ಬೆಂಗಳೂರು: 'ಮಾತಾಡಿ ಪ್ರಧಾನಿಗಳೇ ಮಾತನಾಡಿ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಕೈಗೊಳ್ಳಲಾಗಿದ್ದು, ಆಗಸ್ಟ್ 10ರಿಂದ 15ರವರೆಗೆ ಅಭಿಯಾನ ನಡೆಯಲಿದೆ ಎಂಬ ಪೋಸ್ಟರ್ವೊಂದು ವಾಟ್ಸಾಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
'ಈ ಬಾರಿಯ ಸ್ವಾತಂತ್ರ್ಯ ಭಾಷಣಕ್ಕೆ ಪ್ರಧಾನಿಗಳು ಸಲಹೆ ಕೇಳಿದ್ದಾರೆ. ಆಯ್ತು ಅದನ್ನೂ ಮಾಡೋಣ. ನಲುಗುತ್ತಿರುವ ಜನಸಮುದಾಯಗಳ ಬಗ್ಗೆ, ನಾಡು ತಲುಪುತ್ತಿರುವ ದುರ್ಗತಿಯ ಬಗ್ಗೆ ಮಾತನಾಡುವಂತೆ ಪ್ರಧಾನಿಯನ್ನು ಒತ್ತಾಯಿಸೋಣ. ಮೌನ ಸಾಕು, ಮಾತನಾಡಿ ಎಂದ ಆಗ್ರಹಿಸೋಣ' ಎಂದು ಪೋಸ್ಟರ್ನಲ್ಲಿ ಹಂಚಿಕೊಳ್ಳಲಾಗಿದೆ.
ಈ ಅಭಿಯಾನದಲ್ಲಿ ಎಲ್ಲ ಸಮಾನ ಮನಸ್ಕರೂ ಜೊತೆಗೂಡಬೇಕಾಗಿ ಮನವಿ ಮಾಡಲಾಗಿದೆ.