ಆಸ್ಪತ್ರೆಯ ಪಶುವೈದ್ಯರು ತಕ್ಷಣವೇ ಅದಕ್ಕೆ ಜೀವರಕ್ಷಕ, ನೋವು ನಿವಾರಕ ಔಷಧಿಗಳನ್ನು ನೀಡಿದ್ದಲ್ಲದೇ, ರಕ್ತಸೋರಿಕೆ ತಡೆಯುವ ಚಿಕಿತ್ಸೆಯನ್ನು ನೀಡಿದರು. ಕೃತಕ ಉಸಿರಾಟಕ್ಕೂ ವ್ಯವಸ್ಥೆ ಮಾಡಿದರು. ಚಿಪ್ಪು ಹರಿದಿದ್ದರಿಂದ ಉಂಟಾದ ಬೇಗ ಗಾಯ ವಾಸಿಯಾಗಬೇಕೆಂಬ ಉದ್ದೇಶದಿಂದ ಆಮೆ ನೀರಿನಿಂದ ಹೊರಗೆ ಇರುವಂತೆ ನೋಡಿಕೊಳ್ಳಲಾಯಿತು. ಗಾಯ ವಾಸಿಯಾದ 10 ದಿನಗಳ ಬಳಿಕ ಅದನ್ನು ಮತ್ತೆ ನೀರಿಗೆ ಬಿಡಲಾಯಿತು. ಆ ಬಳಿಕವೂ ಚಿಪ್ಪು ಸರಿಯಾಗಿ ಜೋಡಣೆ ಆಗದ ಕಾರಣ ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದರು.