<p><strong>ಬೆಂಗಳೂರು:</strong> ‘ನಿಮ್ಮ ಸಿಮ್ ಕಾರ್ಡ್ ಅವಧಿ ಮುಗಿದಿದ್ದು, 24 ಗಂಟೆಯಲ್ಲಿ ನಿಷ್ಕ್ರಿಯವಾಗಲಿದೆ. ಇದನ್ನು ತಪ್ಪಿಸಲು ₹ 10 ರೀಚಾರ್ಜ್ ಮಾಡಿಸಿ’ ಎಂಬ ಸಂದೇಶ ಬಂದರೆ ಎಚ್ಚರಿಕೆ ವಹಿಸಿ. ಏಕೆಂದರೆ, ಇಂಥ ಸಂದೇಶ ಕಳುಹಿಸಿ ಬ್ಯಾಂಕ್ ಖಾತೆಗಳಲ್ಲಿರುವ ಹಣ ದೋಚುತ್ತಿರುವ ಜಾಲ ಸಕ್ರಿಯವಾಗಿದೆ.</p>.<p>ಬಿಎಸ್ಎನ್ಲ್, ಏರ್ಟೆಲ್, ಜಿಯೊ ಸೇರಿದಂತೆ ವಿವಿಧ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲೇ ಇಂಥ ಸಂದೇಶಗಳು ಹಲವರ ಮೊಬೈಲ್ಗಳಿಗೆ ಬರುತ್ತಿವೆ. ಇದು ನಿಜವಿರಬಹುದೆಂದು ನಂಬಿ ಹಲವರು ಹಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸೈಬರ್ ಅಪರಾಧ ಬಗ್ಗೆ ನಗರದಲ್ಲಿ ನಿತ್ಯವೂ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ.</p>.<p>‘ಸೈಬರ್ ವಂಚಕರು, ಮೊಬೈಲ್ ಸೇವಾ ಕಂಪನಿಗಳ ರೀತಿಯಲ್ಲೇ ಜನರಿಗೆ ಇಂಗ್ಲಿಷ್ನಲ್ಲಿ ಗುಂಪು ಸಂದೇಶ ಕಳುಹಿಸುತ್ತಿದ್ದಾರೆ. ಸಂದೇಶ ನಂಬಿ ಪ್ರತಿಕ್ರಿಯಿಸುವ ಜನರ ಮೊಬೈಲ್ನಲ್ಲಿ ‘ಟೀಮ್ ವ್ಹೀವರ್’ ಆ್ಯಪ್ ಇನ್ಸ್ಟಾಲ್ ಮಾಡಿಸುತ್ತಿದ್ದಾರೆ. ಅದರ ಮೂಲಕ ವೈಯಕ್ತಿಕ, ಬ್ಯಾಂಕ್ ಖಾತೆ ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್ಗಳ ಮಾಹಿತಿ ಪಡೆದು ವಂಚಿಸುತ್ತಿದ್ದಾರೆ’ ಎಂದು ನಗರದ ಸೈಬರ್ ಕ್ರೈಂ ಠಾಣೆಯೊಂದರ ಇನ್ಸ್ಪೆಕ್ಟರ್ ಹೇಳಿದರು.</p>.<p>‘ಗ್ರಾಹಕರ ಮಾಹಿತಿ (ಕೆವೈಸಿ) ಕೋರುವ ವಂಚಕರು, ₹ 10 ರೀಚಾರ್ಜ್ ಮಾಡುವಂತೆ ಒತ್ತಾಯಿಸುತ್ತಾರೆ. ಅದನ್ನು ನಂಬುವ ಜನ, ಆನ್ಲೈನ್ ಮೂಲಕವೇ ₹10 ರೀಚಾರ್ಜ್ ಮಾಡಿಸುತ್ತಾರೆ. ಅದಾದ ನಂತರ ಕೆಲ ನಿಮಿಷಗಳಲ್ಲೇ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿದೆ’ ಎಂದೂ ತಿಳಿಸಿದರು.</p>.<p class="Subhead">ಲಕ್ಷಾಂತರ ರೂಪಾಯಿ ಕಳೆದುಕೊಂಡರು: ‘ಬೆಂಗಳೂರಿನ ಎಲ್ಲ ವಿಭಾಗಗಳ ಸೈಬರ್ ಕ್ರೈಂ ಠಾಣೆಯಲ್ಲೂ ‘ಸಿಮ್ ಅಪ್ಡೇಟ್’ ವಂಚನೆ ಪ್ರಕರಣಗಳು ದಾಖಲಾಗುತ್ತಿದೆ. ಕೆಲವರು ತಮ್ಮ ಖಾತೆಯಲ್ಲಿರುವ ಲಕ್ಷಾಂತರ ರೂಪಾಯಿ ಕಳೆದುಕೊಂಡು ದೂರು ನೀಡಿದ್ದಾರೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.</p>.<p class="Subhead">ಉತ್ತರ ಭಾರತದ ಗ್ಯಾಂಗ್: ‘ಸೈಬರ್ ಚಟುವಟಿಕೆ ಬಗ್ಗೆ ತರಬೇತಿ ಪಡೆದಿರುವ ಉತ್ತರ ಭಾರತದ ಗ್ಯಾಂಗ್ ಈ ಕೃತ್ಯ ಎಸಗುತ್ತಿರುವ ಅನುಮಾನವಿದೆ. ಗ್ಯಾಂಗ್ ಆರೋಪಿಗಳೇ ಜನರಿಗೆ ಏಕಕಾಲದಲ್ಲಿ ಗುಂಪು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅದನ್ನು ನಂಬಿ ಪ್ರತಿಕ್ರಿಯಿಸುವ ಜನರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾರೆ’ ಎಂದೂ ತಿಳಿಸಿದರು.</p>.<p><strong>ಪಾರಾಗಲು ಹೀಗೆ ಮಾಡಿ</strong></p>.<p>* ಸಿಮ್ ಕಾರ್ಡ್ ಅಪ್ಡೇಟ್, ಬ್ಯಾಂಕ್ ಅಪ್ಡೇಟ್.. ಹೀಗೆ ಹಲವು ಉದ್ದೇಶವಿಟ್ಟುಕೊಂಡು ಬರುವ ಸಂದೇಶಗಳನ್ನು ನಂಬಬೇಡಿ. ಪ್ರತಿಕ್ರಿಯಿಸಬೇಡಿ</p>.<p>* ಸಿಮ್ ಕಾರ್ಡ್ ಅಪ್ಡೇಟ್ ಸಂದೇಶ ಬಂದರೆ, ಮೊಬೈಲ್ ಸೇವಾ ಕಂಪನಿಗಳ ಅಧಿಕೃತ ಪ್ರತಿನಿಧಿಗಳನ್ನು ಸಂಪರ್ಕಿಸಿ</p>.<p>* ಅಪರಿಚಿತರು ಯಾವುದಾದರೂ ಲಿಂಕ್ ಕಳುಹಿಸಿದರೆ ಕ್ಲಿಕ್ ಮಾಡಬೇಡಿ</p>.<p>* ಅಪರಿಚಿತರು ಹೇಳುವ ‘ಟೀಮ್ ವ್ಹೀವರ್’ ಹಾಗೂ ಯಾವುದೇ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುವ ಮುನ್ನ ಯೋಚಿಸಿ</p>.<p>* ಇಂಥ ಸಂದೇಶ ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಿಮ್ಮ ಸಿಮ್ ಕಾರ್ಡ್ ಅವಧಿ ಮುಗಿದಿದ್ದು, 24 ಗಂಟೆಯಲ್ಲಿ ನಿಷ್ಕ್ರಿಯವಾಗಲಿದೆ. ಇದನ್ನು ತಪ್ಪಿಸಲು ₹ 10 ರೀಚಾರ್ಜ್ ಮಾಡಿಸಿ’ ಎಂಬ ಸಂದೇಶ ಬಂದರೆ ಎಚ್ಚರಿಕೆ ವಹಿಸಿ. ಏಕೆಂದರೆ, ಇಂಥ ಸಂದೇಶ ಕಳುಹಿಸಿ ಬ್ಯಾಂಕ್ ಖಾತೆಗಳಲ್ಲಿರುವ ಹಣ ದೋಚುತ್ತಿರುವ ಜಾಲ ಸಕ್ರಿಯವಾಗಿದೆ.</p>.<p>ಬಿಎಸ್ಎನ್ಲ್, ಏರ್ಟೆಲ್, ಜಿಯೊ ಸೇರಿದಂತೆ ವಿವಿಧ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲೇ ಇಂಥ ಸಂದೇಶಗಳು ಹಲವರ ಮೊಬೈಲ್ಗಳಿಗೆ ಬರುತ್ತಿವೆ. ಇದು ನಿಜವಿರಬಹುದೆಂದು ನಂಬಿ ಹಲವರು ಹಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸೈಬರ್ ಅಪರಾಧ ಬಗ್ಗೆ ನಗರದಲ್ಲಿ ನಿತ್ಯವೂ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ.</p>.<p>‘ಸೈಬರ್ ವಂಚಕರು, ಮೊಬೈಲ್ ಸೇವಾ ಕಂಪನಿಗಳ ರೀತಿಯಲ್ಲೇ ಜನರಿಗೆ ಇಂಗ್ಲಿಷ್ನಲ್ಲಿ ಗುಂಪು ಸಂದೇಶ ಕಳುಹಿಸುತ್ತಿದ್ದಾರೆ. ಸಂದೇಶ ನಂಬಿ ಪ್ರತಿಕ್ರಿಯಿಸುವ ಜನರ ಮೊಬೈಲ್ನಲ್ಲಿ ‘ಟೀಮ್ ವ್ಹೀವರ್’ ಆ್ಯಪ್ ಇನ್ಸ್ಟಾಲ್ ಮಾಡಿಸುತ್ತಿದ್ದಾರೆ. ಅದರ ಮೂಲಕ ವೈಯಕ್ತಿಕ, ಬ್ಯಾಂಕ್ ಖಾತೆ ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್ಗಳ ಮಾಹಿತಿ ಪಡೆದು ವಂಚಿಸುತ್ತಿದ್ದಾರೆ’ ಎಂದು ನಗರದ ಸೈಬರ್ ಕ್ರೈಂ ಠಾಣೆಯೊಂದರ ಇನ್ಸ್ಪೆಕ್ಟರ್ ಹೇಳಿದರು.</p>.<p>‘ಗ್ರಾಹಕರ ಮಾಹಿತಿ (ಕೆವೈಸಿ) ಕೋರುವ ವಂಚಕರು, ₹ 10 ರೀಚಾರ್ಜ್ ಮಾಡುವಂತೆ ಒತ್ತಾಯಿಸುತ್ತಾರೆ. ಅದನ್ನು ನಂಬುವ ಜನ, ಆನ್ಲೈನ್ ಮೂಲಕವೇ ₹10 ರೀಚಾರ್ಜ್ ಮಾಡಿಸುತ್ತಾರೆ. ಅದಾದ ನಂತರ ಕೆಲ ನಿಮಿಷಗಳಲ್ಲೇ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿದೆ’ ಎಂದೂ ತಿಳಿಸಿದರು.</p>.<p class="Subhead">ಲಕ್ಷಾಂತರ ರೂಪಾಯಿ ಕಳೆದುಕೊಂಡರು: ‘ಬೆಂಗಳೂರಿನ ಎಲ್ಲ ವಿಭಾಗಗಳ ಸೈಬರ್ ಕ್ರೈಂ ಠಾಣೆಯಲ್ಲೂ ‘ಸಿಮ್ ಅಪ್ಡೇಟ್’ ವಂಚನೆ ಪ್ರಕರಣಗಳು ದಾಖಲಾಗುತ್ತಿದೆ. ಕೆಲವರು ತಮ್ಮ ಖಾತೆಯಲ್ಲಿರುವ ಲಕ್ಷಾಂತರ ರೂಪಾಯಿ ಕಳೆದುಕೊಂಡು ದೂರು ನೀಡಿದ್ದಾರೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.</p>.<p class="Subhead">ಉತ್ತರ ಭಾರತದ ಗ್ಯಾಂಗ್: ‘ಸೈಬರ್ ಚಟುವಟಿಕೆ ಬಗ್ಗೆ ತರಬೇತಿ ಪಡೆದಿರುವ ಉತ್ತರ ಭಾರತದ ಗ್ಯಾಂಗ್ ಈ ಕೃತ್ಯ ಎಸಗುತ್ತಿರುವ ಅನುಮಾನವಿದೆ. ಗ್ಯಾಂಗ್ ಆರೋಪಿಗಳೇ ಜನರಿಗೆ ಏಕಕಾಲದಲ್ಲಿ ಗುಂಪು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅದನ್ನು ನಂಬಿ ಪ್ರತಿಕ್ರಿಯಿಸುವ ಜನರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾರೆ’ ಎಂದೂ ತಿಳಿಸಿದರು.</p>.<p><strong>ಪಾರಾಗಲು ಹೀಗೆ ಮಾಡಿ</strong></p>.<p>* ಸಿಮ್ ಕಾರ್ಡ್ ಅಪ್ಡೇಟ್, ಬ್ಯಾಂಕ್ ಅಪ್ಡೇಟ್.. ಹೀಗೆ ಹಲವು ಉದ್ದೇಶವಿಟ್ಟುಕೊಂಡು ಬರುವ ಸಂದೇಶಗಳನ್ನು ನಂಬಬೇಡಿ. ಪ್ರತಿಕ್ರಿಯಿಸಬೇಡಿ</p>.<p>* ಸಿಮ್ ಕಾರ್ಡ್ ಅಪ್ಡೇಟ್ ಸಂದೇಶ ಬಂದರೆ, ಮೊಬೈಲ್ ಸೇವಾ ಕಂಪನಿಗಳ ಅಧಿಕೃತ ಪ್ರತಿನಿಧಿಗಳನ್ನು ಸಂಪರ್ಕಿಸಿ</p>.<p>* ಅಪರಿಚಿತರು ಯಾವುದಾದರೂ ಲಿಂಕ್ ಕಳುಹಿಸಿದರೆ ಕ್ಲಿಕ್ ಮಾಡಬೇಡಿ</p>.<p>* ಅಪರಿಚಿತರು ಹೇಳುವ ‘ಟೀಮ್ ವ್ಹೀವರ್’ ಹಾಗೂ ಯಾವುದೇ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುವ ಮುನ್ನ ಯೋಚಿಸಿ</p>.<p>* ಇಂಥ ಸಂದೇಶ ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>