ಎಸಿಬಿ ತನಿಖೆಗೆ ಸಹಕರಿಸಬೇಕು, ಅಧಿಕಾರಿಗಳು ಕೇಳಿದ ಮಾಹಿತಿ ನೀಡಬೇಕು, ಸಾಕ್ಷ್ಯ ನಾಶಪಡಿಸಲು ಯತ್ನಿಸಬಾರದು ಎಂದು ನ್ಯಾಯಾಲಯ ದೇವರಾಜ್ಗೆ ಸೂಚಿಸಿದೆ. ಟಿಡಿಆರ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಎರಡನೇ ಅಧಿಕಾರಿ ದೇವರಾಜ್. ಈ ಮೊದಲು ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಲಾಲ್ ಬಂಧಿತರಾಗಿದ್ದರು. ಅವರೂ ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.