‘ಇಬ್ಬರು ಯುವಕರು ಬೈಕ್ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
‘ಶಾಲೆ ಬಳಿ ತಡರಾತ್ರಿ ಬಂದು ಹೋಗಿದ್ದ ಕಿಡಿಗೇಡಿಗಳು, ‘ಸಾರಿ’ ಎಂಬುದಾಗಿ ಬರೆದಿದ್ದಾರೆ. ನಸುಕಿನಲ್ಲಿ ವಾಯುವಿಹಾರಕ್ಕೆ ಹೊರಟಿದ್ದ ಸಾರ್ವಜನಿಕರು, ಬರಹಗಳನ್ನು ನೋಡಿ ಶಾಲೆ ಶಿಕ್ಷಕರು ಹಾಗೂ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.