<p><strong>ಬೆಂಗಳೂರು: </strong>‘ಕೇಂದ್ರದ ಆತ್ಮ ನಿರ್ಭರ್ ಯೋಜನೆಯಡಿ ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ಈವರೆಗೆ 644 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ (ಪ್ಯಾಕ್ಸ್ಗಳು) ₹ 198.96 ಕೋಟಿ ಸಾಲ ಮಂಜೂರು ಮಾಡಿದೆ. ಈ ಯೋಜನೆ ಅನುಷ್ಠಾನದಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.</p>.<p>ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಈವರೆಗೆ 949 ಪ್ಯಾಕ್ಸ್ಗಳು ₹355.84 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿವೆ. ಮಾರ್ಚ್ ಅಂತ್ಯದೊಳಗೆ 1,000 ಪ್ಯಾಕ್ಸ್ಗಳ ಯೋಜನೆಯ ಲಾಭ ಪಡೆಯುವ ಗುರಿ ಹೊಂದಲಾಗಿದೆ’ ಎಂದು ಅವರು ತಿಳಿಸಿದರು.</p>.<p>‘ಯೋಜನೆಯಲ್ಲಿ ರೈತರ ಜಮೀನುಗಳಿಗೆ ಕೊಯ್ಲು ನಂತರ ಮೂಲಸೌಕರ್ಯವನ್ನು ಪ್ಯಾಕ್ಸ್, ರೈತ ಉತ್ಪಾದಕ ಸಂಘಗಳು, ಅಗ್ರಿ ಎಂಟರ್ಪ್ರೈಸಸ್ಗಳ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ. ಪ್ರತಿ ಪ್ಯಾಕ್ಸ್ಗಳಿಗೆ ತಲಾ ₹ 2 ಕೋಟಿ ಸಾಲ ನೀಡಲಾಗುತ್ತದೆ. ಆ ಮೂಲಕ,<br />ಪ್ಯಾಕ್ಸ್ಗಳನ್ನು ಬಹುಪಯೋಗಿ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ಬ್ಯಾಂಕುಗಳಿಂದ ಶೇ 4ರ ಬಡ್ಡಿ ದರದಲ್ಲಿ ಕೇಂದ್ರ ಸಾಲ ಮಂಜೂರು ಮಾಡುತ್ತದೆ. ಅದರಲ್ಲಿ ಕೇಂದ್ರದಿಂದ ಶೇ 3 ಬಡ್ಡಿ ದರ ಸಹಾಯಧನ ಸಿಗುತ್ತದೆ. ಪ್ಯಾಕ್ಸ್ಗಳಿಗೆ ಕೇವಲ ಶೇ 1 ಬಡ್ಡಿದರದಲ್ಲಿ ಸಾಲ ಸಿಕ್ಕಂತಾಗುತ್ತದೆ’ ಎಂದು ಅವರು ವಿವರಿಸಿದರು.</p>.<p>‘ಪ್ರಸಕ್ತ ಸಾಲಿನಲ್ಲಿ ಮಾರ್ಚ್ ಅಂತ್ಯದ ವೇಳೆಗೆ 24.50 ಲಕ್ಷ ರೈತರಿಗೆ<br />₹ 1,450 ಕೋಟಿ ಅಲ್ಪಾವಧಿ ಬೆಳೆಸಾಲ, 70 ಲಕ್ಷ ರೈತರಿಗೆ ₹1,200 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಈವರೆಗೆ 21.64 ಲಕ್ಷ ರೈತರಿಗೆ ₹ 14,979.73 ಕೋಟಿ ಅಲ್ಪಾವಧಿ ಸಾಲ ವಿತರಿಸಲಾಗಿದೆ. 36 ಲಕ್ಷ ರೈತರಿಗೆ ₹800.51 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸಲಾಗಿದೆ. ತಿಂಗಳ ಅಂತ್ಯದೊಳಗೆ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.</p>.<p>‘36 ಲಕ್ಷ ಸ್ವಸಹಾಯ ಸಂಘಗಳಿಗೆ ₹ 1,200 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಅದರಲ್ಲಿ 21 ಲಕ್ಷ ಗುಂಪುಗಳಿಗೆ ₹ 754.39 ಕೋಟಿ (ಶೇ 62.86) ಗುರಿ ಸಾಧಿಸಲಾಗಿದೆ. ‘ಬಡವರ ಬಂಧು’ ಯೋಜನೆಯಡಿ 8,778 ಬೀದಿ ವ್ಯಾಪಾರಿಗಳಿಗೆ<br />₹ 7.69 ಕೋಟಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ’ ಎಂದರು.</p>.<p>‘ಕಾಯಕ’ ಯೋಜನೆಯಲ್ಲಿ 2,500 ಸ್ವಸಹಾಯ ಗುಂಪುಗಳ ಪೈಕಿ 245 ಗುಂಪುಗಳಿಗೆ ₹ 10.81 ಕೋಟಿ ಸಾಲ ನೀಡಲಾಗಿದೆ’ ಎಂದೂ ಸಚಿವ ಸೋಮಶೇಖರ್ ವಿವರಿಸಿದರು.</p>.<p>‘ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ರೈತರಿಗೆ ನೆರವು ನೀಡುವ ಉದ್ದೇಶದಿಂದ ನಾಲ್ಕೂ ವಿಭಾಗಗಳಲ್ಲಿ ಈಗಾಗಲೇ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಉದ್ದೇಶಗಳಿಗೆ ₹37,366 ಕೋಟಿ ಸಾಲವನ್ನು<br />ವಿತರಿಸಲಾಗಿದೆ’ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಕೇಂದ್ರದ ಆತ್ಮ ನಿರ್ಭರ್ ಯೋಜನೆಯಡಿ ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ಈವರೆಗೆ 644 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ (ಪ್ಯಾಕ್ಸ್ಗಳು) ₹ 198.96 ಕೋಟಿ ಸಾಲ ಮಂಜೂರು ಮಾಡಿದೆ. ಈ ಯೋಜನೆ ಅನುಷ್ಠಾನದಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.</p>.<p>ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಈವರೆಗೆ 949 ಪ್ಯಾಕ್ಸ್ಗಳು ₹355.84 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿವೆ. ಮಾರ್ಚ್ ಅಂತ್ಯದೊಳಗೆ 1,000 ಪ್ಯಾಕ್ಸ್ಗಳ ಯೋಜನೆಯ ಲಾಭ ಪಡೆಯುವ ಗುರಿ ಹೊಂದಲಾಗಿದೆ’ ಎಂದು ಅವರು ತಿಳಿಸಿದರು.</p>.<p>‘ಯೋಜನೆಯಲ್ಲಿ ರೈತರ ಜಮೀನುಗಳಿಗೆ ಕೊಯ್ಲು ನಂತರ ಮೂಲಸೌಕರ್ಯವನ್ನು ಪ್ಯಾಕ್ಸ್, ರೈತ ಉತ್ಪಾದಕ ಸಂಘಗಳು, ಅಗ್ರಿ ಎಂಟರ್ಪ್ರೈಸಸ್ಗಳ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ. ಪ್ರತಿ ಪ್ಯಾಕ್ಸ್ಗಳಿಗೆ ತಲಾ ₹ 2 ಕೋಟಿ ಸಾಲ ನೀಡಲಾಗುತ್ತದೆ. ಆ ಮೂಲಕ,<br />ಪ್ಯಾಕ್ಸ್ಗಳನ್ನು ಬಹುಪಯೋಗಿ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ಬ್ಯಾಂಕುಗಳಿಂದ ಶೇ 4ರ ಬಡ್ಡಿ ದರದಲ್ಲಿ ಕೇಂದ್ರ ಸಾಲ ಮಂಜೂರು ಮಾಡುತ್ತದೆ. ಅದರಲ್ಲಿ ಕೇಂದ್ರದಿಂದ ಶೇ 3 ಬಡ್ಡಿ ದರ ಸಹಾಯಧನ ಸಿಗುತ್ತದೆ. ಪ್ಯಾಕ್ಸ್ಗಳಿಗೆ ಕೇವಲ ಶೇ 1 ಬಡ್ಡಿದರದಲ್ಲಿ ಸಾಲ ಸಿಕ್ಕಂತಾಗುತ್ತದೆ’ ಎಂದು ಅವರು ವಿವರಿಸಿದರು.</p>.<p>‘ಪ್ರಸಕ್ತ ಸಾಲಿನಲ್ಲಿ ಮಾರ್ಚ್ ಅಂತ್ಯದ ವೇಳೆಗೆ 24.50 ಲಕ್ಷ ರೈತರಿಗೆ<br />₹ 1,450 ಕೋಟಿ ಅಲ್ಪಾವಧಿ ಬೆಳೆಸಾಲ, 70 ಲಕ್ಷ ರೈತರಿಗೆ ₹1,200 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಈವರೆಗೆ 21.64 ಲಕ್ಷ ರೈತರಿಗೆ ₹ 14,979.73 ಕೋಟಿ ಅಲ್ಪಾವಧಿ ಸಾಲ ವಿತರಿಸಲಾಗಿದೆ. 36 ಲಕ್ಷ ರೈತರಿಗೆ ₹800.51 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸಲಾಗಿದೆ. ತಿಂಗಳ ಅಂತ್ಯದೊಳಗೆ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.</p>.<p>‘36 ಲಕ್ಷ ಸ್ವಸಹಾಯ ಸಂಘಗಳಿಗೆ ₹ 1,200 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಅದರಲ್ಲಿ 21 ಲಕ್ಷ ಗುಂಪುಗಳಿಗೆ ₹ 754.39 ಕೋಟಿ (ಶೇ 62.86) ಗುರಿ ಸಾಧಿಸಲಾಗಿದೆ. ‘ಬಡವರ ಬಂಧು’ ಯೋಜನೆಯಡಿ 8,778 ಬೀದಿ ವ್ಯಾಪಾರಿಗಳಿಗೆ<br />₹ 7.69 ಕೋಟಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ’ ಎಂದರು.</p>.<p>‘ಕಾಯಕ’ ಯೋಜನೆಯಲ್ಲಿ 2,500 ಸ್ವಸಹಾಯ ಗುಂಪುಗಳ ಪೈಕಿ 245 ಗುಂಪುಗಳಿಗೆ ₹ 10.81 ಕೋಟಿ ಸಾಲ ನೀಡಲಾಗಿದೆ’ ಎಂದೂ ಸಚಿವ ಸೋಮಶೇಖರ್ ವಿವರಿಸಿದರು.</p>.<p>‘ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ರೈತರಿಗೆ ನೆರವು ನೀಡುವ ಉದ್ದೇಶದಿಂದ ನಾಲ್ಕೂ ವಿಭಾಗಗಳಲ್ಲಿ ಈಗಾಗಲೇ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಉದ್ದೇಶಗಳಿಗೆ ₹37,366 ಕೋಟಿ ಸಾಲವನ್ನು<br />ವಿತರಿಸಲಾಗಿದೆ’ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>