ಕಸ್ತೂರಬಾ ರಸ್ತೆಯಲ್ಲಿ ಮಳೆನೀರಿನೊಂದಿಗೆ ಮ್ಯಾನ್ಹೋಲ್ನ ಕೊಳಕು ನೀರೂ ರಸ್ತೆಯಲ್ಲೇ ನಿಂತಿತ್ತು
ಪ್ರಜಾವಾಣಿ ಚಿತ್ರ ಬಿ.ಕೆ. ಜನಾರ್ಧನ
‘ಎಂಜಿನಿಯರ್ಗಳು ರಸ್ತೆಗೆ ಬರಲಿ’
‘ಬಿಬಿಎಂಪಿ ಎಂಜಿನಿಯರ್ಗಳು ಆಯುಕ್ತರು ಕಚೇರಿಯಲ್ಲಿ ಕುಳಿತು ಸಿ.ಸಿ. ಕ್ಯಾಮೆರಾದಲ್ಲಿ ನೋಡಿ ಆ್ಯಪ್ಗಳನ್ನು ತಯಾರಿಸಲು ಆದ್ಯತೆ ನೀಡದೆ ರಸ್ತೆಗೆ ಬಂದು ನೋಡಲಿ. ಸಣ್ಣ ಮಳೆಬಂದರೂ ರಸ್ತೆಯಲ್ಲಿ ನೀರು ನಿಂತು ಸಾಕಷ್ಟು ಸಮಸ್ಯೆಯಾಗುತ್ತಿದೆ. ಎಂಜಿನಿಯರ್ಗಳು ಮುಖ್ಯ ಆಯುಕ್ತರು ಮಳೆ ಬಂದಾಗ ರಸ್ತೆಗೆ ಬರಲಿ ಸಮಸ್ಯೆಯ ಅರಿವಾಗುತ್ತದೆ’ ಎಂದು ವಾಹನ ಸವಾರ ರಮೇಶ್ ಭಟ್ ಆಕ್ರೋಶ ವ್ಯಕ್ತಪಡಿಸಿದರು. ಮೇಲ್ಸೇತುವೆಯಲ್ಲೂ ನೀರು ಟೌನ್ಹಾಲ್ನಿಂದ ಸಿರ್ಸಿ ವೃತ್ತದವರೆಗಿನ ಮೇಲ್ಸೇತುವೆ ನಾಯಂಡಹಳ್ಳಿ ಮೇಲ್ಸೇತುವೆಗಳ ಮೇಲೆ ಹಾಗೂ ಪ್ರಾರಂಭ ಸ್ಥಳಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ದ್ವಿಚಕ್ರ ವಾಹನಗಳ ಸವಾರರು ಸಾಕಷ್ಟು ಪರದಾಡಿದರು. ‘ಮೇಲ್ಸೇತುವೆಗಳ ಮೇಲೆ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಮಳೆನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಮೇಲ್ಸೇತುವೆಗಳ ಮೇಲೆ ದೀಪಗಳೂ ಹಾಳಾಗಿವೆ. ಬಲ್ಪ್ಗಳನ್ನೂ ಬದಲಿಸಿಲ್ಲ’ ಎಂದು ವಾಹನ ಸವಾರ ಶ್ರೀನಿವಾಸ್ ದೂರಿದರು.