್ನು ಗೌರವದಿಂದ ನೋಡಿಕೊಳ್ಳಬೇಕು
* ಸ್ವಯಂ ಸೇವಕರಿಗೆ ಜಾಕೆಟ್ ಮತ್ತು ಟೋಪಿ ನೀಡಬೇಕು.
* ಕಾನ್‌ಸ್ಟೆಬಲ್ ಜೊತೆ ರಾತ್ರಿ ಗಸ್ತು, ಪೊಲೀಸ್ ಠಾಣೆಯಲ್ಲಿ ಸಂದರ್ಶಕರ ಅಹವಾಲು ಸ್ವೀಕಾರ, ಬ್ಯಾರಿಕೇಡ್ ಬಳಿ ಕೆಲಸ, ಠಾಣೆಯಲ್ಲಿ ಬರವಣಿಗೆ– ಕಂಪ್ಯೂಟರ್ ಕೆಲಸವನ್ನು ಸ್ವಯಂಸೇವಕರಿಂದ ಮಾಡಿಸಿಕೊಳ್ಳಬೇಕು. ಅವರ ಕೈಗೆ ಲಾಠಿ, ರೈಫಲ್ ಕೊಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT