‘ವಿಪತ್ತು ನಿರ್ವಹಣಾ ಕೇಂದ್ರ ಸ್ಥಾಪನೆ ಮಾಡಿ ತರಬೇತಿ ಹೊಂದಿದ ಸಿಬ್ಬಂದಿ ನಿಯೋಜಿಸಬೇಕು. ಬಿದ್ದ ಮರಗಳನ್ನು ತುಂಡರಿಸಲು ವಿದ್ಯುತ್ ಚಾಲಿತ ಗರಗಸ, ಕೊಡಲಿ, ಹಗ್ಗ, ಏಣಿ, ಬ್ಯಾಟರಿ, ದೂರವಾಣಿ ಸೇರಿ ಇತರ ಸಾಮಾಗ್ರಿಗಳನ್ನು ವಿಪತ್ತು ನಿರ್ವಹಣಾ ಕೇಂದ್ರದಲ್ಲಿ ಸಂಗ್ರಹಿಸಬೇಕು. ಕೆರೆಗಳಿಗೆ ನೀರು ಸರಾಗವಾಗಿ ಹರಿದು ಹೋಗಲು ನೀರುಗಾಲುವೆಗಳನ್ನು ಸ್ವಚ್ಛಗೊಳಿಸಬೇಕು’ ಎಂದು ನಿರ್ದೇಶನ ನೀಡಿದೆ.