2021–22 ನೇ ಸಾಲಿನಲ್ಲಿ ಶಾಲಾ ನಿರ್ವಹಣೆಗೆ (ಸಾದಿಲ್ವಾರು ವೆಚ್ಚ) ಅನುದಾನ ನಿಗದಿಗೊಳಿಸಿರಲಿಲ್ಲ. ಹೀಗಾಗಿ, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವಿದ್ಯುತ್ ವೆಚ್ಚ, ನೀರಿನ ವೆಚ್ಚ, ಶೌಚಾಲಯ ಸ್ವಚ್ಛತೆಯ ವೆಚ್ಚ, ಕರ್ತವ್ಯದಲ್ಲಿದ್ದಾಗ ಮೃತಪಟ್ಟ ನೌಕರರ ಶವ ಸಂಸ್ಕಾರಕ್ಕೆ ವೆಚ್ಚಕ್ಕೆ ಸಹಾಯಧನ ಹಾಗೂ ಕೋವಿಡ್ ವಾರಿಯರ್ಸ್ಗಳಾಗಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟವರಿಗೆ ಪರಿಹಾರ ನೀಡಲು ಜಿಲ್ಲಾ ಕಚೇರಿಗಳಿಂದ ಪಡೆದ ಮಾಹಿತಿಯಂತೆ ₹ 29.25 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರದಿಂದ ಅನುದಾನ ಬಿಡುಗಡೆ ಆಗಿರಲಿಲ್ಲ.