<p><strong>ಬೆಂಗಳೂರು:</strong> ಯಲಹಂಕ ವಲಯದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಏಳು ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ತೆರವು ಮಾಡಲಾಗಿದೆ ಎಂದು ಯಲಹಂಕ ವಲಯ ಆಯುಕ್ತ ಕರೀಗೌಡ ತಿಳಿಸಿದರು.</p>.<p>ಕೋಗಿಲು ವಾರ್ಡ್ ಮಿಟ್ಟಗಾನಹಳ್ಳಿ ವೃತ್ತದ ಬಳಿ ಸತ್ಯನಾರಾಯಣ ಅವರು ನಿರ್ಮಿಸುತ್ತಿರುವ ನಿವೇಶನ ಸಂಖ್ಯೆ 3,, ದಾಸರಹಳ್ಳಿ ವಾರ್ಡ್ ಗ್ರಾಮದ ಅರ್ಕಾವತಿ ಲೇಔಟ್ 10ನೇ ಬ್ಲಾಕ್ನಲ್ಲಿ ನಿರ್ಮಾಣ ಕಟ್ಟಡ, ದೊಡ್ಡಬೊಮ್ಮಸಂದ್ರದಲ್ಲಿ ಸುನಿಲ್ ಅವರು ನಿವೇಶನ ಖಾತಾ ಸಂಖ್ಯೆ 141/141/142/142/143/143/1ರಲ್ಲಿ, ಭದ್ರಪ್ಪ ಬಡಾವಣೆಯ ಮಾರುತಿನಗರ 5ನೇ ಅಡ್ಡರಸ್ತೆಯಲ್ಲಿ ಕಟ್ಟಡದ ವ್ಯತಿರಿಕ್ತ ಭಾಗವನ್ನು ತೆರವುಗೊಳಿಸಲಾಗಿದೆ ಎಂದರು.</p>.<p>ಎನ್ಟಿಐ ಬಡಾವಣೆಯ ಫೇಸ್ 2ರಲ್ಲಿ, ಥಣಿಸಂದ್ರ ಗ್ರಾಮದ ಅರ್ಕಾವತಿ ಬಡಾವಣೆಯ 14ನೇ ಬ್ಲಾಕ್ನಲ್ಲಿ ನಿವೇಶನ ಸಂಖ್ಯೆ 2, 81/3ಎನಲ್ಲಿ ಮೊಹಮ್ಮದ್ ಫೈಸಲ್ ಸಬ್ ಸೈಯದ್ ಅಬ್ದುಲ್ ರವುಫ್ ಜಿ.ಪಿ.ಎ ಹೋಲ್ಡರ್ ಮೊಹಮ್ಮದ್ ಗೌಸ್ ಅಬ್ದುಲ್ ಅವರ ಕಟ್ಟಡ, ನ್ಯಾಯಾಂಗ ಬಡಾವಣೆಯಲ್ಲಿ ಪಿಐಡಿ ನಂ. 41/41/103ರಲ್ಲಿ ಕೃಷ್ಣಮೂರ್ತಿ ಅವರು ನಿರ್ಮಿಸುತ್ತಿರುವ ಕಟ್ಟಡದ ವ್ಯತಿರಿಕ್ತ ಭಾಗವನ್ನು ತೆರವುಗೊಳಿಸಲಾಯಿತು ಎಂದು ಕರೀಗೌಡ ಮಾಹಿತಿ ನೀಡಿದರು.</p>.<p>ಯಲಹಂಕ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಗೂ ನಕ್ಷೆ ಉಲ್ಲಂಘಿಸಿ ವ್ಯತಿರಿಕ್ತವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಈ ವಾರದಲ್ಲಿ 50 ಕಟ್ಟಡಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕರೀಗೌಡ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಯಲಹಂಕ ವಲಯದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಏಳು ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ತೆರವು ಮಾಡಲಾಗಿದೆ ಎಂದು ಯಲಹಂಕ ವಲಯ ಆಯುಕ್ತ ಕರೀಗೌಡ ತಿಳಿಸಿದರು.</p>.<p>ಕೋಗಿಲು ವಾರ್ಡ್ ಮಿಟ್ಟಗಾನಹಳ್ಳಿ ವೃತ್ತದ ಬಳಿ ಸತ್ಯನಾರಾಯಣ ಅವರು ನಿರ್ಮಿಸುತ್ತಿರುವ ನಿವೇಶನ ಸಂಖ್ಯೆ 3,, ದಾಸರಹಳ್ಳಿ ವಾರ್ಡ್ ಗ್ರಾಮದ ಅರ್ಕಾವತಿ ಲೇಔಟ್ 10ನೇ ಬ್ಲಾಕ್ನಲ್ಲಿ ನಿರ್ಮಾಣ ಕಟ್ಟಡ, ದೊಡ್ಡಬೊಮ್ಮಸಂದ್ರದಲ್ಲಿ ಸುನಿಲ್ ಅವರು ನಿವೇಶನ ಖಾತಾ ಸಂಖ್ಯೆ 141/141/142/142/143/143/1ರಲ್ಲಿ, ಭದ್ರಪ್ಪ ಬಡಾವಣೆಯ ಮಾರುತಿನಗರ 5ನೇ ಅಡ್ಡರಸ್ತೆಯಲ್ಲಿ ಕಟ್ಟಡದ ವ್ಯತಿರಿಕ್ತ ಭಾಗವನ್ನು ತೆರವುಗೊಳಿಸಲಾಗಿದೆ ಎಂದರು.</p>.<p>ಎನ್ಟಿಐ ಬಡಾವಣೆಯ ಫೇಸ್ 2ರಲ್ಲಿ, ಥಣಿಸಂದ್ರ ಗ್ರಾಮದ ಅರ್ಕಾವತಿ ಬಡಾವಣೆಯ 14ನೇ ಬ್ಲಾಕ್ನಲ್ಲಿ ನಿವೇಶನ ಸಂಖ್ಯೆ 2, 81/3ಎನಲ್ಲಿ ಮೊಹಮ್ಮದ್ ಫೈಸಲ್ ಸಬ್ ಸೈಯದ್ ಅಬ್ದುಲ್ ರವುಫ್ ಜಿ.ಪಿ.ಎ ಹೋಲ್ಡರ್ ಮೊಹಮ್ಮದ್ ಗೌಸ್ ಅಬ್ದುಲ್ ಅವರ ಕಟ್ಟಡ, ನ್ಯಾಯಾಂಗ ಬಡಾವಣೆಯಲ್ಲಿ ಪಿಐಡಿ ನಂ. 41/41/103ರಲ್ಲಿ ಕೃಷ್ಣಮೂರ್ತಿ ಅವರು ನಿರ್ಮಿಸುತ್ತಿರುವ ಕಟ್ಟಡದ ವ್ಯತಿರಿಕ್ತ ಭಾಗವನ್ನು ತೆರವುಗೊಳಿಸಲಾಯಿತು ಎಂದು ಕರೀಗೌಡ ಮಾಹಿತಿ ನೀಡಿದರು.</p>.<p>ಯಲಹಂಕ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಗೂ ನಕ್ಷೆ ಉಲ್ಲಂಘಿಸಿ ವ್ಯತಿರಿಕ್ತವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಈ ವಾರದಲ್ಲಿ 50 ಕಟ್ಟಡಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕರೀಗೌಡ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>