ಜಿಲ್ಲಾ ಗವರ್ನರ್ ಆರ್.ಶ್ರೀನಿವಾಸ್ಮೂರ್ತಿ ಮಾತನಾಡಿ, ‘ದಾನಿಗಳು, ಉಳ್ಳವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇನ್ನಷ್ಟು ಮುಂದೆ ಬಂದು ಆರೋಗ್ಯ, ಹೃದಯ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್, ಸೀಳುತುಟಿ, ಶಿಕ್ಷಣ, ರಕ್ತದಾನ, ಪರಿಸರ, ನೇತ್ರ, ದಂತ ಪರೀಕ್ಷೆ, ಚಿಕಿತ್ಸೆಯಂತಹ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕಾಗಿದೆ. ಅದನ್ನು ಚಾಚು ತಪ್ಪದೆ ರೋಟರಿಯನ್ಗಳು ಮಾಡುತ್ತಿದ್ದಾರೆ’ ಎಂದು ಹೇಳಿದರು.