ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ | ರಸ್ತೆ, ಮೇಲ್ಸೇತುವೆಗಳಲ್ಲೇ ನಿಂತ ನೀರು: ಬಿಬಿಎಂಪಿ ಭರವಸೆ ಹುಸಿ

Published : 21 ಜೂನ್ 2024, 0:30 IST
Last Updated : 21 ಜೂನ್ 2024, 0:30 IST
ಫಾಲೋ ಮಾಡಿ
Comments
ಕಸ್ತೂರಬಾ ರಸ್ತೆಯಲ್ಲಿ ಮಳೆನೀರಿನೊಂದಿಗೆ ಮ್ಯಾನ್‌ಹೋಲ್‌ನ ಕೊಳಕು ನೀರೂ ರಸ್ತೆಯಲ್ಲೇ ನಿಂತಿತ್ತು
ಪ್ರಜಾವಾಣಿ ಚಿತ್ರ ಬಿ.ಕೆ. ಜನಾರ್ಧನ
ಕಸ್ತೂರಬಾ ರಸ್ತೆಯಲ್ಲಿ ಮಳೆನೀರಿನೊಂದಿಗೆ ಮ್ಯಾನ್‌ಹೋಲ್‌ನ ಕೊಳಕು ನೀರೂ ರಸ್ತೆಯಲ್ಲೇ ನಿಂತಿತ್ತು ಪ್ರಜಾವಾಣಿ ಚಿತ್ರ ಬಿ.ಕೆ. ಜನಾರ್ಧನ
‘ಎಂಜಿನಿಯರ್‌ಗಳು ರಸ್ತೆಗೆ ಬರಲಿ’
‘ಬಿಬಿಎಂಪಿ ಎಂಜಿನಿಯರ್‌ಗಳು ಆಯುಕ್ತರು ಕಚೇರಿಯಲ್ಲಿ ಕುಳಿತು ಸಿ.ಸಿ. ಕ್ಯಾಮೆರಾದಲ್ಲಿ ನೋಡಿ ಆ‍್ಯಪ್‌ಗಳನ್ನು ತಯಾರಿಸಲು ಆದ್ಯತೆ ನೀಡದೆ ರಸ್ತೆಗೆ ಬಂದು ನೋಡಲಿ. ಸಣ್ಣ ಮಳೆಬಂದರೂ ರಸ್ತೆಯಲ್ಲಿ ನೀರು ನಿಂತು ಸಾಕಷ್ಟು ಸಮಸ್ಯೆಯಾಗುತ್ತಿದೆ. ಎಂಜಿನಿಯರ್‌ಗಳು ಮುಖ್ಯ ಆಯುಕ್ತರು ಮಳೆ ಬಂದಾಗ ರಸ್ತೆಗೆ ಬರಲಿ ಸಮಸ್ಯೆಯ ಅರಿವಾಗುತ್ತದೆ’ ಎಂದು ವಾಹನ ಸವಾರ ರಮೇಶ್‌ ಭಟ್‌ ಆಕ್ರೋಶ ವ್ಯಕ್ತಪಡಿಸಿದರು. ಮೇಲ್ಸೇತುವೆಯಲ್ಲೂ ನೀರು ಟೌನ್‌ಹಾಲ್‌ನಿಂದ ಸಿರ್ಸಿ ವೃತ್ತದವರೆಗಿನ ಮೇಲ್ಸೇತುವೆ ನಾಯಂಡಹಳ್ಳಿ ಮೇಲ್ಸೇತುವೆಗಳ ಮೇಲೆ ಹಾಗೂ ಪ್ರಾರಂಭ ಸ್ಥಳಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ದ್ವಿಚಕ್ರ ವಾಹನಗಳ ಸವಾರರು ಸಾಕಷ್ಟು ಪರದಾಡಿದರು. ‘ಮೇಲ್ಸೇತುವೆಗಳ ಮೇಲೆ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಮಳೆನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಮೇಲ್ಸೇತುವೆಗಳ ಮೇಲೆ ದೀಪಗಳೂ ಹಾಳಾಗಿವೆ. ಬಲ್ಪ್‌ಗಳನ್ನೂ ಬದಲಿಸಿಲ್ಲ’ ಎಂದು ವಾಹನ ಸವಾರ ಶ್ರೀನಿವಾಸ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT