‘ಕರ್ನಾಟಕ ರಾಜ್ಯ ದಾವೆ ನೀತಿ 2011ರಲ್ಲಿ ರಚನೆಯಾಗಿದ್ದು, ಅದು ಈಗಲೂ ಜಾರಿಯಲ್ಲಿದೆ. ವಿವಾದಗಳನ್ನು ಪರಿಣಾಮಕಾರಿಯಾಗಿ ಮತ್ತು ಹೊಣೆಗಾರಿಕೆಯಿಂದ ಪರಿಹರಿಸುವ ಉದ್ದೇಶದಿಂದ ಈ ನೀತಿ ಜಾರಿಗೆ ತರಲಾಗಿತ್ತು. ಈ ಬಗ್ಗೆ 2018ರಲ್ಲಿ ನಡೆದ ಅಧ್ಯಯನ ಪ್ರಕಾರ ಈ ನೀತಿ ಸಮರ್ಪಕವಾಗಿ ಜಾರಿಯಾಗಿಲ್ಲ. ಸರ್ಕಾರದ ದಾವೆಗಳನ್ನು ನಿಭಾಯಿಸುವ ಪ್ರಕ್ರಿಯೆಯ ವೇಳೆ ದಕ್ಷತೆ ಮತ್ತು ಹೊಣೆಗಾರಿಕೆ ಇಲ್ಲದಿರುವುದು ಗೊತ್ತಾಗಿತ್ತು. ಹೀಗಾಗಿ, ಅದನ್ನು ಪರಿಷ್ಕರಿಸಿ ಹೊಸ ನೀತಿಯನ್ನು ಜಾರಿಗೆ ತರಲು ಇದೀಗ ಅಧಿಸೂಚನೆ ಹೊರಡಿಸಲಾಗಿದೆ.