ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ನೆರಳು ರಹಿತ ದಿನ’ಕ್ಕೆ ಸಾಕ್ಷಿಯಾದ ವಿದ್ಯಾರ್ಥಿಗಳು

Published 19 ಆಗಸ್ಟ್ 2023, 15:51 IST
Last Updated 19 ಆಗಸ್ಟ್ 2023, 15:51 IST
ಅಕ್ಷರ ಗಾತ್ರ

ಬೆಂಗಳೂರು: ಸೌರವ್ಯೂಹದಲ್ಲಿ ಅಪರೂಪಕ್ಕೊಮ್ಮೆ ಘಟಿಸುವ ‘ನೆರಳು ರಹಿತ ದಿನ’ಕ್ಕೆ ನಗರದ ರಾಜಾಜಿನಗರದ ವೆಂಕಟ್, ಸೇಂಟ್ ಆನ್ಸ್ ಮತ್ತು ವೀನಸ್ ಶಾಲೆಯ ವಿದ್ಯಾರ್ಥಿಗಳು ಶನಿವಾರ ಸಾಕ್ಷಿಯಾದರು.

ಈ ವರ್ಷದ 2ನೇ ‘ನೆರಳು ರಹಿತ ದಿನ’ ಇದಾಗಿತ್ತು. ಏಪ್ರಿಲ್ 24 ಹಾಗೂ 25ರಲ್ಲಿಯೂ ಈ ಘಟನೆ ಸಂಭವಿಸಿತ್ತು.

ಶನಿವಾರ ಮಧ್ಯಾಹ್ನ 12.24ಕ್ಕೆ ತಮ್ಮ ನೆರಳೇ ತಮಗೆ ಕಾಣದಂತಾಗುವ ರೋಮಾಂಚಕ ದೃಶ್ಯಗಳನ್ನು ನೋಡಿ ವಿದ್ಯಾರ್ಥಿಗಳು ಸಂಭ್ರಮಪಟ್ಟರು. ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಆವರಣದಲ್ಲಿ ವಿವಿಧ ವಿನ್ಯಾಸ ರೂಪಿಸಲಾಗಿತ್ತು.

ಸಂಸ್ಥೆಯ ಅಧ್ಯಕ್ಷ ಟಿ. ಬಾಲಕೃಷ್ಣ, ಉಪಾಧ್ಯಕ್ಷ ಬಿ. ವೆಂಕಟೇಶ್, ನಿರ್ದೇಶಕ ಬಿ. ಶೇಖರ್, ಪ್ರಾಂಶುಪಾಲರಾದ ಸುಲೋಚನಾ ಬಾಲಕೃಷ್ಣ, ಉಪ ಪ್ರಾಂಶುಪಾಲರಾದ ಶ್ರೀಮತಿ ಅಲಂಕೃತ, ಸುಭಿಕ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT