<p><strong>ಬೆಂಗಳೂರು</strong>: ಬಿಬಿಎಂಪಿ ಅರಣ್ಯ ಘಟಕವು ಈ ಬಾರಿ ಪಾಲಿಕೆ ವ್ಯಾಪ್ತಿಯಲ್ಲಿನ ಮರಗಳ ಗಣತಿಗೆ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ (ಕೆಎಸ್ಆರ್ಎಸ್ಎಸಿ) ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ತಂತ್ರಾಂಶವನ್ನು ಬಳಸುತ್ತಿದೆ.</p><p>ನಗರದಲ್ಲಿ ಸರ್ಕಾರಿ ಕಚೇರಿಗಳ ಆವರಣ, ರಸ್ತೆ ಬದಿ, ಖಾಸಗಿ ಅಪಾರ್ಟ್ಮೆಂಟ್, ಸಂಸ್ಥೆಗಳು ಸೇರಿದಂತೆ ಖಾಸಗಿ ಬಡಾವಣೆಗಳಲ್ಲಿ ಬೆಳೆದಿರುವ ಹಾಗೂ ಬೆಳೆಯುತ್ತಿರುವ ಮರಗಳ ಗಣತಿಯನ್ನು ಜನವರಿಯಿಂದ ನಡೆಸಲಾಗುತ್ತಿದೆ.</p><p>ಬೆಂಗಳೂರು ನಗರದ ಭೌಗೋಳಿಕ ವಿಸ್ತೀರ್ಣ 840 ಚದರ ಕಿಲೋಮೀಟರ್ ಇದೆ. ತಲಾ 100 ಚದರ ಕಿಲೋಮೀಟರ್ನ ಎಂಟು ವಿಭಾಗ ಮಾಡಿಕೊಳ್ಳಲಾಗಿದೆ. ಈ ವಿಭಾಗಗಳನ್ನು ಯುನಿಟ್ ಎಂದು ಪರಿಗಣಿಸಿ, ಎಂಟು ಗುತ್ತಿಗೆದಾರರನ್ನು ನೇಮಿಸಲಾಗಿದೆ. ಅವರು ಮರಗಳ ಜಾತಿ, ಸುತ್ತಳತೆ, ಚಿತ್ರಗಳನ್ನು ತಂತ್ರಾಂಶದಲ್ಲಿ ನಮೂದಿಸಿ ಗಣತಿ ನಡೆಸಲಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ ಸ್ವಾಮಿ ತಿಳಿಸಿದ್ದಾರೆ.</p><p>198 ವಾರ್ಡ್ಗಳಲ್ಲಿ ಮರಗಣತಿ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೂ ಸುಮಾರು 1,43,100 ಮರಗಳನ್ನು ಗುರುತಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಗಣತಿ ಮುಗಿಯಲಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಿಬಿಎಂಪಿ ಅರಣ್ಯ ಘಟಕವು ಈ ಬಾರಿ ಪಾಲಿಕೆ ವ್ಯಾಪ್ತಿಯಲ್ಲಿನ ಮರಗಳ ಗಣತಿಗೆ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ (ಕೆಎಸ್ಆರ್ಎಸ್ಎಸಿ) ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ತಂತ್ರಾಂಶವನ್ನು ಬಳಸುತ್ತಿದೆ.</p><p>ನಗರದಲ್ಲಿ ಸರ್ಕಾರಿ ಕಚೇರಿಗಳ ಆವರಣ, ರಸ್ತೆ ಬದಿ, ಖಾಸಗಿ ಅಪಾರ್ಟ್ಮೆಂಟ್, ಸಂಸ್ಥೆಗಳು ಸೇರಿದಂತೆ ಖಾಸಗಿ ಬಡಾವಣೆಗಳಲ್ಲಿ ಬೆಳೆದಿರುವ ಹಾಗೂ ಬೆಳೆಯುತ್ತಿರುವ ಮರಗಳ ಗಣತಿಯನ್ನು ಜನವರಿಯಿಂದ ನಡೆಸಲಾಗುತ್ತಿದೆ.</p><p>ಬೆಂಗಳೂರು ನಗರದ ಭೌಗೋಳಿಕ ವಿಸ್ತೀರ್ಣ 840 ಚದರ ಕಿಲೋಮೀಟರ್ ಇದೆ. ತಲಾ 100 ಚದರ ಕಿಲೋಮೀಟರ್ನ ಎಂಟು ವಿಭಾಗ ಮಾಡಿಕೊಳ್ಳಲಾಗಿದೆ. ಈ ವಿಭಾಗಗಳನ್ನು ಯುನಿಟ್ ಎಂದು ಪರಿಗಣಿಸಿ, ಎಂಟು ಗುತ್ತಿಗೆದಾರರನ್ನು ನೇಮಿಸಲಾಗಿದೆ. ಅವರು ಮರಗಳ ಜಾತಿ, ಸುತ್ತಳತೆ, ಚಿತ್ರಗಳನ್ನು ತಂತ್ರಾಂಶದಲ್ಲಿ ನಮೂದಿಸಿ ಗಣತಿ ನಡೆಸಲಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ ಸ್ವಾಮಿ ತಿಳಿಸಿದ್ದಾರೆ.</p><p>198 ವಾರ್ಡ್ಗಳಲ್ಲಿ ಮರಗಣತಿ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೂ ಸುಮಾರು 1,43,100 ಮರಗಳನ್ನು ಗುರುತಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಗಣತಿ ಮುಗಿಯಲಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>