ಬಳಿಕ ಮಾತನಾಡಿದ ಅವರು, ‘ಕೆಲ ಪುಸ್ತಕಗಳನ್ನು ನಾನು ಓದಿದ ಗದ್ದೆಹೊಸೂರು ಸರ್ಕಾರಿ ಶಾಲೆಗೆ ನೀಡಬೇಕೆಂದು ನಿರ್ಧರಿಸಿದೆ. ಆದರೆ, ಆ ಶಾಲೆ ಈಗ ಮುಚ್ಚಿದೆ ಎಂದು ತಿಳಿದು ಬೇಸರವಾಯಿತು. ಆಂಗ್ಲ ಮಾಧ್ಯಮದ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹಳ್ಳಿಗಳಲ್ಲಿರುವ ಶಾಲೆಗಳನ್ನು ಉಳಿಸಬೇಕು. ನಮ್ಮ ಊರುಗಳಿಗೆ ಕೈಲಾದ ಕೊಡುಗೆ ನೀಡಬೇಕು. ನಮ್ಮ ಮನೆಯಲ್ಲಿ 5 ಲಕ್ಷ ಪುಸ್ತಕಗಳಿವೆ. ಪಿಲ್ಲರ್ ಇಲ್ಲದ ಮನೆಯಲ್ಲಿ ಇನ್ನಷ್ಟು ಪುಸ್ತಕ ಇರಿಸಿದಲ್ಲಿ ಮನೆ ಕುಸಿದು ಬೀಳಲಿದೆ’ ಎಂದರು.