ಎನ್.ಮಂಜುನಾಥ ಪ್ರಸಾದ್, ‘ಶಿವಾಜಿನಗರವನ್ನು ಸ್ವಚ್ಛ ಹಾಗೂ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ರೂಪಿಸುವುದು ಜನರ ಕೈಯಲ್ಲೇ ಇದೆ. ಕಸದ ರಾಶಿಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಸುಂದರೀಕರಿಸಿದ ಬಳಿಕ ಮತ್ತೆ ಅಲ್ಲಿ ಯಾರೂ ಕಸ ಸುರಿಯದಂತೆ ಸ್ಥಳೀಯರು ನೋಡಿಕೊಳ್ಳಬೇಕು. ಕಸ ಸಂಗ್ರಹಿಸಲು ಆಟೊಟಿಪ್ಪರ್ನಲ್ಲಿ ಮನೆ ಮನೆಗೆ ಬರುವ ಪಾಲಿಕೆ ಸಿಬ್ಬಂದಿಗೇ ಕಸವನ್ನು ನೀಡಬೇಕು. ಇದು ಎಲ್ಲರ ಸಾಮುದಾಯಿಕ ಜವಾಬ್ದಾರಿ. ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದರೆ ಕಸದ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬಹುದು’ ಎಂದರು.