‘ಕೋವಿಡ್ ಬಳಿಕ ಹೇರಲಾದ ಲಾಕ್ಡೌನ್ ಮತ್ತು ಶಾಲಾ ರಜೆಯ ಕಾರಣ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಣದ ಮೇಲೆ ಆಗಿರುವ ಪರಿಣಾಮಗಳು’ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಲಿದೆ. ಶ್ರವಣ ದೋಷವುಳ್ಳ ಮಕ್ಕಳ ನಡವಳಿಕೆಯಲ್ಲಾದ ಬದಲಾವಣೆಗಳು, ಅವರ ಮಾತು, ಭಾಷೆ, ಓದು ಹಾಗೂ ಬರಹದ ಮೇಲಾದ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಗುತ್ತದೆ. ಆಸಕ್ತರು ಇ ಮೇಲ್ ವಿಳಾಸ vagdevitrust@gmail.com ಮೂಲಕ ಹೆಸರು ನೋಂದಾಯಿಸಿ
ಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.