<p><strong>ಬೆಂಗಳೂರು: </strong>ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಹೊರಡಲು ಸಿದ್ಧವಾಗಿದ್ದ ವಿಮಾನ, ತಾಂತ್ರಿಕ ದೋಷದಿಂದಾಗಿ ರನ್ವೇಯಿಂದ ಪಾರ್ಕಿಂಗ್ ಜಾಗಕ್ಕೆ ಮರಳಿದ ಘಟನೆ ಭಾನುವಾರ ನಡೆದಿದೆ.</p>.<p>ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ.</p>.<p>‘ಏರ್ ಇಂಡಿಯಾ 9ಐ 517 ವಿಮಾನವು ಸಂಜೆ 6.45ಕ್ಕೆ ನಿಲ್ದಾಣ<br />ದಿಂದ ಟೇಕಾಫ್ ಆಗಬೇಕಿತ್ತು. ರಾತ್ರಿ 8.15ಕ್ಕೆ ಹೈದರಾಬಾದ್ ತಲುಪಬೇಕಿತ್ತು. ಟೇಕಾಫ್ಗಾಗಿ ರನ್ವೇಯಲ್ಲಿ ವಿಮಾನ ನಿಲ್ಲಿಸಿದ್ದಾಗ, ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ವಾಪಸು ನಿಲ್ದಾಣದ ಪಾರ್ಕಿಂಗ್ ಜಾಗಕ್ಕೆ ತಂದು ನಿಲ್ಲಿಸಲಾಯಿತು’ ಎಂದು ಮೂಲಗಳು ಹೇಳಿವೆ.</p>.<p>ವಿಮಾನದಲ್ಲಿ ಕುಳಿತಿದ್ದ ಶೋಭಾ ಕರಂದ್ಲಾಜೆ ಬಳಿ ಹೋಗಿದ್ದ ಅಧಿಕಾರಿಗಳು, 'ನಿಮಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗುವುದು. ಸದ್ಯ ವಿಮಾನದಿಂದ ಕೆಳಗೆ ಇಳಿದು, ಅತೀ ಗಣ್ಯರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಿರಿ’ ಎಂದಿದ್ದರು.</p>.<p>ವಿಮಾನದಿಂದ ಇಳಿಯಲು ಒಪ್ಪದ ಶೋಭಾ ಕರಂದ್ಲಾಜೆ, 'ವಿಮಾನದಲ್ಲಿ ಪ್ರಯಾಣಿಸುವ ಎಲ್ಲರೂ ಸಮಾನರು. ಯಾವುದೇ ತಾರತಮ್ಯ ಮಾಡಬೇಡಿ. ಎಲ್ಲರನ್ನೂ ಸುರಕ್ಷಿತವಾಗಿ ಕಳುಹಿಸಲು ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಿ. ಎಲ್ಲರೂ ಹೊರಟ ನಂತರವೇ ನಾನು ಕೊನೆಯದಾಗಿ ವಿಮಾನದಿಂದ ಇಳಿಯುವೆ' ಎಂದರು.</p>.<p>ಕೆಲ ಹೊತ್ತಿನ ನಂತರ, ಪ್ರತ್ಯೇಕ ವಿಮಾನದ ಮೂಲಕ ಪ್ರಯಾಣಿಕರನ್ನು ಹೈದಾರಾಬಾದ್ಗೆ ಕಳುಹಿಸಲಾಯಿತೆಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಹೊರಡಲು ಸಿದ್ಧವಾಗಿದ್ದ ವಿಮಾನ, ತಾಂತ್ರಿಕ ದೋಷದಿಂದಾಗಿ ರನ್ವೇಯಿಂದ ಪಾರ್ಕಿಂಗ್ ಜಾಗಕ್ಕೆ ಮರಳಿದ ಘಟನೆ ಭಾನುವಾರ ನಡೆದಿದೆ.</p>.<p>ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ.</p>.<p>‘ಏರ್ ಇಂಡಿಯಾ 9ಐ 517 ವಿಮಾನವು ಸಂಜೆ 6.45ಕ್ಕೆ ನಿಲ್ದಾಣ<br />ದಿಂದ ಟೇಕಾಫ್ ಆಗಬೇಕಿತ್ತು. ರಾತ್ರಿ 8.15ಕ್ಕೆ ಹೈದರಾಬಾದ್ ತಲುಪಬೇಕಿತ್ತು. ಟೇಕಾಫ್ಗಾಗಿ ರನ್ವೇಯಲ್ಲಿ ವಿಮಾನ ನಿಲ್ಲಿಸಿದ್ದಾಗ, ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ವಾಪಸು ನಿಲ್ದಾಣದ ಪಾರ್ಕಿಂಗ್ ಜಾಗಕ್ಕೆ ತಂದು ನಿಲ್ಲಿಸಲಾಯಿತು’ ಎಂದು ಮೂಲಗಳು ಹೇಳಿವೆ.</p>.<p>ವಿಮಾನದಲ್ಲಿ ಕುಳಿತಿದ್ದ ಶೋಭಾ ಕರಂದ್ಲಾಜೆ ಬಳಿ ಹೋಗಿದ್ದ ಅಧಿಕಾರಿಗಳು, 'ನಿಮಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗುವುದು. ಸದ್ಯ ವಿಮಾನದಿಂದ ಕೆಳಗೆ ಇಳಿದು, ಅತೀ ಗಣ್ಯರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಿರಿ’ ಎಂದಿದ್ದರು.</p>.<p>ವಿಮಾನದಿಂದ ಇಳಿಯಲು ಒಪ್ಪದ ಶೋಭಾ ಕರಂದ್ಲಾಜೆ, 'ವಿಮಾನದಲ್ಲಿ ಪ್ರಯಾಣಿಸುವ ಎಲ್ಲರೂ ಸಮಾನರು. ಯಾವುದೇ ತಾರತಮ್ಯ ಮಾಡಬೇಡಿ. ಎಲ್ಲರನ್ನೂ ಸುರಕ್ಷಿತವಾಗಿ ಕಳುಹಿಸಲು ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಿ. ಎಲ್ಲರೂ ಹೊರಟ ನಂತರವೇ ನಾನು ಕೊನೆಯದಾಗಿ ವಿಮಾನದಿಂದ ಇಳಿಯುವೆ' ಎಂದರು.</p>.<p>ಕೆಲ ಹೊತ್ತಿನ ನಂತರ, ಪ್ರತ್ಯೇಕ ವಿಮಾನದ ಮೂಲಕ ಪ್ರಯಾಣಿಕರನ್ನು ಹೈದಾರಾಬಾದ್ಗೆ ಕಳುಹಿಸಲಾಯಿತೆಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>