<p><strong>ಬೆಂಗಳೂರು</strong>: ‘ಸರ್ಕಾರಗಳು ನೀಡುವ ಪ್ರಶಸ್ತಿಗಳು ಇತ್ತೀಚೆಗೆ ಪಾರದರ್ಶಕತೆ ಕಳೆದುಕೊಳ್ಳುತ್ತಿವೆ. ಜಾತಿ ಮೊದಲಾದ ಮಾನದಂಡಗಳ ಆಧಾರದಲ್ಲಿ ಆಯ್ಕೆ ಮಾಡುತ್ತಿರುವುದೇ ಇದಕ್ಕೆ ಕಾರಣ’ ಎಂದು ರಂಗಕರ್ಮಿ ಮಾಲತೇಶ್ ಬಡಿಗೇರ್ ತಿಳಿಸಿದರು. </p>.<p>ಪ್ರವರ ಥಿಯೇಟರ್ ನಗರದಲ್ಲಿ ಶನಿವಾರ ಹಮ್ಮಿಕೊಂಡ 11ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಟ, ರಂಗನಿರ್ದೇಶಕ ಪ್ರದೀಪ್ ಚಂದ್ರ ಕುತ್ಪಾಡಿ ಅವರಿಗೆ ‘ಪ್ರವರ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ಸರ್ಕಾರಗಳು ಗುರುತಿಸದ ನೈಜ ಸಾಧಕರನ್ನು ಸಂಘ–ಸಂಸ್ಥೆಗಳು ಗುರುತಿಸಿ, ಗೌರವಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. </p>.<p>ಪ್ರದೀಪ್ ಚಂದ್ರ ಕುತ್ಪಾಡಿ, ‘ಎಡ–ಬಲ ಪಂಥಗಳ ನಡುವೆ ನಾವು ನಾಟಕ ಪಂಥವನ್ನು ಕಂಡುಕೊಂಡಿದ್ದೇವೆ. ರಾಜಕೀಯ ಮಾಡಲು ಹೊರಗಡೆ ಬೇಕಾದಷ್ಟು ಅವಕಾಶಗಳಿವೆ. ಕಲೆಗೆ ಸಂಬಂಧಿಸಿದಂತೆ ಯಾವುದೇ ಪಂಥಕ್ಕೆ ಒಳಗಾಗದೆ, ಪ್ರದರ್ಶನ ನೀಡಿದರೆ ಎಲ್ಲರೂ ನಮ್ಮನ್ನು ಒಪ್ಪಿಕೊಳ್ಳುತ್ತಾರೆ’ ಎಂದು ತಿಳಿಸಿದರು.</p>.<p>‘ನಾಟಕ ಕಲಾವಿದರು ತಿಂಗಳಾನುಗಟ್ಟಲೆ ರಂಗಾಭ್ಯಾಸ ಮಾಡುತ್ತಾರೆ. ಪ್ರದರ್ಶನದ ದಿನ ಪ್ರೇಕ್ಷರಿಲ್ಲದಿದ್ದರೆ ನಿರಾಶೆಯಾಗುತ್ತದೆ. ಕಲಾ ಪೋಷಕರು ತಂಡಕ್ಕೆ ಬೆನ್ನು ತಟ್ಟಿದಾಗ ಅದು ಗಟ್ಟಿಯಾಗಿ ನಿಲ್ಲುತ್ತದೆ’ ಎಂದು ಹೇಳಿದರು. </p>.<p>ಪ್ರವರ ಥಿಯೇಟರ್ ಸಂಸ್ಥಾಪನಾ ನಿರ್ದೇಶಕ ಹನು ರಾಮಸಂಜೀವ ಅವರು ತಮ್ಮ ತಂಡ ಬೆಳೆದು ಬಂದ ಬಗೆ ಹಾಗೂ ನೀಡಿದ ಪ್ರದರ್ಶನಗಳ ಬಗ್ಗೆ ವಿವರಿಸಿದರು. </p>.<p>ಬಳಿಕ ಪ್ರವರ ತಂಡದಿಂದ ‘ಅಣು ರೇಣು ತೃಣ ಕಾಷ್ಠ’ ನಾಟಕ ಪ್ರದರ್ಶನ ಕಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸರ್ಕಾರಗಳು ನೀಡುವ ಪ್ರಶಸ್ತಿಗಳು ಇತ್ತೀಚೆಗೆ ಪಾರದರ್ಶಕತೆ ಕಳೆದುಕೊಳ್ಳುತ್ತಿವೆ. ಜಾತಿ ಮೊದಲಾದ ಮಾನದಂಡಗಳ ಆಧಾರದಲ್ಲಿ ಆಯ್ಕೆ ಮಾಡುತ್ತಿರುವುದೇ ಇದಕ್ಕೆ ಕಾರಣ’ ಎಂದು ರಂಗಕರ್ಮಿ ಮಾಲತೇಶ್ ಬಡಿಗೇರ್ ತಿಳಿಸಿದರು. </p>.<p>ಪ್ರವರ ಥಿಯೇಟರ್ ನಗರದಲ್ಲಿ ಶನಿವಾರ ಹಮ್ಮಿಕೊಂಡ 11ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಟ, ರಂಗನಿರ್ದೇಶಕ ಪ್ರದೀಪ್ ಚಂದ್ರ ಕುತ್ಪಾಡಿ ಅವರಿಗೆ ‘ಪ್ರವರ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ಸರ್ಕಾರಗಳು ಗುರುತಿಸದ ನೈಜ ಸಾಧಕರನ್ನು ಸಂಘ–ಸಂಸ್ಥೆಗಳು ಗುರುತಿಸಿ, ಗೌರವಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. </p>.<p>ಪ್ರದೀಪ್ ಚಂದ್ರ ಕುತ್ಪಾಡಿ, ‘ಎಡ–ಬಲ ಪಂಥಗಳ ನಡುವೆ ನಾವು ನಾಟಕ ಪಂಥವನ್ನು ಕಂಡುಕೊಂಡಿದ್ದೇವೆ. ರಾಜಕೀಯ ಮಾಡಲು ಹೊರಗಡೆ ಬೇಕಾದಷ್ಟು ಅವಕಾಶಗಳಿವೆ. ಕಲೆಗೆ ಸಂಬಂಧಿಸಿದಂತೆ ಯಾವುದೇ ಪಂಥಕ್ಕೆ ಒಳಗಾಗದೆ, ಪ್ರದರ್ಶನ ನೀಡಿದರೆ ಎಲ್ಲರೂ ನಮ್ಮನ್ನು ಒಪ್ಪಿಕೊಳ್ಳುತ್ತಾರೆ’ ಎಂದು ತಿಳಿಸಿದರು.</p>.<p>‘ನಾಟಕ ಕಲಾವಿದರು ತಿಂಗಳಾನುಗಟ್ಟಲೆ ರಂಗಾಭ್ಯಾಸ ಮಾಡುತ್ತಾರೆ. ಪ್ರದರ್ಶನದ ದಿನ ಪ್ರೇಕ್ಷರಿಲ್ಲದಿದ್ದರೆ ನಿರಾಶೆಯಾಗುತ್ತದೆ. ಕಲಾ ಪೋಷಕರು ತಂಡಕ್ಕೆ ಬೆನ್ನು ತಟ್ಟಿದಾಗ ಅದು ಗಟ್ಟಿಯಾಗಿ ನಿಲ್ಲುತ್ತದೆ’ ಎಂದು ಹೇಳಿದರು. </p>.<p>ಪ್ರವರ ಥಿಯೇಟರ್ ಸಂಸ್ಥಾಪನಾ ನಿರ್ದೇಶಕ ಹನು ರಾಮಸಂಜೀವ ಅವರು ತಮ್ಮ ತಂಡ ಬೆಳೆದು ಬಂದ ಬಗೆ ಹಾಗೂ ನೀಡಿದ ಪ್ರದರ್ಶನಗಳ ಬಗ್ಗೆ ವಿವರಿಸಿದರು. </p>.<p>ಬಳಿಕ ಪ್ರವರ ತಂಡದಿಂದ ‘ಅಣು ರೇಣು ತೃಣ ಕಾಷ್ಠ’ ನಾಟಕ ಪ್ರದರ್ಶನ ಕಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>