<p><strong>ಬೆಂಗಳೂರು:</strong> ‘ಮಹಾಭಾರತದಲ್ಲಿ ಪೌರಾಣಿಕ, ಅಲೌಕಿಕ ಪಾತ್ರಗಳಿಗಿಂತ ಈಗ ನಮ್ಮ ಸುತ್ತಲೂ ಇರುವ ಮನುಷ್ಯರೇ ಕಾಣುತ್ತಾರೆ. ಅದೊಂದು ಶ್ರೇಷ್ಠ ಧರ್ಮಗ್ರಂಥ ಎನ್ನುವುದರ ಬದಲು ಹಿಂಸಾಚಾರ, ಮಾನಸಿಕ, ನೈತಿಕ ಕ್ಷೋಭೆಗಳ ಚರ್ಚೆಯಾಗಿ ಕಾಣುತ್ತದೆ’ ಎಂದು ಹಿರಿಯ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.</p>.<p>ಡಾ. ಸಿ. ವೀರಣ್ಣ ಅವರ ‘ರುದ್ರ ಭಾರತ’ ನಾಟಕ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಕುರುಕ್ಷೇತ್ರ ಯುದ್ಧ ಮುಗಿದ ನಂತರ ಮಹಾಭಾರತವು ಒಂದು ಮಾನವಸಹಜ ಘರ್ಷಣೆಗಳ ವ್ಯಥೆಯ ಕಥೆಯಂತೆ ನಮಗೆ ಕಾಣುತ್ತದೆ’ ಎಂದರು.</p>.<p>‘ಧರ್ಮವಿಲ್ಲದ ದೊರೆತನ ಮತ್ತು ಕೃಷ್ಣನೇ ಮಾಡುವ ಹಿಂಸೆಯ ಪ್ರತಿಪಾದನೆಯಿಂದಾಗಿ ಮಹಾಭಾರತದ ಶಾಂತಿಪರ್ವದಲ್ಲೂ ಹಿಂಸೆ ಕಾಣುತ್ತದೆ. ಈ ಯುದ್ಧೋತ್ತರ ಸತ್ಯಗಳನ್ನು ಈ ನಾಟಕವು ಯಾವುದೇ ಅತಿಶಯವಿಲ್ಲದೆ ಪರಿಣಾಮಕಾರಿಯಾಗಿ ಚಿತ್ರಿಸಿದೆ’ ಎಂದು ಹೇಳಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಸಿದ್ಧಪ್ಪ, ‘ರುದ್ರ ಭಾರತವು ಮಹಾಭಾರತ ಕಥೆ ಹೊಂದಿರುವ ನಾಟಕವಾದರೂ ತುಂಬಾ ವಿವರಣಾತ್ಮಕವಾಗಿ ಇರದೆ ಅತ್ಯಂತ ಸಂಕ್ಷಿಪ್ತವಾಗಿ ಅಗತ್ಯ ಸಂದೇಶಗಳನ್ನು ಮಾತ್ರ ಹೇಳಿರುವುದರಿಂದ ಇಂದಿನ ಪೀಳಿಗೆಯ ಓದುಗರಿಗೂ ಇಷ್ಟವಾಗುತ್ತದೆ’ ಎಂದು ಹೇಳಿದರು.</p>.<p>ಕೃತಿ ಪರಿಚಯ ಮಾಡಿದ ರಂಗಕರ್ಮಿ ಆರ್. ವೆಂಕಟರಾಜು, ‘ಯುದ್ಧಾನಂತರ ಎಲ್ಲ ಪ್ರತಿಷ್ಠೆಗಳನ್ನು ಕಳಚಿಟ್ಟು ನಡೆಸುವ ಆತ್ಮಸಂವಾದ ಈ ನಾಟಕದ ವೈಶಿಷ್ಟ್ಯ’ ಎಂದರು.</p>.<p>ಕರ್ನಾಟಕ ಸಾಹಿತ್ಯ ಪರಿಷತ್ತು ಈ ಪುಸ್ತಕವನ್ನು ಪ್ರಕಟಿಸಿದೆ. ಫೇಸ್ಬುಕ್ ನೇರಪ್ರಸಾರದಲ್ಲಿ ನಾಟಕ ಕೃತಿಯನ್ನು ಬಿಡುಗಡೆ ಮಾಡಲಾಯಿತು. ನಾಟಕಕಾರ ಡಾ. ಸಿ. ವೀರಣ್ಣ ಉಪಸ್ಥಿತರಿದ್ದರು.</p>.<p>ಹಿರಿಯ ರಂಗಭೂಮಿ ಕಲಾವಿದ ಡಾ. ಲಕ್ಷ್ಮಣದಾಸ್ ಅವರು ಈ ನಾಟಕದ ಹಾಡುಗಳನ್ನು ಹಾಡಿ ರಂಜಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮಹಾಭಾರತದಲ್ಲಿ ಪೌರಾಣಿಕ, ಅಲೌಕಿಕ ಪಾತ್ರಗಳಿಗಿಂತ ಈಗ ನಮ್ಮ ಸುತ್ತಲೂ ಇರುವ ಮನುಷ್ಯರೇ ಕಾಣುತ್ತಾರೆ. ಅದೊಂದು ಶ್ರೇಷ್ಠ ಧರ್ಮಗ್ರಂಥ ಎನ್ನುವುದರ ಬದಲು ಹಿಂಸಾಚಾರ, ಮಾನಸಿಕ, ನೈತಿಕ ಕ್ಷೋಭೆಗಳ ಚರ್ಚೆಯಾಗಿ ಕಾಣುತ್ತದೆ’ ಎಂದು ಹಿರಿಯ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.</p>.<p>ಡಾ. ಸಿ. ವೀರಣ್ಣ ಅವರ ‘ರುದ್ರ ಭಾರತ’ ನಾಟಕ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಕುರುಕ್ಷೇತ್ರ ಯುದ್ಧ ಮುಗಿದ ನಂತರ ಮಹಾಭಾರತವು ಒಂದು ಮಾನವಸಹಜ ಘರ್ಷಣೆಗಳ ವ್ಯಥೆಯ ಕಥೆಯಂತೆ ನಮಗೆ ಕಾಣುತ್ತದೆ’ ಎಂದರು.</p>.<p>‘ಧರ್ಮವಿಲ್ಲದ ದೊರೆತನ ಮತ್ತು ಕೃಷ್ಣನೇ ಮಾಡುವ ಹಿಂಸೆಯ ಪ್ರತಿಪಾದನೆಯಿಂದಾಗಿ ಮಹಾಭಾರತದ ಶಾಂತಿಪರ್ವದಲ್ಲೂ ಹಿಂಸೆ ಕಾಣುತ್ತದೆ. ಈ ಯುದ್ಧೋತ್ತರ ಸತ್ಯಗಳನ್ನು ಈ ನಾಟಕವು ಯಾವುದೇ ಅತಿಶಯವಿಲ್ಲದೆ ಪರಿಣಾಮಕಾರಿಯಾಗಿ ಚಿತ್ರಿಸಿದೆ’ ಎಂದು ಹೇಳಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಸಿದ್ಧಪ್ಪ, ‘ರುದ್ರ ಭಾರತವು ಮಹಾಭಾರತ ಕಥೆ ಹೊಂದಿರುವ ನಾಟಕವಾದರೂ ತುಂಬಾ ವಿವರಣಾತ್ಮಕವಾಗಿ ಇರದೆ ಅತ್ಯಂತ ಸಂಕ್ಷಿಪ್ತವಾಗಿ ಅಗತ್ಯ ಸಂದೇಶಗಳನ್ನು ಮಾತ್ರ ಹೇಳಿರುವುದರಿಂದ ಇಂದಿನ ಪೀಳಿಗೆಯ ಓದುಗರಿಗೂ ಇಷ್ಟವಾಗುತ್ತದೆ’ ಎಂದು ಹೇಳಿದರು.</p>.<p>ಕೃತಿ ಪರಿಚಯ ಮಾಡಿದ ರಂಗಕರ್ಮಿ ಆರ್. ವೆಂಕಟರಾಜು, ‘ಯುದ್ಧಾನಂತರ ಎಲ್ಲ ಪ್ರತಿಷ್ಠೆಗಳನ್ನು ಕಳಚಿಟ್ಟು ನಡೆಸುವ ಆತ್ಮಸಂವಾದ ಈ ನಾಟಕದ ವೈಶಿಷ್ಟ್ಯ’ ಎಂದರು.</p>.<p>ಕರ್ನಾಟಕ ಸಾಹಿತ್ಯ ಪರಿಷತ್ತು ಈ ಪುಸ್ತಕವನ್ನು ಪ್ರಕಟಿಸಿದೆ. ಫೇಸ್ಬುಕ್ ನೇರಪ್ರಸಾರದಲ್ಲಿ ನಾಟಕ ಕೃತಿಯನ್ನು ಬಿಡುಗಡೆ ಮಾಡಲಾಯಿತು. ನಾಟಕಕಾರ ಡಾ. ಸಿ. ವೀರಣ್ಣ ಉಪಸ್ಥಿತರಿದ್ದರು.</p>.<p>ಹಿರಿಯ ರಂಗಭೂಮಿ ಕಲಾವಿದ ಡಾ. ಲಕ್ಷ್ಮಣದಾಸ್ ಅವರು ಈ ನಾಟಕದ ಹಾಡುಗಳನ್ನು ಹಾಡಿ ರಂಜಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>