<p><strong>ಬೆಂಗಳೂರು:</strong>‘ನವ್ಯಕಾವ್ಯದ ಸೂಕ್ಷ್ಮತೆ ಅರಿಯಬೇಕಾದರೆ ವಿ.ಕೃ.ಗೋಕಾಕರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.</p>.<p>‘ವಿ.ಕೃ. ಗೋಕಾಕ ಅವರ ಜೀವನ ಮತ್ತು ಸಾಹಿತ್ಯ–ಸಮಕಾಲೀನ ಸ್ಪಂದನೆ’ ಕುರಿತು ನಗರದಲ್ಲಿ ಮಂಗಳವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,‘ಗೋಕಾಕರ ಸಾಹಿತ್ಯ ಕುರಿತಾದ ವಿಚಾರ ಸಂಕಿರಣಗಳು ರಾಷ್ಟ್ರಮಟ್ಟದಲ್ಲಿ ನಡೆಯಬೇಕು. ಇದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಎಲ್ಲ ನೆರವು ನೀಡಲಿದೆ’ ಎಂದರು.</p>.<p>‘ಕನ್ನಡ ಸಾಹಿತ್ಯವನ್ನು ಹಲವರು ಶ್ರೀಮಂತಗೊಳಿಸಿದ್ದಾರೆ. ಆದರೆ, ಕನ್ನಡದ ಸಾಹಿತಿಗಳಿಗೆ ಪಾಶ್ಚಿಮಾತ್ಯರ ಇಂಗ್ಲಿಷ್ ಸಾಹಿತ್ಯವನ್ನು ವಿಮರ್ಶಿಸುವ ಶಕ್ತಿ ಇದೆ ಎಂದು ತೋರಿಸಿಕೊಟ್ಟವರು ಗೋಕಾಕರು’ ಎಂದು ಅವರು ಹೇಳಿದರು.</p>.<p>ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಯುವ ಸಾಹಿತಿಗಳು ಹಳೆಯ ತಲೆಮಾರಿನ ಸಾಹಿತ್ಯ ಓದಿಕೊಂಡು ಹೊಸತನವನ್ನು ಕಟ್ಟಬೇಕು. ಎರಡೂ ಪ್ರಕಾರಗಳನ್ನು ಗಮನಿಸಿ, ಹೊಸ ಪರಂಪರೆಯ ಕೃತಿಗಳನ್ನು ರಚಿಸಬೇಕು’ ಎಂದು ಅವರು ಸಲಹೆ ನೀಡಿದರು.</p>.<p>‘ಗೋಕಾಕರ ಸಾಹಿತ್ಯದಲ್ಲಿ ಪಾಶ್ಚಿಮಾತ್ಯ ಮತ್ತು ಭಾರತೀಯತೆಯಂತಹ ಎರಡೂ ಲಕ್ಷಣಗಳನ್ನು ಕಾಣಬಹುದು’ ಎಂದರು.</p>.<p>‘ಗೋಕಾಕರ ವಿಮರ್ಶಾ ಪರಿಕಲ್ಪನೆಗಳು’ ಕುರಿತು ಮಾತನಾಡಿದ ವಿಮರ್ಶಕ ವಿಕ್ರಮ ವಿಸಾಜಿ, ‘ತಮ್ಮ 18ನೇ ವಯಸ್ಸಿನಿಂದಲೇ ಗೋಕಾಕ ಅವರು ಕೃತಿಗಳ ವಿಮರ್ಶೆ ಮಾಡಲು ಆರಂಭಿಸಿದರು. ಸುಮಾರು ಆರು ದಶಕಗಳವರೆಗೆ ಅವರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು’ ಎಂದರು.</p>.<p>‘ವಿಮರ್ಶೆಯಲ್ಲಿ, ಸಾಹಿತ್ಯದಲ್ಲಿ ಸಮನ್ವಯ ದೃಷ್ಟಿಕೋನ ಇರಬೇಕು ಎಂದು ಅವರು ಹೇಳುತ್ತಿದ್ದರು. ಮುಗ್ಧತೆ ಮತ್ತು ಮರುಪರಿಶೀಲನೆಯ ಗುಣ ಅವರಲ್ಲಿತ್ತು. ಕೃತಿಗಳಲ್ಲಿ ಕಲಾಪ್ರಜ್ಞೆ, ಅಧ್ಯಾತ್ಮ ಪ್ರಜ್ಞೆ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಅವರು ಹುಡುಕುತ್ತಿದ್ದರು’ ಎಂದರು.</p>.<p>**</p>.<p><strong>ಕೃತಿ:</strong> ನವ್ಯತೆ<br /><strong>ಲೇಖಕರು:</strong> ವಿ.ಕೃ. ಗೋಕಾಕ್<br /><strong>ಪ್ರಕಾಶನ:</strong> ಅಭಿನವ<br /><strong>ಬೆಲೆ:</strong> ₹175<br /><strong>ಪುಟಗಳು:</strong> 160</p>.<p>**<br /><strong>ಕೃತಿ:</strong> ಸಮುದ್ರದಾಚೆಯಿಂದ<br /><strong>ಲೇಖಕರು:</strong> ವಿ.ಕೃ. ಗೋಕಾಕ್<br /><strong>ಪ್ರಕಾಶನ:</strong> ಅಭಿನವ<br /><strong>ಬೆಲೆ:</strong> ₹200<br /><strong>ಪುಟಗಳು:</strong> 228</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>‘ನವ್ಯಕಾವ್ಯದ ಸೂಕ್ಷ್ಮತೆ ಅರಿಯಬೇಕಾದರೆ ವಿ.ಕೃ.ಗೋಕಾಕರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.</p>.<p>‘ವಿ.ಕೃ. ಗೋಕಾಕ ಅವರ ಜೀವನ ಮತ್ತು ಸಾಹಿತ್ಯ–ಸಮಕಾಲೀನ ಸ್ಪಂದನೆ’ ಕುರಿತು ನಗರದಲ್ಲಿ ಮಂಗಳವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,‘ಗೋಕಾಕರ ಸಾಹಿತ್ಯ ಕುರಿತಾದ ವಿಚಾರ ಸಂಕಿರಣಗಳು ರಾಷ್ಟ್ರಮಟ್ಟದಲ್ಲಿ ನಡೆಯಬೇಕು. ಇದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಎಲ್ಲ ನೆರವು ನೀಡಲಿದೆ’ ಎಂದರು.</p>.<p>‘ಕನ್ನಡ ಸಾಹಿತ್ಯವನ್ನು ಹಲವರು ಶ್ರೀಮಂತಗೊಳಿಸಿದ್ದಾರೆ. ಆದರೆ, ಕನ್ನಡದ ಸಾಹಿತಿಗಳಿಗೆ ಪಾಶ್ಚಿಮಾತ್ಯರ ಇಂಗ್ಲಿಷ್ ಸಾಹಿತ್ಯವನ್ನು ವಿಮರ್ಶಿಸುವ ಶಕ್ತಿ ಇದೆ ಎಂದು ತೋರಿಸಿಕೊಟ್ಟವರು ಗೋಕಾಕರು’ ಎಂದು ಅವರು ಹೇಳಿದರು.</p>.<p>ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಯುವ ಸಾಹಿತಿಗಳು ಹಳೆಯ ತಲೆಮಾರಿನ ಸಾಹಿತ್ಯ ಓದಿಕೊಂಡು ಹೊಸತನವನ್ನು ಕಟ್ಟಬೇಕು. ಎರಡೂ ಪ್ರಕಾರಗಳನ್ನು ಗಮನಿಸಿ, ಹೊಸ ಪರಂಪರೆಯ ಕೃತಿಗಳನ್ನು ರಚಿಸಬೇಕು’ ಎಂದು ಅವರು ಸಲಹೆ ನೀಡಿದರು.</p>.<p>‘ಗೋಕಾಕರ ಸಾಹಿತ್ಯದಲ್ಲಿ ಪಾಶ್ಚಿಮಾತ್ಯ ಮತ್ತು ಭಾರತೀಯತೆಯಂತಹ ಎರಡೂ ಲಕ್ಷಣಗಳನ್ನು ಕಾಣಬಹುದು’ ಎಂದರು.</p>.<p>‘ಗೋಕಾಕರ ವಿಮರ್ಶಾ ಪರಿಕಲ್ಪನೆಗಳು’ ಕುರಿತು ಮಾತನಾಡಿದ ವಿಮರ್ಶಕ ವಿಕ್ರಮ ವಿಸಾಜಿ, ‘ತಮ್ಮ 18ನೇ ವಯಸ್ಸಿನಿಂದಲೇ ಗೋಕಾಕ ಅವರು ಕೃತಿಗಳ ವಿಮರ್ಶೆ ಮಾಡಲು ಆರಂಭಿಸಿದರು. ಸುಮಾರು ಆರು ದಶಕಗಳವರೆಗೆ ಅವರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು’ ಎಂದರು.</p>.<p>‘ವಿಮರ್ಶೆಯಲ್ಲಿ, ಸಾಹಿತ್ಯದಲ್ಲಿ ಸಮನ್ವಯ ದೃಷ್ಟಿಕೋನ ಇರಬೇಕು ಎಂದು ಅವರು ಹೇಳುತ್ತಿದ್ದರು. ಮುಗ್ಧತೆ ಮತ್ತು ಮರುಪರಿಶೀಲನೆಯ ಗುಣ ಅವರಲ್ಲಿತ್ತು. ಕೃತಿಗಳಲ್ಲಿ ಕಲಾಪ್ರಜ್ಞೆ, ಅಧ್ಯಾತ್ಮ ಪ್ರಜ್ಞೆ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಅವರು ಹುಡುಕುತ್ತಿದ್ದರು’ ಎಂದರು.</p>.<p>**</p>.<p><strong>ಕೃತಿ:</strong> ನವ್ಯತೆ<br /><strong>ಲೇಖಕರು:</strong> ವಿ.ಕೃ. ಗೋಕಾಕ್<br /><strong>ಪ್ರಕಾಶನ:</strong> ಅಭಿನವ<br /><strong>ಬೆಲೆ:</strong> ₹175<br /><strong>ಪುಟಗಳು:</strong> 160</p>.<p>**<br /><strong>ಕೃತಿ:</strong> ಸಮುದ್ರದಾಚೆಯಿಂದ<br /><strong>ಲೇಖಕರು:</strong> ವಿ.ಕೃ. ಗೋಕಾಕ್<br /><strong>ಪ್ರಕಾಶನ:</strong> ಅಭಿನವ<br /><strong>ಬೆಲೆ:</strong> ₹200<br /><strong>ಪುಟಗಳು:</strong> 228</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>