<p><strong>ದಾಬಸ್ಪೇಟೆ: </strong>ಏರುತ್ತಿರುವ ಬಿಸಿಲ ತಾಪಕ್ಕೆ ನೆಲಮಂಗಲ ತಾಲ್ಲೂಕು ಹಾಗೂ ದಾಬಸ್ಪೇಟೆ ವ್ಯಾಪ್ತಿಯಲ್ಲಿನ ನೂರಾರು ಎಕರೆಗಳ ಮಾವಿನ ತೋಟಗಳಲ್ಲಿ ಹೂ ಮತ್ತು ಹೀಚು ಉದುರುತ್ತಿದೆ. ಇದರಿಂದ ಫಸಲು ಕಡಿಮೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.</p>.<p>‘ಈ ಬಾರಿಯೂ ಮಳೆಯ ಕೊರತೆಯಿಂದಾಗಿ ಹೂ ಕಡಿಮೆಯಾಗಿತ್ತು. ಬಿಟ್ಟಿರುವ ಹೂವಾದರೂ ಕಾಯಿಯಾದರೆ ಹಾಕಿರುವ ಬಂಡವಾಳವಾದರೂ ಕೈಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಬಿಟ್ಟಿದ್ದ ಹೂ ಕಾಯಿಯಾಗಿ ಬೆಳೆಯುತ್ತಿದಂತೆ ಹೀಚುಗಳು ಬಿಸಿಲಿಗೆ ಉದುರುವುದು ಆತಂಕ ತಂದಿದೆ’ ಎಂದುರೈತ ರಮೇಶ್ ಆತಂಕ ವ್ಯಕ್ತಪಡಿಸಿದರು.</p>.<p>ರೈತ ತ್ಯಾಗರಾಜು,‘ನಾವು ಒಂದರ್ಥದಲ್ಲಿ ಪ್ರಾಕೃತಿಕ ಶಾಪಕ್ಕೆ ಒಳಗಾಗಿದ್ದೇವೆ. ನಮ್ಮಲ್ಲಿ ನೀರಾವರಿ ವ್ಯವಸ್ಥೆಯಿಲ್ಲ. ಮತ್ತೊಂದು ಕಡೆ ಮಳೆ ಬಾರದೆ ಇಳುವರಿ ಕುಸಿಯುತ್ತದೆ. ಸಿಕ್ಕ ಫಸಲಿಗೂ ಸೂಕ್ತ ಬೆಲೆ ಸಿಗಲ್ಲ’ ಎಂದು ಬೇಸರಿಸಿದರು.</p>.<p>‘ಮಾವಿನ ಬೆಳೆಯಲ್ಲಾದರೂ ಒಂದಷ್ಟು ಹಣ ಬಂದರೆ, ಸಣ್ಣ ಸಾಲಗಳನ್ನಾದರೂ ತೀರಿಸಿ, ಉತ್ತಮ ಜೀವನ ನಡೆಸುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಹೂ ಉಳಿಸಿಕೊಳ್ಳಲಿಕ್ಕೆ ಔಷಧಿಗಳನ್ನು ಸಿಂಪಡಣೆ ಮಾಡಿದ್ದೆವು. ಈಗ ಅದು ವ್ಯರ್ಥವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.</p>.<p>ರೈತ ಮಂಜುನಾಥ್,‘ತೋಟಗಳಲ್ಲಿ ಹೂ ಬಿಟ್ಟಾಗಲೇ ವ್ಯಾಪಾರಿಗಳಿಂದ ಒಂದಷ್ಟು ಹಣ ಮುಂಗಡವಾಗಿ ತಗೊಂಡಿದ್ದೇವೆ. ಈಗ ಹೀಚು ಉದುರುತ್ತಿರುವುದರಿಂದ, ‘ನಷ್ಟವಾಗುತ್ತದೆ’ ಅಂತ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ‘ಇಲ್ಲದಿದ್ದರೆ ತೋಟ ಬೇಡ’ ಅಂತಿದ್ದಾರೆ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ’ ಎಂದರು.</p>.<p>ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ,‘ಮಾವಿನ ಬೆಳೆಗೆ 25 ಡಿಗ್ರಿಯಿಂದ 28 ಡಿಗ್ರಿ ತಾಪಮಾನ ಸೂಕ್ತ. ಈ ಬಾರಿ ಬಿಸಿಲು ಜಳ ಹೆಚ್ಚಿದೆ. ಫಸಲು ಕಡಿಮೆಯಾಗಬಹುದು. ರೈತರು ಬೆಳೆವಿಮೆ ಮಾಡಿಸಿಕೊಳ್ಳುವುದು ಉತ್ತಮ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ಪೇಟೆ: </strong>ಏರುತ್ತಿರುವ ಬಿಸಿಲ ತಾಪಕ್ಕೆ ನೆಲಮಂಗಲ ತಾಲ್ಲೂಕು ಹಾಗೂ ದಾಬಸ್ಪೇಟೆ ವ್ಯಾಪ್ತಿಯಲ್ಲಿನ ನೂರಾರು ಎಕರೆಗಳ ಮಾವಿನ ತೋಟಗಳಲ್ಲಿ ಹೂ ಮತ್ತು ಹೀಚು ಉದುರುತ್ತಿದೆ. ಇದರಿಂದ ಫಸಲು ಕಡಿಮೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.</p>.<p>‘ಈ ಬಾರಿಯೂ ಮಳೆಯ ಕೊರತೆಯಿಂದಾಗಿ ಹೂ ಕಡಿಮೆಯಾಗಿತ್ತು. ಬಿಟ್ಟಿರುವ ಹೂವಾದರೂ ಕಾಯಿಯಾದರೆ ಹಾಕಿರುವ ಬಂಡವಾಳವಾದರೂ ಕೈಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಬಿಟ್ಟಿದ್ದ ಹೂ ಕಾಯಿಯಾಗಿ ಬೆಳೆಯುತ್ತಿದಂತೆ ಹೀಚುಗಳು ಬಿಸಿಲಿಗೆ ಉದುರುವುದು ಆತಂಕ ತಂದಿದೆ’ ಎಂದುರೈತ ರಮೇಶ್ ಆತಂಕ ವ್ಯಕ್ತಪಡಿಸಿದರು.</p>.<p>ರೈತ ತ್ಯಾಗರಾಜು,‘ನಾವು ಒಂದರ್ಥದಲ್ಲಿ ಪ್ರಾಕೃತಿಕ ಶಾಪಕ್ಕೆ ಒಳಗಾಗಿದ್ದೇವೆ. ನಮ್ಮಲ್ಲಿ ನೀರಾವರಿ ವ್ಯವಸ್ಥೆಯಿಲ್ಲ. ಮತ್ತೊಂದು ಕಡೆ ಮಳೆ ಬಾರದೆ ಇಳುವರಿ ಕುಸಿಯುತ್ತದೆ. ಸಿಕ್ಕ ಫಸಲಿಗೂ ಸೂಕ್ತ ಬೆಲೆ ಸಿಗಲ್ಲ’ ಎಂದು ಬೇಸರಿಸಿದರು.</p>.<p>‘ಮಾವಿನ ಬೆಳೆಯಲ್ಲಾದರೂ ಒಂದಷ್ಟು ಹಣ ಬಂದರೆ, ಸಣ್ಣ ಸಾಲಗಳನ್ನಾದರೂ ತೀರಿಸಿ, ಉತ್ತಮ ಜೀವನ ನಡೆಸುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಹೂ ಉಳಿಸಿಕೊಳ್ಳಲಿಕ್ಕೆ ಔಷಧಿಗಳನ್ನು ಸಿಂಪಡಣೆ ಮಾಡಿದ್ದೆವು. ಈಗ ಅದು ವ್ಯರ್ಥವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.</p>.<p>ರೈತ ಮಂಜುನಾಥ್,‘ತೋಟಗಳಲ್ಲಿ ಹೂ ಬಿಟ್ಟಾಗಲೇ ವ್ಯಾಪಾರಿಗಳಿಂದ ಒಂದಷ್ಟು ಹಣ ಮುಂಗಡವಾಗಿ ತಗೊಂಡಿದ್ದೇವೆ. ಈಗ ಹೀಚು ಉದುರುತ್ತಿರುವುದರಿಂದ, ‘ನಷ್ಟವಾಗುತ್ತದೆ’ ಅಂತ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ‘ಇಲ್ಲದಿದ್ದರೆ ತೋಟ ಬೇಡ’ ಅಂತಿದ್ದಾರೆ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ’ ಎಂದರು.</p>.<p>ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ,‘ಮಾವಿನ ಬೆಳೆಗೆ 25 ಡಿಗ್ರಿಯಿಂದ 28 ಡಿಗ್ರಿ ತಾಪಮಾನ ಸೂಕ್ತ. ಈ ಬಾರಿ ಬಿಸಿಲು ಜಳ ಹೆಚ್ಚಿದೆ. ಫಸಲು ಕಡಿಮೆಯಾಗಬಹುದು. ರೈತರು ಬೆಳೆವಿಮೆ ಮಾಡಿಸಿಕೊಳ್ಳುವುದು ಉತ್ತಮ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>