<p><strong>ಬೆಂಗಳೂರು:</strong> ‘ಅಣುಕು ಮತದಾನದಲ್ಲಿ ಒಂದಷ್ಟು ದೋಷ ಕಂಡುಬಂದಿದ್ದು ಸರಿಪಡಿಸಲಾಗಿದೆ. ಒಂಬತ್ತು ಕಂಟ್ರೋಲ್ ಯುನಿಟ್ ಬದಲಾಯಿಸಿದ್ದೇವೆ. 3 ವಿವಿ ಪ್ಯಾಡ್, 14 ಮತಯಂತ್ರಗಳನ್ನು ಬದಲಾಯಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹೇಳಿದರು.</p>.<p>‘ಕೋವಿಡ್ ಸೋಂಕಿತರಿಗೆ ಕರೆ ಮಾಡಿ ಮತದಾನ ಮಾಡುವಂತೆ ಮನವಿ ಮಾಡಿದ್ದೇವೆ. ಆ ಪೈಕಿ, 27 ಮಂದಿ ಮತ ಹಾಕಲು ಒಪ್ಪಿದ್ದಾರೆ. 12 ಸೋಂಕಿತರು ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ಪಿಪಿಇ ಕಿಟ್ ಹಾಕಿಸಿ ಮತ ಹಾಕಿಸುತ್ತೇವೆ’ ಎಂದೂ ಹೇಳಿದರು.</p>.<p>‘ಪ್ರತಿ ಮತಗಟ್ಟೆಗಳಲ್ಲಿ ಕೋವಿಡ್ ನಿಯಮ ಪಾಲಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಇದ್ದಾರೆ. ಸ್ಯಾನಿಟೈಸರ್ ವ್ಯವಸ್ಥೆ, ಕೈಗೆ ಗ್ಲೋಸ್ ವ್ಯವಸ್ಥೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ’ ಎಂದರು.</p>.<p>ಇಲ್ಲಿ 9 ಗಂಟೆ ಸುಮಾರಿಗೆ ಶೇ 9 ರಷ್ಟು ಮತದಾನವಾಗಿದೆ.</p>.<p>‘ಮತದಾನದ 40 ಸ್ಥಳಗಳಲ್ಲಿ ಒಂದೇ ಜಾಗದಲ್ಲಿ ಕುಳಿತು ನೋಡಬಹುದಾದ ವ್ಯವಸ್ಥೆ ಇದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮೈಕ್ರೋ ಅಬ್ಸರ್ವರ್ ಇದ್ದಾರೆ’ ಎಂದೂ ಅವರು ವಿವರಿಸಿದರು.</p>.<p><strong>ಇದನ್ನೂ ಓದ<a href="https://www.prajavani.net/district/bengaluru-city/rajarajeshwari-nagar-congress-candidate-kusuma-expressed-confidence-in-winning-the-byelections-776020.html" target="_blank">ಿ... ಆರ್.ಆರ್. ನಗರ: ಗೆಲ್ಲುವ ವಿಶ್ವಾಸವಿದೆ ಎಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅಣುಕು ಮತದಾನದಲ್ಲಿ ಒಂದಷ್ಟು ದೋಷ ಕಂಡುಬಂದಿದ್ದು ಸರಿಪಡಿಸಲಾಗಿದೆ. ಒಂಬತ್ತು ಕಂಟ್ರೋಲ್ ಯುನಿಟ್ ಬದಲಾಯಿಸಿದ್ದೇವೆ. 3 ವಿವಿ ಪ್ಯಾಡ್, 14 ಮತಯಂತ್ರಗಳನ್ನು ಬದಲಾಯಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹೇಳಿದರು.</p>.<p>‘ಕೋವಿಡ್ ಸೋಂಕಿತರಿಗೆ ಕರೆ ಮಾಡಿ ಮತದಾನ ಮಾಡುವಂತೆ ಮನವಿ ಮಾಡಿದ್ದೇವೆ. ಆ ಪೈಕಿ, 27 ಮಂದಿ ಮತ ಹಾಕಲು ಒಪ್ಪಿದ್ದಾರೆ. 12 ಸೋಂಕಿತರು ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ಪಿಪಿಇ ಕಿಟ್ ಹಾಕಿಸಿ ಮತ ಹಾಕಿಸುತ್ತೇವೆ’ ಎಂದೂ ಹೇಳಿದರು.</p>.<p>‘ಪ್ರತಿ ಮತಗಟ್ಟೆಗಳಲ್ಲಿ ಕೋವಿಡ್ ನಿಯಮ ಪಾಲಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಇದ್ದಾರೆ. ಸ್ಯಾನಿಟೈಸರ್ ವ್ಯವಸ್ಥೆ, ಕೈಗೆ ಗ್ಲೋಸ್ ವ್ಯವಸ್ಥೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ’ ಎಂದರು.</p>.<p>ಇಲ್ಲಿ 9 ಗಂಟೆ ಸುಮಾರಿಗೆ ಶೇ 9 ರಷ್ಟು ಮತದಾನವಾಗಿದೆ.</p>.<p>‘ಮತದಾನದ 40 ಸ್ಥಳಗಳಲ್ಲಿ ಒಂದೇ ಜಾಗದಲ್ಲಿ ಕುಳಿತು ನೋಡಬಹುದಾದ ವ್ಯವಸ್ಥೆ ಇದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮೈಕ್ರೋ ಅಬ್ಸರ್ವರ್ ಇದ್ದಾರೆ’ ಎಂದೂ ಅವರು ವಿವರಿಸಿದರು.</p>.<p><strong>ಇದನ್ನೂ ಓದ<a href="https://www.prajavani.net/district/bengaluru-city/rajarajeshwari-nagar-congress-candidate-kusuma-expressed-confidence-in-winning-the-byelections-776020.html" target="_blank">ಿ... ಆರ್.ಆರ್. ನಗರ: ಗೆಲ್ಲುವ ವಿಶ್ವಾಸವಿದೆ ಎಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>