‘ಗುರುವಾರ ಮಧ್ಯಾಹ್ನವೂ ತಂದೆ ಸುರೇಶ್ ಹಾಗೂ ಮಗ ನರ್ತನ್ ಬೋಪಣ್ಣ ನಡುವೆ ಜಗಳ ಶುರುವಾಗಿತ್ತು. ತಂದೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದ ಮಗ, ಹೊರಗಿನಿಂದ ಬೀಗ ಹಾಕಿದ್ದರು. ಅದೇ ಕೊಠಡಿಯಲ್ಲಿ ಪರವಾನಗಿ ಬಂದೂಕು ಇತ್ತು. ಆರೋಪಿ ಸುರೇಶ್, ಅದೇ ಬಂದೂಕಿನಿಂದ ಬಾಗಿಲಿಗೆ ಗುಂಡು ಹೊಡೆದಿದ್ದರು. ಹೊರಗಿದ್ದ ನರ್ತನ್ ಅವರ ಗುಪ್ತಾಂಗಕ್ಕೆ ಗುಂಡು ತಾಗಿ, ರಕ್ತ ಸೋರಲಾರಂಭಿಸಿತ್ತು’ ಎಂದು ಹೇಳಿದರು.