ಬಳಿಕ ಜ್ಞಾನಭಾರತಿ ವಾರ್ಡ್ನ ಮತಗಟ್ಟೆ 304ರಲ್ಲಿ ಮತ ಚಲಾಯಿಸಿದ ಅವರು, ‘ನೊಂದವರ ಪರ, ಅಭಿವೃದ್ಧಿ ಪರ ಕೆಲಸ ಮಾಡುವವರಿಗೆ ಜನ ಮತ ಹಾಕುತ್ತಾರೆ ಎಂಬ ವಿಶ್ವಾಸ ಇದೆ. ಯುವಕರು ಬಂದು ಮತ ಚಲಾಯಿಸಬೇಕು. ಮತ ಚಲಾವಣೆ ಯುವಕರ ಹಕ್ಕು. ಎಲ್ಲರೂ ಬಂದು ಯುವ ಜನತೆ ಪ್ರತಿನಿಧಿಯಾದ ನನಗೆ ಮತ ಚಲಾವಣೆ ಮಾಡಿ’ ಎಂದೂ ಮನವಿ ಮಾಡಿದರು.